ಮನಿಲಾ ಸಂತೋಷಿ ನಿರ್ಮಣದ ಚಿತ್ರದಲ್ಲಿ ಚಿನ್ಮಯ್ ಮಂಡ್ಳೇಕರ್ ನಾಥೂರಾಮ್ ಗೋಡ್ಸೆ ಪಾತ್ರ ಮಾಡಿದ್ದಾರೆ. ಮಹಾತ್ಮ ಗಾಂಧಿಯಾಗಿ ದೀಪಕ್ ಅಂತಾನಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ನಟರು ಜಿದ್ದಿಗೆ ಬಿದ್ದು ನಟಿಸಿದಂತೆ ಕಾಣುತ್ತಿದೆ. ಎ.ಆರ್. ರೆಹಮಾನ್ ಅವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆ. ತನಿಷಾ ಸಂತೋಷಿ, ಅನುಜ್ ಸೈನಿ, ಪವನ್ ಚೋಪ್ರಾ, ಶರದ್ ಸಿಂಗ್, ಆರೀಫ್ ಝಕಾರಿಯಾ ತಾರಾಗಣವಿದೆ. ರಿಷಿ ಪಂಜಾಬಿ ಛಾಯಾಗ್ರಹಣವಿದೆ.