ಹೈದರಾಬಾದ್: ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು ಸಂಕ್ರಾಂತಿ ಹಬ್ಬವನ್ನು ಕೊನಿಡೆಲಾ ಕುಟುಂಬಸ್ಥರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ.
ಸಂಭ್ರಮದಲ್ಲಿ ಚಿರಂಜೀವಿ ಅವರ ಸಹೋದರ ನಾಗಬಾಬು, ಚಿತ್ರ ನಿರ್ಮಾಪಕ ಅಲ್ಲು ಅರವಿಂದ್, ಯುವ ನಟರಾದ ರಾಮ್ ಚರಣ್, ವರುಣ್ ತೇಜ್, ಸಾಯಿ ಧರ್ಮ ತೇಜ್ ಮತ್ತು ಪಂಜಾ ವೈಷ್ಣವ್ ತೇಜ್, ನಿಹಾರಿಕಾ, ಉಪಸನಾ ಭಾಗವಹಿಸಿದ್ದಾರೆ.
ಸದ್ಯ ಸಂಭ್ರಮದ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಿರಂಜೀವಿ, ‘ಎಲ್ಲರಿಗೂ ಭೋಗಿ ಮತ್ತು ಸಂಕ್ರಾಂತಿ ಹಬ್ಬದ ಶುಭಾಶಯಗಳು’ ಎಂದು ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.
ವರುಣ್ ತೇಜ್ ಅವರು ಕೂಡ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದು, ‘ಬಾಸ್ (ಚಿರಂಜೀವಿ) ಜತೆಗೆ 101 ದೊಸೆಗಳನ್ನು ಮಾಡಿದ್ದೇನೆ. ಎಲ್ಲರಿಗೂ ಭೋಗಿ ಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.