ಅಕ್ಟೋಬರ್26 ಮತ್ತು 27ರಂದು ಬಾಂದ್ರಾ ಪೊಲೀಸರ ಎದುರು ಹಾಜರಾಗುವಂತೆ ಮೊದಲ ಸಮನ್ಸ್ನಲ್ಲಿ ಸೂಚಿಸಲಾಗಿತ್ತು. ಇದಕ್ಕೆ ಕಂಗನಾ ಮತ್ತು ಅವರ ಸಹೋದರಿ ಉತ್ತರಿಸಿರಲಿಲ್ಲ. ನ.9 ಮತ್ತು10 ರಂದು ವಿಚಾರಣೆಗೆ ಬರುವಂತೆ ಮತ್ತೊಮ್ಮೆ (ನ.3) ಸಮನ್ಸ್ ನೀಡಲಾಗಿತ್ತು. ಕುಟುಂಬದ ಸದಸ್ಯರೊಬ್ಬರ ವಿವಾಹ ಕಾರ್ಯಕ್ರಮ ಇರುವುದರಿಂದ ತಾನು ಹಿಮಾಚಲ ಪ್ರದೇಶದಲ್ಲಿದ್ದು, ನ. 15ರವರೆಗೂ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಂಗನಾ ತಮ್ಮ ವಕೀಲರ ಮೂಲಕ ಪೊಲೀಸರಿಗೆ ತಿಳಿಸಿದ್ದರು.