ನಿರ್ದೇಶಕ ಜೆ.ರಾಜಕಿರಣ್ ನಿರ್ದೇಶನದಲ್ಲಿ ಪ್ರಿಯಾಂಕಾ ಉಪೇಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟ ರಮೇಶ್ ಪಂಡಿತ್, ಸಹ ಕಲಾವಿದರಾದ ಅರವಿಂದ್ ರಾವ್ ಹಾಗೂ ಶ್ರೀನಿವಾಸ ನಟಿಸುತ್ತಿದ್ದ ದೃಶ್ಯದ ಚಿತ್ರೀಕರಣ ಸಂಸ್ಥೆಯ ಕೊಠಡಿಯೊಂದರಲ್ಲಿ ನಡೆಯಿತು.
ಚಿತ್ರಕ್ಕೆ ಜಿನಂತ್ ವಿಕಾಸ್ ಅವರ ಸಂಗೀತವಿದ್ದು ಜೀವ ಆ್ಯಂಟೋನಿ ಕ್ಯಾಮೆರಾ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ನಟಿ ಪ್ರಿಯಾಂಕಾ ಮಾತನಾಡಿ, ಶನಿವಾರಸಂತೆಯಲ್ಲಿಎರಡು ವಾರಗಳ ಚಿತ್ರೀಕರಣ ನಡೆಯಲಿದೆ. ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಚಿತ್ರೀಕರಣಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಜೊತೆಗೆ ಕೊಡಗಿನ ಪರಿಸರದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.