<p>‘ಅಂಬಿ ನಿಂಗ್ ವಯಸ್ಸಾಯ್ತೋ!’ ಚಿತ್ರ ಚಂದನವನದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದು ತಮಿಳಿನ ‘ಪವರ್ ಪಾಂಡಿ’ ಚಿತ್ರದ ಕನ್ನಡ ಅವತರಣಿಕೆ. ಚಿತ್ರೀಕರಣ ಪೂರ್ಣಗೊಳಿಸಿ ಮಾಧ್ಯಮದವರ ಮುಂದೆ ಮೊದಲ ಬಾರಿಗೆ ಚಿತ್ರತಂಡ ಹಾಜರಾಗಿತ್ತು.</p>.<p>‘ನಾನು ₹ 500 ಸಂಭಾವನೆ ಪಡೆದು ಖಳನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟೆ. ನಂತರ ಪೋಷಕ ನಟ, ನಾಯಕ ನಟ, ಜನನಾಯಕನಾದೆ. ಗುರುದತ್ ಗಾಣಿಗ ವಯಸ್ಸಿನಲ್ಲಿ ಚಿಕ್ಕವನಾಗಿದ್ದಾನೆ. ಅವನಿಗೂ ಉಜ್ವಲ ಭವಿಷ್ಯವಿದೆ’ ಎಂದರು ಅಂಬರೀಷ್. ಅವರು ಈ ಮಾತು ಹೇಳಲು ಕಾರಣವೂ ಇತ್ತು. ಗುರುದತ್ ವಯಸ್ಸು 26. ಅವರು ನಟ ಸುದೀಪ್ ಗರಡಿಯಲ್ಲಿ ಪಳಗಿದ್ದಾರೆ. ಗುರುದತ್ ಅವರನ್ನು ಮೊದಲ ಬಾರಿಗೆ ನೋಡಿದ ಅಂಬರೀಷ್ ಅವರಿಗೆ, ‘ಈ ಹುಡುಗ ನನ್ನ ಸಿನಿಮಾ ನಿರ್ದೇಶನ ಮಾಡುತ್ತಾನೆಯೇ’ ಎಂದು ಪ್ರಶ್ನೆ ಕಾಡಿತ್ತಂತೆ.</p>.<p>‘ಮೂರ್ತಿ ಚಿಕ್ಕದಾದರೂ ಅದರ ಕೀರ್ತಿ ದೊಡ್ಡದು. ಹಾಗಾಗಿ, ಒಪ್ಪಿಕೊಂಡೆ. ಸೆಟ್ನಲ್ಲಿ ಅವನ ಕೌಶಲವನ್ನು ಕಣ್ಣಾರೆ ನೋಡಿದೆ. ಚೆನ್ನಾಗಿ ನಿರ್ದೇಶನ ಮಾಡುತ್ತಾನೆ’ ಎಂದು ಮೆಚ್ಚುಗೆಯ ಪ್ರಮಾಣಪತ್ರ ನೀಡಿದರು ಅಂಬರೀಷ್.</p>.<p>‘ಈ ಚಿತ್ರ ನಿರ್ಮಾಣದ ಹಿಂದೆ ಸುದೀಪ್ ಶ್ರಮ ಹಿರಿದು. ನಾವು ಅವನಷ್ಟು ಕೆಲಸ ಮಾಡಲು ಸಾಧ್ಯವಿಲ್ಲ. ನನಗೆ ವಯಸ್ಸಾಗಿದೆಯೋ, ಇಲ್ಲವೋ ಎನ್ನುವುದನ್ನು ಚಿತ್ರ ನೋಡಿ ನೀವೆ ಹೇಳಿ’ ಎಂದರು.</p>.<p>ನಿರ್ದೇಶಕ ಗುರುದತ್ ಗಾಣಿಗ ಅವರದು ಮೂಲತಃ ಕುಂದಾಪುರ. ‘ಸಿನಿಮಾದ ಮೇಲಿನ ಪ್ರೀತಿಯಿಂದ ಬೆಂಗಳೂರಿಗೆ ಬಂದೆ. ಸುದೀಪ್ ಅವರ ಬಳಿ ಸಿನಿಮಾದ ಒಳನೋಟಗಳನ್ನು ಕಲಿತೆ. ದೊಡ್ಡ ಚಿತ್ರಕ್ಕೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದಾರೆ. ಚಿತ್ರದ ನಿರೂಪಣೆಯು ಮೂಲ ಚಿತ್ರಕ್ಕಿಂತ ಭಿನ್ನವಾಗಿದೆ’ ಎಂದು ವಿವರಿಸಿದರು.</p>.<p>‘ಆಗಸ್ಟ್ 10ರಂದು ಆಡಿಯೊ ಬಿಡುಗಡೆಗೆ ಸಿದ್ಧತೆ ನಡೆದಿದೆ. ಕನ್ನಡದ ಎಲ್ಲ ಸ್ಟಾರ್ ನಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ನಟ ರಜನೀಕಾಂತ್ ಅವರಿಗೂ ಆಹ್ವಾನ ನೀಡುತ್ತೇವೆ. ಬೆಂಗಳೂರು, ಕೇರಳ, ಊಟಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈ ತಿಂಗಳಾಂತ್ಯಕ್ಕೆ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ’ ಎಂದರು ನಿರ್ಮಾಪಕ ಜಾಕ್ ಮಂಜು.</p>.<p>ಇಪ್ಪತ್ತೆರಡು ವರ್ಷದ ಹಿಂದೆ ಸುದೀಪ್ ‘ಬ್ರಹ್ಮ’ ಚಿತ್ರದಲ್ಲಿ ನಟಿಸಿದ್ದರು. ಅದರ ಸುದ್ದಿಗೋಷ್ಠಿ ನಡೆದಿದ್ದು ಏಟ್ರಿಯಾ ಹೋಟೆಲ್ನಲ್ಲಿಯೇ. ಕಾರಣಾಂತರಗಳಿಂದ ಚಿತ್ರ ಅರ್ಧಕ್ಕೆ ಸ್ಥಗಿತಗೊಂಡಿತ್ತು. ‘ಬ್ರಹ್ಮ ಚಿತ್ರದ ಸುದ್ದಿಗೋಷ್ಠಿಯು ಇಲ್ಲಿಯೇ ನಡೆದಿತ್ತು. ಕಾಕತಾಳೀಯ ಎಂಬಂತೆ ಇಪ್ಪತ್ತೆರಡು ವರ್ಷದ ನಂತರ ಈ ಹಾಲ್ನಲ್ಲಿ ಮತ್ತೆ ಪತ್ರಿಕಾಗೋಷ್ಠಿಗೆ ಬಂದಿದ್ದೇನೆ’ ಎಂದು ಸುದೀಪ್ ಹಳೆಯ ನೆನಪಿಗೆ ಜಾರಿದರು.</p>.<p>‘ಅಂಬರೀಷ್ ಅವರ ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಶೂಟಿಂಗ್ ಪೂರ್ಣಗೊಳಿಸಲಾಗಿದೆ. ಅವರ ಹದಿಹರೆಯದಲ್ಲಿನ ಪ್ರೀತಿಯ ತುಣುಕುಗಳು ಚಿತ್ರದಲ್ಲಿವೆ. ಮೂವತ್ತೈದು ನಿಮಿಷಗಳ ಕಾಲದ ಈ ದೃಶ್ಯಾವಳಿಯಲ್ಲಿ ನಾನು ನಟಿಸಿದ್ದೇನೆ. ನನಗೆ ಜೋಡಿಯಾಗಿ ಶ್ರುತಿ ಹರಿಹರನ್ ಇದ್ದಾರೆ. ಸುಹಾಸಿನಿ ಅವರ ಅಭಿನಯವೂ ಮನಸೆಳೆಯುತ್ತದೆ. ಅಂಬರೀಷ್ ಅವರನ್ನು ಅನುಕರಿಸುವುದು ಕಷ್ಟಸಾಧ್ಯ. ಅರ್ಜುನ್ ಜನ್ಯ ಒಳ್ಳೆಯ ಸಂಗೀತ ನೀಡಿದ್ದಾರೆ’ ಎಂದು ವಿವರಿಸಿದರು.</p>.<p>ಜೆಬಿನ್ ಜೇಕಬ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸಂಕಲನ ಕಿರಣ್ ಅವರದ್ದು. ರವಿವರ್ಮ ಮತ್ತು ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅಂಬಿ ನಿಂಗ್ ವಯಸ್ಸಾಯ್ತೋ!’ ಚಿತ್ರ ಚಂದನವನದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದು ತಮಿಳಿನ ‘ಪವರ್ ಪಾಂಡಿ’ ಚಿತ್ರದ ಕನ್ನಡ ಅವತರಣಿಕೆ. ಚಿತ್ರೀಕರಣ ಪೂರ್ಣಗೊಳಿಸಿ ಮಾಧ್ಯಮದವರ ಮುಂದೆ ಮೊದಲ ಬಾರಿಗೆ ಚಿತ್ರತಂಡ ಹಾಜರಾಗಿತ್ತು.</p>.<p>‘ನಾನು ₹ 500 ಸಂಭಾವನೆ ಪಡೆದು ಖಳನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟೆ. ನಂತರ ಪೋಷಕ ನಟ, ನಾಯಕ ನಟ, ಜನನಾಯಕನಾದೆ. ಗುರುದತ್ ಗಾಣಿಗ ವಯಸ್ಸಿನಲ್ಲಿ ಚಿಕ್ಕವನಾಗಿದ್ದಾನೆ. ಅವನಿಗೂ ಉಜ್ವಲ ಭವಿಷ್ಯವಿದೆ’ ಎಂದರು ಅಂಬರೀಷ್. ಅವರು ಈ ಮಾತು ಹೇಳಲು ಕಾರಣವೂ ಇತ್ತು. ಗುರುದತ್ ವಯಸ್ಸು 26. ಅವರು ನಟ ಸುದೀಪ್ ಗರಡಿಯಲ್ಲಿ ಪಳಗಿದ್ದಾರೆ. ಗುರುದತ್ ಅವರನ್ನು ಮೊದಲ ಬಾರಿಗೆ ನೋಡಿದ ಅಂಬರೀಷ್ ಅವರಿಗೆ, ‘ಈ ಹುಡುಗ ನನ್ನ ಸಿನಿಮಾ ನಿರ್ದೇಶನ ಮಾಡುತ್ತಾನೆಯೇ’ ಎಂದು ಪ್ರಶ್ನೆ ಕಾಡಿತ್ತಂತೆ.</p>.<p>‘ಮೂರ್ತಿ ಚಿಕ್ಕದಾದರೂ ಅದರ ಕೀರ್ತಿ ದೊಡ್ಡದು. ಹಾಗಾಗಿ, ಒಪ್ಪಿಕೊಂಡೆ. ಸೆಟ್ನಲ್ಲಿ ಅವನ ಕೌಶಲವನ್ನು ಕಣ್ಣಾರೆ ನೋಡಿದೆ. ಚೆನ್ನಾಗಿ ನಿರ್ದೇಶನ ಮಾಡುತ್ತಾನೆ’ ಎಂದು ಮೆಚ್ಚುಗೆಯ ಪ್ರಮಾಣಪತ್ರ ನೀಡಿದರು ಅಂಬರೀಷ್.</p>.<p>‘ಈ ಚಿತ್ರ ನಿರ್ಮಾಣದ ಹಿಂದೆ ಸುದೀಪ್ ಶ್ರಮ ಹಿರಿದು. ನಾವು ಅವನಷ್ಟು ಕೆಲಸ ಮಾಡಲು ಸಾಧ್ಯವಿಲ್ಲ. ನನಗೆ ವಯಸ್ಸಾಗಿದೆಯೋ, ಇಲ್ಲವೋ ಎನ್ನುವುದನ್ನು ಚಿತ್ರ ನೋಡಿ ನೀವೆ ಹೇಳಿ’ ಎಂದರು.</p>.<p>ನಿರ್ದೇಶಕ ಗುರುದತ್ ಗಾಣಿಗ ಅವರದು ಮೂಲತಃ ಕುಂದಾಪುರ. ‘ಸಿನಿಮಾದ ಮೇಲಿನ ಪ್ರೀತಿಯಿಂದ ಬೆಂಗಳೂರಿಗೆ ಬಂದೆ. ಸುದೀಪ್ ಅವರ ಬಳಿ ಸಿನಿಮಾದ ಒಳನೋಟಗಳನ್ನು ಕಲಿತೆ. ದೊಡ್ಡ ಚಿತ್ರಕ್ಕೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದಾರೆ. ಚಿತ್ರದ ನಿರೂಪಣೆಯು ಮೂಲ ಚಿತ್ರಕ್ಕಿಂತ ಭಿನ್ನವಾಗಿದೆ’ ಎಂದು ವಿವರಿಸಿದರು.</p>.<p>‘ಆಗಸ್ಟ್ 10ರಂದು ಆಡಿಯೊ ಬಿಡುಗಡೆಗೆ ಸಿದ್ಧತೆ ನಡೆದಿದೆ. ಕನ್ನಡದ ಎಲ್ಲ ಸ್ಟಾರ್ ನಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ನಟ ರಜನೀಕಾಂತ್ ಅವರಿಗೂ ಆಹ್ವಾನ ನೀಡುತ್ತೇವೆ. ಬೆಂಗಳೂರು, ಕೇರಳ, ಊಟಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈ ತಿಂಗಳಾಂತ್ಯಕ್ಕೆ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ’ ಎಂದರು ನಿರ್ಮಾಪಕ ಜಾಕ್ ಮಂಜು.</p>.<p>ಇಪ್ಪತ್ತೆರಡು ವರ್ಷದ ಹಿಂದೆ ಸುದೀಪ್ ‘ಬ್ರಹ್ಮ’ ಚಿತ್ರದಲ್ಲಿ ನಟಿಸಿದ್ದರು. ಅದರ ಸುದ್ದಿಗೋಷ್ಠಿ ನಡೆದಿದ್ದು ಏಟ್ರಿಯಾ ಹೋಟೆಲ್ನಲ್ಲಿಯೇ. ಕಾರಣಾಂತರಗಳಿಂದ ಚಿತ್ರ ಅರ್ಧಕ್ಕೆ ಸ್ಥಗಿತಗೊಂಡಿತ್ತು. ‘ಬ್ರಹ್ಮ ಚಿತ್ರದ ಸುದ್ದಿಗೋಷ್ಠಿಯು ಇಲ್ಲಿಯೇ ನಡೆದಿತ್ತು. ಕಾಕತಾಳೀಯ ಎಂಬಂತೆ ಇಪ್ಪತ್ತೆರಡು ವರ್ಷದ ನಂತರ ಈ ಹಾಲ್ನಲ್ಲಿ ಮತ್ತೆ ಪತ್ರಿಕಾಗೋಷ್ಠಿಗೆ ಬಂದಿದ್ದೇನೆ’ ಎಂದು ಸುದೀಪ್ ಹಳೆಯ ನೆನಪಿಗೆ ಜಾರಿದರು.</p>.<p>‘ಅಂಬರೀಷ್ ಅವರ ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಶೂಟಿಂಗ್ ಪೂರ್ಣಗೊಳಿಸಲಾಗಿದೆ. ಅವರ ಹದಿಹರೆಯದಲ್ಲಿನ ಪ್ರೀತಿಯ ತುಣುಕುಗಳು ಚಿತ್ರದಲ್ಲಿವೆ. ಮೂವತ್ತೈದು ನಿಮಿಷಗಳ ಕಾಲದ ಈ ದೃಶ್ಯಾವಳಿಯಲ್ಲಿ ನಾನು ನಟಿಸಿದ್ದೇನೆ. ನನಗೆ ಜೋಡಿಯಾಗಿ ಶ್ರುತಿ ಹರಿಹರನ್ ಇದ್ದಾರೆ. ಸುಹಾಸಿನಿ ಅವರ ಅಭಿನಯವೂ ಮನಸೆಳೆಯುತ್ತದೆ. ಅಂಬರೀಷ್ ಅವರನ್ನು ಅನುಕರಿಸುವುದು ಕಷ್ಟಸಾಧ್ಯ. ಅರ್ಜುನ್ ಜನ್ಯ ಒಳ್ಳೆಯ ಸಂಗೀತ ನೀಡಿದ್ದಾರೆ’ ಎಂದು ವಿವರಿಸಿದರು.</p>.<p>ಜೆಬಿನ್ ಜೇಕಬ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸಂಕಲನ ಕಿರಣ್ ಅವರದ್ದು. ರವಿವರ್ಮ ಮತ್ತು ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>