‘ಸಿನಿಮಾ ಶುರುವಾಗಿ ವರ್ಷವಾಗಿದೆ. ಚಿತ್ರೀಕರಣ ಶೇ. 90ರಷ್ಟು ಮುಕ್ತಾಯಗೊಂಡಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಶಿವಣ್ಣ ಅವರಿಂದ ಇಡೀ ತಂಡ ಎನರ್ಜಿ ಕಲಿತಿದೆ. ಅವರ ಎನರ್ಜಿಗೊಂದು ದೊಡ್ಡ ನಮಸ್ಕಾರ. ಪ್ರಭುದೇವ ತುಂಬ ಕಡಿಮೆ ಮಾತಿನಲ್ಲಿ ಎಲ್ಲರಿಗೂ ಸ್ನೇಹಿತರಾಗಬಲ್ಲವರು. ಸಿನಿಮಾ ಮುಗಿಯುತ್ತಿದೆ ಎಂದರೂ ಗೀತಾ ಶಿವರಾಜ ಕುಮಾರ್ ನಂಬುತ್ತಿಲ್ಲ. ಗೀತಕ್ಕನ ಮನೆಯ ಆತಿಥ್ಯ, ರಾಕ್ಲೈನ್ ವೆಂಕಟೇಶ್ ಅವರ ಮನೆಯ ರಸಂ ರುಚಿಯನ್ನೊಮ್ಮೆ ನೋಡಿ’ ಎನ್ನುತ್ತ ತಮ್ಮದೇ ಧಾಟಿಯಲ್ಲಿ ಎಲ್ಲರನ್ನೂ ನಗಿಸಿದರು ಚಿತ್ರದ ನಿರ್ದೇಶಕ ಯೋಗರಾಜ್ ಭಟ್.