ಚಿತ್ರವು ಆರಂಭದಲ್ಲಿ 200 ಕೇಂದ್ರಗಳಲ್ಲಿ ಬಿಡುಗಡೆ ಆಗಿತ್ತು. ಈಗ ಅದನ್ನು 225 ಕೇಂದ್ರಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ ನಿರ್ಮಾಪಕ ಉದಯ್ ಮೆಹ್ತಾ. ‘ಆರ್ಥಿಕ ಹಿಂಜರಿತ ಇದ್ದರೂ, ಚಿತ್ರವನ್ನು ವೀಕ್ಷಕರು ಕೈಹಿಡಿದು ನಡೆಸಿದ್ದಾರೆ. ಈ ಸಿನಿಮಾ ಚಿತ್ರಪ್ರೇಮಿಗಳ ಹೃದಯ ಗೆದ್ದಿದೆ’ ಎನ್ನುವುದು ಸತೀಶ್ ಅವರ ಮಾತು.