ಈ ಚಿತ್ರದ ಕಥೆ ಹೊಸೆದಿರುವುದು ನಾಗತಿಹಳ್ಳಿ ಅವರ ಪುತ್ರಿ ಕನಸು ನಾಗತಿಹಳ್ಳಿ. ಭಾರತದಿಂದ ಬ್ರಿಟನ್ಗೆ ಕಾಣ್ಕೆಯ ರೂಪದಲ್ಲಿ ಹೋದ ಅಪರೂಪದ ವಸ್ತು ‘ಕೊಹಿನೂರ್ ವಜ್ರ’ವನ್ನು ರೂಪಕವಾಗಿಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಇದಕ್ಕೆ ಪೂರಕವಾಗಿಯೇ ಪ್ರೇಮಕಥೆ ಬೆಸೆದುಕೊಂಡಿದೆ. ಅಪರಾಧ, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ.