<p>ನಟನಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ್ದಾರೆ. </p><p>ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಥಾ ಕಲ್ಪನೆಗಳಿಗೆ ಕರೆ ನೀಡಿದ್ದು ಹಾರರ್, ಥ್ರಿಲ್ಲರ್ ಅಥವಾ ಮಿಸ್ಟರಿ ಶೈಲಿಯ ಮೂಲ ಕಥಾ ಕಲ್ಪನೆಗಳನ್ನು ಹುಡುಕುತ್ತಿದ್ದೇನೆ. ನಿಮಗೆ ಕಥಾ ಕಲ್ಪನೆ ಇದ್ದರೆ, ದಯವಿಟ್ಟು 300 ಪದಗಳ ವರೆಗೆ ಸಂಕ್ಷಿಪ್ತ ವಿವರವನ್ನು magicalfilmscripts@gmail.com A ಕಳುಹಿಸಿ. ಚಿತ್ರಕಥೆ ಕಳುಹಿಸಲು 2026ರ ಫೆ.23ರಂದು ಕೊನೆ ದಿನಾಂಕವಾಗಿದೆ’ ಎಂದು ಬರೆದು ಚಿತ್ರಕಥೆಗೆ ಆಹ್ವಾನ ನೀಡಿದ್ದಾರೆ. </p>.<p>ಸ್ವಚ್ಛತೆಗಾಗಿ ಒತ್ತು ನೀಡುವ ನಟ ಅನಿರುದ್ಧ ಜತ್ಕರ್ ಅವರು ಬೆಂಗಳೂರಿನ ಅನೇಕ ನಗರಗಳಲ್ಲಿ ಕಸದ ರಾಶಿಯ ತೆರವಿಗಾಗಿ ಮನವಿ ಮಾಡುವುದರ ಜತೆಗೆ, ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಿದ್ದರು.</p>.<p>ನಟ ಅನಿರುದ್ಧ ಜತ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಸ್ವಚ್ಛತೆ ಅಭಿಯಾನದಡಿ ವಿಶ್ವದಾಖಲೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇವರಿಗೆ ಕೆಲ ತಿಂಗಳ ಹಿಂದೆ ‘ಲಂಡನ್ ಯುನೈಟೆಡ್ ಕಿಂಗ್ಡಮ್’ ಹಾಗೂ ‘ಚಿನ್ನಸ್ವಾಮಿ ಹಿಂದೂಸ್ತಾನ್ ಗಗನ್ ಗೌರವ – ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. </p><p>ಅನಿರುದ್ಧ ಅವರು ‘ಜೇಷ್ಠ, ‘ನೀನೆಲ್ಲೋ ನಾನಲ್ಲೆ ’,‘ತುಂಟಾ’, ‘ರಾಜ ಸಿಂಹ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಾಗೂ ‘ಜೊತೆ ಜೊತೆಯಲಿ’. ‘ಸೂರ್ಯವಂಶ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟನಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ್ದಾರೆ. </p><p>ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಥಾ ಕಲ್ಪನೆಗಳಿಗೆ ಕರೆ ನೀಡಿದ್ದು ಹಾರರ್, ಥ್ರಿಲ್ಲರ್ ಅಥವಾ ಮಿಸ್ಟರಿ ಶೈಲಿಯ ಮೂಲ ಕಥಾ ಕಲ್ಪನೆಗಳನ್ನು ಹುಡುಕುತ್ತಿದ್ದೇನೆ. ನಿಮಗೆ ಕಥಾ ಕಲ್ಪನೆ ಇದ್ದರೆ, ದಯವಿಟ್ಟು 300 ಪದಗಳ ವರೆಗೆ ಸಂಕ್ಷಿಪ್ತ ವಿವರವನ್ನು magicalfilmscripts@gmail.com A ಕಳುಹಿಸಿ. ಚಿತ್ರಕಥೆ ಕಳುಹಿಸಲು 2026ರ ಫೆ.23ರಂದು ಕೊನೆ ದಿನಾಂಕವಾಗಿದೆ’ ಎಂದು ಬರೆದು ಚಿತ್ರಕಥೆಗೆ ಆಹ್ವಾನ ನೀಡಿದ್ದಾರೆ. </p>.<p>ಸ್ವಚ್ಛತೆಗಾಗಿ ಒತ್ತು ನೀಡುವ ನಟ ಅನಿರುದ್ಧ ಜತ್ಕರ್ ಅವರು ಬೆಂಗಳೂರಿನ ಅನೇಕ ನಗರಗಳಲ್ಲಿ ಕಸದ ರಾಶಿಯ ತೆರವಿಗಾಗಿ ಮನವಿ ಮಾಡುವುದರ ಜತೆಗೆ, ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವನ್ನೂ ಮಾಡಿದ್ದರು.</p>.<p>ನಟ ಅನಿರುದ್ಧ ಜತ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಸ್ವಚ್ಛತೆ ಅಭಿಯಾನದಡಿ ವಿಶ್ವದಾಖಲೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇವರಿಗೆ ಕೆಲ ತಿಂಗಳ ಹಿಂದೆ ‘ಲಂಡನ್ ಯುನೈಟೆಡ್ ಕಿಂಗ್ಡಮ್’ ಹಾಗೂ ‘ಚಿನ್ನಸ್ವಾಮಿ ಹಿಂದೂಸ್ತಾನ್ ಗಗನ್ ಗೌರವ – ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. </p><p>ಅನಿರುದ್ಧ ಅವರು ‘ಜೇಷ್ಠ, ‘ನೀನೆಲ್ಲೋ ನಾನಲ್ಲೆ ’,‘ತುಂಟಾ’, ‘ರಾಜ ಸಿಂಹ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಾಗೂ ‘ಜೊತೆ ಜೊತೆಯಲಿ’. ‘ಸೂರ್ಯವಂಶ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>