<p>ವೆಬ್ ಸರಣಿಗಳತ್ತ ನಟ, ನಟಿಯರು ಇತ್ತೀಚೆಗೆ ಮುಖ ಮಾಡುತ್ತಿರುವುದು ಸರ್ವೇ ಸಾಮಾನ್ಯ. ಖ್ಯಾತ ನಿರ್ದೇಶಕರು ಕೂಡ ವೆಬ್ ಸರಣಿಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಲಿವುಡ್ನಲ್ಲಿ ಇತ್ತೀಚೆಗೆ ಒಂಬತ್ತು ನಿರ್ದೇಶಕರು ವೆಬ್ ಸರಣಿ ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ. ಒಂಬತ್ತು ಎಪಿಸೋಡ್ಗಳಿಗೆ ತಲಾ ಒಬ್ಬ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಈ ಪಟ್ಟಿಯಲ್ಲಿ ಮಣಿರತ್ನಂ ಕೂಡ ಇರುವುದು ವಿಶೇಷ.</p>.<p>ಮಣಿರತ್ನಂ ನಿರ್ದೇಶಿಸಲಿರುವ ಎಪಿಸೋಡ್ನಲ್ಲಿ ನಟ ಸೂರ್ಯ ಅಭಿನಯಿಸಿದ್ದಾರೆ ಎಂಬ ಹೊಸ ಸುದ್ದಿ ಕಾಲಿವುಡ್ ಪಡಸಾಲೆಯಿಂದ ಹೊರಬಿದ್ದಿದೆ. ಅಂದಹಾಗೆ ಇದು ಸೂರ್ಯ ಅವರ ಮೊದಲ ವೆಬ್ ಸರಣಿ ಕೂಡ ಹೌದು. ಹಾಗಾಗಿ, ಅವರ ಅಭಿಮಾನಿಗಳಿಗೂ ಖುಷಿ ತಂದಿದೆಯಂತೆ.</p>.<p>ಆದರೆ, ಯಾವ ವಿಷಯ ಆಧರಿಸಿ ಈ ಸರಣಿ ನಿರ್ಮಾಣಗೊಳ್ಳಲಿದೆ ಎಂಬ ಸುದ್ದಿ ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಅರವಿಂದ ಸ್ವಾಮಿ, ಸಿದ್ಧಾರ್ಥ ಸೇರಿದಂತೆ ತಮಿಳಿನ ಹಲವು ನಟರು ಈ ಸರಣಿಯ ಭಾಗವಾಗಲಿದ್ದಾರಂತೆ.</p>.<p>ಪ್ರಸ್ತುತ ಸೂರ್ಯ ‘ಸೂರರೈ ಪೊಟ್ಟರು’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಜಿ.ಆರ್. ಗೋಪಿನಾಥ್ ಅವರ ಏರ್ ಡೆಕ್ಕನ್ ಸಂಸ್ಥೆಯ ಸಂಸ್ಥಾಪನಾ ಅವಧಿಯಲ್ಲಿ ನಡೆದ ಘಟನೆಗಳೇಈ ಸಿನಿಮಾಕ್ಕೆ ಪ್ರೇರಣೆ. ಇದಕ್ಕೆ ಸುಧಾ ಕೊಂಗಾರ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡದಲ್ಲಿಯೂ ಈ ಸಿನಿಮಾ ಡಬ್ ಆಗಿ ಬಿಡುಗಡೆಯಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೆಬ್ ಸರಣಿಗಳತ್ತ ನಟ, ನಟಿಯರು ಇತ್ತೀಚೆಗೆ ಮುಖ ಮಾಡುತ್ತಿರುವುದು ಸರ್ವೇ ಸಾಮಾನ್ಯ. ಖ್ಯಾತ ನಿರ್ದೇಶಕರು ಕೂಡ ವೆಬ್ ಸರಣಿಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಲಿವುಡ್ನಲ್ಲಿ ಇತ್ತೀಚೆಗೆ ಒಂಬತ್ತು ನಿರ್ದೇಶಕರು ವೆಬ್ ಸರಣಿ ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ. ಒಂಬತ್ತು ಎಪಿಸೋಡ್ಗಳಿಗೆ ತಲಾ ಒಬ್ಬ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಈ ಪಟ್ಟಿಯಲ್ಲಿ ಮಣಿರತ್ನಂ ಕೂಡ ಇರುವುದು ವಿಶೇಷ.</p>.<p>ಮಣಿರತ್ನಂ ನಿರ್ದೇಶಿಸಲಿರುವ ಎಪಿಸೋಡ್ನಲ್ಲಿ ನಟ ಸೂರ್ಯ ಅಭಿನಯಿಸಿದ್ದಾರೆ ಎಂಬ ಹೊಸ ಸುದ್ದಿ ಕಾಲಿವುಡ್ ಪಡಸಾಲೆಯಿಂದ ಹೊರಬಿದ್ದಿದೆ. ಅಂದಹಾಗೆ ಇದು ಸೂರ್ಯ ಅವರ ಮೊದಲ ವೆಬ್ ಸರಣಿ ಕೂಡ ಹೌದು. ಹಾಗಾಗಿ, ಅವರ ಅಭಿಮಾನಿಗಳಿಗೂ ಖುಷಿ ತಂದಿದೆಯಂತೆ.</p>.<p>ಆದರೆ, ಯಾವ ವಿಷಯ ಆಧರಿಸಿ ಈ ಸರಣಿ ನಿರ್ಮಾಣಗೊಳ್ಳಲಿದೆ ಎಂಬ ಸುದ್ದಿ ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಅರವಿಂದ ಸ್ವಾಮಿ, ಸಿದ್ಧಾರ್ಥ ಸೇರಿದಂತೆ ತಮಿಳಿನ ಹಲವು ನಟರು ಈ ಸರಣಿಯ ಭಾಗವಾಗಲಿದ್ದಾರಂತೆ.</p>.<p>ಪ್ರಸ್ತುತ ಸೂರ್ಯ ‘ಸೂರರೈ ಪೊಟ್ಟರು’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಜಿ.ಆರ್. ಗೋಪಿನಾಥ್ ಅವರ ಏರ್ ಡೆಕ್ಕನ್ ಸಂಸ್ಥೆಯ ಸಂಸ್ಥಾಪನಾ ಅವಧಿಯಲ್ಲಿ ನಡೆದ ಘಟನೆಗಳೇಈ ಸಿನಿಮಾಕ್ಕೆ ಪ್ರೇರಣೆ. ಇದಕ್ಕೆ ಸುಧಾ ಕೊಂಗಾರ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡದಲ್ಲಿಯೂ ಈ ಸಿನಿಮಾ ಡಬ್ ಆಗಿ ಬಿಡುಗಡೆಯಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>