‘ವರದರಾಜು ಅವರು ಅಜಾತಶತ್ರುವಾಗಿದ್ದರು. ಕಥೆಯ ಆಯ್ಕೆಯ ವಿಚಾರದಲ್ಲಿ ಅವರಿಗೆ ಅಗಾಧ ಜ್ಞಾನವಿತ್ತು. ಯಾವ ಪಾತ್ರಕ್ಕೆ ಯಾರು ಜೀವ ತುಂಬಬಲ್ಲರು ಎಂಬುದನ್ನು ನಿರ್ಣಯಿಸಿ ಅಂತಹ ಕಲಾವಿದರನ್ನೇ ಆಯ್ಕೆಮಾಡುತ್ತಿದ್ದರು. ರಾಜಕುಮಾರ್ ಅಭಿನಯದ ಚಿತ್ರಗಳು ಶೇಕಡ 100ರಷ್ಟು ಯಶಸ್ಸು ಕಾಣಲು ಇದೇ ಕಾರಣ’ ಎಂದು ಹಿರಿಯ ನಟ ದೊಡ್ಡಣ್ಣ ತಿಳಿಸಿದರು.