ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರುವ ಬಗ್ಗೆ ಪ್ರಜ್ವಲ್ ದೇವರಾಜ್ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ನನ್ನ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳು ನಾನು ದತ್ತು ತೆಗೆದುಕೊಂಡ ಶಾಲೆಯ ಮಕ್ಕಳಿಗೆ ಪುಸ್ತಕ ಹಂಚಿದ್ದರು. ಆದರೆ ಈ ಬಾರಿ ಕೋವಿಡ್ ಸಂಕಷ್ಟವಿದ್ದು, ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದೇನೆ, ಹೀಗಾಗಿ ಹೂವಿನ ಹಾರ, ಕೇಕ್ ಬದಲಿಗೆ ಆ ಮೊತ್ತವನ್ನು ಅಗತ್ಯವಿರುವವರ ನೆರವಿಗೆ ಬಳಸಿ ಎಂದು ಕೇಳಿಕೊಂಡಿದ್ದಾರೆ.