ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು ಕಾಲ್ತುಳಿತ | ನನಗೆ ಉಸಿರಾಡಲು ಕಷ್ಟವಾಗಿತ್ತು: ಚಂದನ್ ಶೆಟ್ಟಿ

Published : 5 ಜೂನ್ 2025, 15:48 IST
Last Updated : 5 ಜೂನ್ 2025, 15:48 IST
ಫಾಲೋ ಮಾಡಿ
0
ಬೆಂಗಳೂರು ಕಾಲ್ತುಳಿತ | ನನಗೆ ಉಸಿರಾಡಲು ಕಷ್ಟವಾಗಿತ್ತು: ಚಂದನ್ ಶೆಟ್ಟಿ
ಚಂದನ್‌ ಶೆಟ್ಟಿ

ಬೆಂಗಳೂರು: ‘ಆರ್‌ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮಕ್ಕೆ ಹೋಗಲು ಪಾಸ್ ಸಿಕ್ಕಿತ್ತು. ಅಲ್ಲಿ ಬಹಳ ಜನಸಂದಣಿಯಿತ್ತು. ಒಂದು ಕ್ಷಣ ನನಗೆ ಉಸಿರಾಡಲು ಕಷ್ಟ ಆಯ್ತು’ ಎಂದು ನಟ ಚಂದನ್ ಶೆಟ್ಟಿ ಹೇಳಿದ್ದಾರೆ.

ADVERTISEMENT
ADVERTISEMENT

‘ಗೇಟ್​ ನಂಬರ್ 3ಕ್ಕೆ ಹೋಗಲು ನನಗೆ ಪಾಸ್​​ ಸಿಕ್ಕಿತ್ತು. ಅದರ ಬಳಿ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿಂದ ಹೇಗೋ ಗೇಟ್​​ ನಂಬರ್​ 10ರ ಬಳಿ ಬಂದಾಗ ಜನಸಂದಣಿ ಇತ್ತು. ಇದರಿಂದಾಗಿ ಉಸಿರಾಡಲು ಕಷ್ಟವಾಯಿತು. ದುರಂತದಲ್ಲಿ ಪ್ರಾಣ ಕಳೆದುಕೊಂಡ ಆ ಜೀವಗಳಿಗೆ ಎಷ್ಟು ಕಷ್ಟ ಆಗಿತ್ತೋ, ಏನೋ? ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದು ಚಂದನ್ ಅವರು ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ.

‘ನಿಜವಾಗಿಯೂ ಬೇಸರ ಆಗುತ್ತಿದೆ. ದುರಂತಕ್ಕೆ ‌‌ಯಾರು ಹೊಣೆ ಎನ್ನುವುದನ್ನು ಹೇಳುವುದು ತುಂಬಾ ಕಷ್ಟ. ಸರಿಯಾಗಿ ವ್ಯವಸ್ಥೆ ಮಾಡಲಿಲ್ವಾ?. ಈ ರೀತಿ ಇರುತ್ತೆ ಅಂತಾ ಯಾರಿಗೂ ಗೊತ್ತಿರಲಿಲ್ಲ. ಶನಿವಾರ ಅಥವಾ ಭಾನುವಾರ ಕಾರ್ಯಕ್ರಮ ಮಾಡಬಹುದಿತ್ತು. ದುರಂತದಲ್ಲಿ ಗಾಯಗೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0