<p><strong>ಮಂತ್ರಾಲಯ (ರಾಯಚೂರು):</strong> ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಒಂದು ವಾರ ನಡೆದ ಗುರುವೈಭವೋತ್ಸವ ಕಾರ್ಯಕ್ರಮಗಳು ಮಂಗಳವಾರ ರಾತ್ರಿ ಮುಕ್ತಾಯಗೊಂಡವು.</p><p>ಚಲನಚಿತ್ರ ನಿರ್ದೇಶಕರಾದ ರಿಷಭ್ ಶೆಟ್ಟಿ, ಜಗ್ಗೇಶ್, ಲಕ್ಷ್ಮೀನಾರಾಯಣ ಪ್ರೊಡಕ್ಷನ್ನ ರಘು ಭಟ್ ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದ ಗಣ್ಯರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಯರ ದರ್ಶನ ಪಡೆದರು.</p><p>ಶ್ರೀ ಪ್ರಹ್ಲಾದ ರಾಜರ ಪಲ್ಲಕಿ ಉತ್ಸವದ ಭವ್ಯ ಮೆರವಣಿಗೆಯನ್ನು ಪವಿತ್ರ ಪರಿಮಳ ತೀರ್ಥ ಪುಷ್ಕರಣಿಗೆ ವಿಧ್ಯುಕ್ತವಾಗಿ ಕರೆದೊಯ್ಯಲಾಯಿತು. ಸುಬುಧೇಂದ್ರ ತೀರ್ಥರು ವೇದ ಪಠಣ ಮತ್ತು ಭಕ್ತಿ ಭಾವವೊಂದಿಗೆ ತೆಪ್ಪೋತ್ಸವ ನಡೆಸಿದರು. </p><p>ನಂತರ ಸುಗುಣ ಭಟ್ ನಿರ್ಮಿಸಿದ ಮತ್ತು ರಘು ಭಟ್ - ಟಿಎನ್ಐಟಿ ನಿರ್ದೇಶಿಸಿದ ‘ಶ್ರೀ ರಾಯರ ದರ್ಶನ’ ಆಲ್ಬಮ್ ಹಾಡಿನ ಟೀಸರ್ ಅನ್ನು ಎಚ್.ಎಚ್. ಶ್ರೀ ಸ್ವಾಮೀಜಿ ಬಿಡುಗಡೆ ಮಾಡಿದರು.</p><p>ಈ ಸಂದರ್ಭದಲ್ಲಿ, ಶ್ರೀಗಳು ಡಾ. ಸಿ.ಎನ್. ಅಶ್ವಥ್ ನಾರಾಯಣ, ರಿಷಭ್ ಶೆಟ್ಟಿ, ಜಗ್ಗೇಶ್, ಕೈಗಾರಿಕೋದ್ಯಮಿ ಎಚ್.ಎಸ್. ರಾಘವೇಂದ್ರ ರಾವ್, ಸೆಲ್ವಿ ದಾಮೋದರ್, ಬಿಜೆಪಿ ಮುಖಂಡ ಸುಬ್ಬಣ್ಣ, ರಘು ಭಟ್ ಅವರನ್ನು ಸನ್ಮಾನಿಸಿದರು.</p><p>ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.</p>.ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವ: ಮಂತ್ರಾಲಯಕ್ಕೆ ನಟ ರಿಷಭ್ ಶೆಟ್ಟಿ ಭೇಟಿ
<p><strong>ಮಂತ್ರಾಲಯ (ರಾಯಚೂರು):</strong> ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಒಂದು ವಾರ ನಡೆದ ಗುರುವೈಭವೋತ್ಸವ ಕಾರ್ಯಕ್ರಮಗಳು ಮಂಗಳವಾರ ರಾತ್ರಿ ಮುಕ್ತಾಯಗೊಂಡವು.</p><p>ಚಲನಚಿತ್ರ ನಿರ್ದೇಶಕರಾದ ರಿಷಭ್ ಶೆಟ್ಟಿ, ಜಗ್ಗೇಶ್, ಲಕ್ಷ್ಮೀನಾರಾಯಣ ಪ್ರೊಡಕ್ಷನ್ನ ರಘು ಭಟ್ ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದ ಗಣ್ಯರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಯರ ದರ್ಶನ ಪಡೆದರು.</p><p>ಶ್ರೀ ಪ್ರಹ್ಲಾದ ರಾಜರ ಪಲ್ಲಕಿ ಉತ್ಸವದ ಭವ್ಯ ಮೆರವಣಿಗೆಯನ್ನು ಪವಿತ್ರ ಪರಿಮಳ ತೀರ್ಥ ಪುಷ್ಕರಣಿಗೆ ವಿಧ್ಯುಕ್ತವಾಗಿ ಕರೆದೊಯ್ಯಲಾಯಿತು. ಸುಬುಧೇಂದ್ರ ತೀರ್ಥರು ವೇದ ಪಠಣ ಮತ್ತು ಭಕ್ತಿ ಭಾವವೊಂದಿಗೆ ತೆಪ್ಪೋತ್ಸವ ನಡೆಸಿದರು. </p><p>ನಂತರ ಸುಗುಣ ಭಟ್ ನಿರ್ಮಿಸಿದ ಮತ್ತು ರಘು ಭಟ್ - ಟಿಎನ್ಐಟಿ ನಿರ್ದೇಶಿಸಿದ ‘ಶ್ರೀ ರಾಯರ ದರ್ಶನ’ ಆಲ್ಬಮ್ ಹಾಡಿನ ಟೀಸರ್ ಅನ್ನು ಎಚ್.ಎಚ್. ಶ್ರೀ ಸ್ವಾಮೀಜಿ ಬಿಡುಗಡೆ ಮಾಡಿದರು.</p><p>ಈ ಸಂದರ್ಭದಲ್ಲಿ, ಶ್ರೀಗಳು ಡಾ. ಸಿ.ಎನ್. ಅಶ್ವಥ್ ನಾರಾಯಣ, ರಿಷಭ್ ಶೆಟ್ಟಿ, ಜಗ್ಗೇಶ್, ಕೈಗಾರಿಕೋದ್ಯಮಿ ಎಚ್.ಎಸ್. ರಾಘವೇಂದ್ರ ರಾವ್, ಸೆಲ್ವಿ ದಾಮೋದರ್, ಬಿಜೆಪಿ ಮುಖಂಡ ಸುಬ್ಬಣ್ಣ, ರಘು ಭಟ್ ಅವರನ್ನು ಸನ್ಮಾನಿಸಿದರು.</p><p>ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.</p>.ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವ: ಮಂತ್ರಾಲಯಕ್ಕೆ ನಟ ರಿಷಭ್ ಶೆಟ್ಟಿ ಭೇಟಿ