ಬೀದಿ ನಾಯಿಗಳ ರಕ್ಷಣೆ, ಪೋಷಣೆ ಕುರಿತ ಸಂದೇಶವಿರುವ ಈ ಚಿತ್ರದಲ್ಲಿ ‘ಧರ್ಮ’ನ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದರು. ಧರ್ಮ–ಚಾರ್ಲಿಯ ಭಾವನಾತ್ಮಕ ಪಯಣ ಪ್ರೇಕ್ಷಕರನ್ನು ಸೆಳೆದಿತ್ತು. ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲೇ ಕಿರಣ್ರಾಜ್ ಖ್ಯಾತಿ ಪಡೆದಿದ್ದರು. ಚಿತ್ರದ 25 ದಿನ ಪೂರೈಸಿದ ಸಂದರ್ಭದಲ್ಲಿ ದೇಶಿ ತಳಿ ನಾಯಿಗಳ ದತ್ತು, ರಕ್ಷಣೆ, ಪೋಷಣೆಗೆ ಚಿತ್ರದ ಲಾಭಾಂಶದ ಶೇ 5ರಷ್ಟು ಹಣವನ್ನು ನೀಡುವುದಾಗಿ ರಕ್ಷಿತ್ ಘೋಷಿಸಿದ್ದರು. ಜೊತೆಗೆ ಸಿನಿಮಾ ತಂಡದ 200 ಜನರಿಗೆ ಶೇ 10ರಷ್ಟು ಲಾಭಾಂಶ ಹಂಚುವುದಾಗಿ ರಕ್ಷಿತ್ ತಿಳಿಸಿದ್ದರು.