ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಯ್ಯರ ಮುಂದಿನ ಚಿತ್ರದ ಅತಿಥಿ ಪಾತ್ರದಲ್ಲಿ ಕಲ್ಯಾಣ್‌ರಾಮ್‌!

Last Updated 1 ಡಿಸೆಂಬರ್ 2020, 5:58 IST
ಅಕ್ಷರ ಗಾತ್ರ

ಬೋಯಪತಿ ಶ್ರೀನು ಹಾಗೂ ನಂದಮುರಿ ಬಾಲಕೃಷ್ಣ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರವೊಂದು ತಯಾರಾಗುತ್ತಿರುವುದು ಹಳೆಯ ವಿಷಯ. ಈ ಚಿತ್ರದ ಕುರಿತು ಬಾಲಯ್ಯ ಅಭಿಮಾನಿಗಳು ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಕುರಿತು ಒಂದಿಲ್ಲೊಂದು ಗಾಳಿಸುದ್ದಿಗಳು ದಿನಕ್ಕೊಂದರಂತೆ ಹರಡುತ್ತಲೇ ಇವೆ. ಈ ಹಿಂದೆ ಬಾಲಯ್ಯ ಹಾಗೂ ಶ್ರೀನು ಕಾಂಬಿನೇಷನ್‌ನಲ್ಲಿ ಲೆಜೆಂಡ್‌, ಸಿಂಹದಂತಹ ಸೂಪರ್‌ ಹಿಟ್ ಸಿನಿಮಾಗಳು ತೆರೆ ಕಂಡಿದ್ದವು. ಈ ಜೋಡಿ ಈಗ ಮತ್ತೆ ಒಂದಾಗಿದ್ದು ಅಭಿಮಾನಿಗಳು ಮನರಂಜನೆಯೊಂದಿಗೆ ಆ್ಯಕ್ಷನ್, ಪವರ್‌ಫುಲ್ ಡೈಲಾಗ್‌ಗಳನ್ನು ಎದುರು ನೋಡುತ್ತಿದ್ದಾರೆ.

ಸಿನಿಮಾಕ್ಕೆ ಮಿರ್ಯಾಲಾ ರವೀಂದ್ರ ರೆಡ್ಡಿ ಹಣ ಹೂಡಿಕೆ ಮಾಡಿದ್ದಾರೆ. ಎಸ್‌. ತಮನ್ ಸಂಗೀತ ನಿರ್ದೇಶನವಿದೆ. ಸದ್ಯ ಗಾಳಿಸುದ್ದಿಯ ಪ್ರಕಾರ ಚಿಕ್ಕಪ್ಪನ ಈ ಚಿತ್ರದಲ್ಲಿ ನಂದಮುರಿ ಕಲ್ಯಾಣ್ ರಾಮ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೂಲಗಳ ಪ್ರಕಾರ್ ಕಲ್ಯಾಣ್ ಅವರದ್ದು ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ. ಇದು ಅಭಿಮಾನಿಗಳಲ್ಲಿ ಇನ್ನಷ್ಟು ಖುಷಿ ಹೆಚ್ಚುವಂತೆ ಮಾಡಿದೆ. ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಅಭಿಮಾನಿಗಳು ಮಾತ್ರ ಇದು ನಿಜವಾಗಲಿ ಎನ್ನುತ್ತಿದ್ದಾರೆ.

ಚಿತ್ರಕ್ಕೆ ಹೊಸ ನಟಿಯನ್ನು ಪರಿಚಯಿಸಲಿದ್ದೇವೆ ಎಂದು ಇತ್ತೀಚೆಗೆ ಬೋಯಪತಿ ಶ್ರೀನು ಹೇಳಿದ್ದರು. ಈ ಹಿಂದೆ ಎನ್‌ಟಿಆರ್ ಜೀವನಾಧಾರಿತ ಸಿನಿಮಾದಲ್ಲಿ ಕಲ್ಯಾಣ್‌ ತಮ್ಮ ತಂದೆ ಹರಿಕೃಷ್ಣರ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಎನ್‌ಟಿಆರ್ ಪಾತ್ರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದರು. ಮತ್ತೆ ಚಿಕ್ಕಪ್ಪನ ಜೊತೆ ಕಲ್ಯಾಣ್ ತೆರೆ ಹಂಚಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT