<p><strong>ಬಿಜ್ನೋರ್/ಮೀರತ್:</strong> ನಟ ಮುಷ್ತಾಕ್ ಮೊಹಮ್ಮದ್ ಖಾನ್ ಅವರನ್ನು ದೆಹಲಿ ವಿಮಾನನಿಲ್ದಾಣದಿಂದ ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ಹಣಕ್ಕಾಗಿ ಒತ್ತಾಯಿಸಿದ್ದ ನಾಲ್ವರು ಸದಸ್ಯರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಮುಷ್ತಾಕ್ ಅವರನ್ನು ದುಷ್ಕರ್ಮಿಗಳು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದೇ ತಂಡ ಬಾಲಿವುಡ್ನ ಹಿರಿಯ ನಟ ಶಕ್ತಿ ಕಪೂರ್ ಅವರನ್ನು ಅಪಹರಿಸಲು ಸಂಚು ನಡೆಸಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಸಾರ್ಥಕ್ ಚೌಧರಿ, ಸಬಿಯುದ್ದೀನ್, ಅಜೀಂ, ಶಶಾಂಕ್ ಬಂಧಿತರು. ಇವರಿಂದ ₹1.04 ಲಕ್ಷ ವಶಪಡಿಸಿಕೊಳ್ಳಲಾಗಿದೆ. ತಂಡ ಬೇರೆ ಯಾರಾದರೂ ನಟರನ್ನು ಅಪಹರಿಸಿ ಹಣ ವಸೂಲು ಮಾಡಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. </p>.<p>ಬಿಜ್ನೋರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಝಾ ಅವರು ಶನಿವಾರ ಈ ಕುರಿತ ಮಾಹಿತಿ ಹಂಚಿಕೊಂಡರು. ಮುಷ್ತಾಕ್ ಅಪಹರಣ ಕುರಿತು ಅವರ ಕಾರ್ಯಕ್ರಮ ಮೇಲುಸ್ತುವಾರಿ ವ್ಯವಸ್ಥಾಪಕ ಶಿವಂ ಯಾದವ್ ಅವರು ಡಿ.9ರಂದು ದೂರು ನೀಡಿದ್ದರು.</p>.<p>ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಸೋಗಿನಲ್ಲಿ ದೆಹಲಿಗೆ ಕರೆಸಿ ದುಷ್ಕರ್ಮಿಗಳು ಅಪಹರಿಸಿದ್ದರು. ಮೀರತ್–ದೆಹಲಿ ನಡುವೆ ಶಿಕಾಂಜಿ ಎಂಬಲ್ಲಿ ಆರೋಪಿ ಲವಿ ಎಂಬಾತನ ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ತಿಳಿಸಿದರು.</p>.<p>ನವೆಂಬರ್ 21ರಂದು ಮುಷ್ತಾಕ್ ಖಾನ್ ಅವರ ಬ್ಯಾಂಕ್ ಖಾತೆಯಿಂದ ಒಟ್ಟು ₹ 2.2 ಲಕ್ಷ ಪಡೆದಿದ್ದಲ್ಲದೆ, ಮೀರತ್ ಮತ್ತು ಮುಜಾಫರ್ನಗರ್ನಲ್ಲಿ ಶಾಪಿಂಗ್ ಮಾಡಿದ್ದರು ಎಂದು ಅವರು ವಿವರಿಸಿದರು. ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಜ್ನೋರ್/ಮೀರತ್:</strong> ನಟ ಮುಷ್ತಾಕ್ ಮೊಹಮ್ಮದ್ ಖಾನ್ ಅವರನ್ನು ದೆಹಲಿ ವಿಮಾನನಿಲ್ದಾಣದಿಂದ ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ಹಣಕ್ಕಾಗಿ ಒತ್ತಾಯಿಸಿದ್ದ ನಾಲ್ವರು ಸದಸ್ಯರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಮುಷ್ತಾಕ್ ಅವರನ್ನು ದುಷ್ಕರ್ಮಿಗಳು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದೇ ತಂಡ ಬಾಲಿವುಡ್ನ ಹಿರಿಯ ನಟ ಶಕ್ತಿ ಕಪೂರ್ ಅವರನ್ನು ಅಪಹರಿಸಲು ಸಂಚು ನಡೆಸಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಸಾರ್ಥಕ್ ಚೌಧರಿ, ಸಬಿಯುದ್ದೀನ್, ಅಜೀಂ, ಶಶಾಂಕ್ ಬಂಧಿತರು. ಇವರಿಂದ ₹1.04 ಲಕ್ಷ ವಶಪಡಿಸಿಕೊಳ್ಳಲಾಗಿದೆ. ತಂಡ ಬೇರೆ ಯಾರಾದರೂ ನಟರನ್ನು ಅಪಹರಿಸಿ ಹಣ ವಸೂಲು ಮಾಡಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. </p>.<p>ಬಿಜ್ನೋರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಝಾ ಅವರು ಶನಿವಾರ ಈ ಕುರಿತ ಮಾಹಿತಿ ಹಂಚಿಕೊಂಡರು. ಮುಷ್ತಾಕ್ ಅಪಹರಣ ಕುರಿತು ಅವರ ಕಾರ್ಯಕ್ರಮ ಮೇಲುಸ್ತುವಾರಿ ವ್ಯವಸ್ಥಾಪಕ ಶಿವಂ ಯಾದವ್ ಅವರು ಡಿ.9ರಂದು ದೂರು ನೀಡಿದ್ದರು.</p>.<p>ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಸೋಗಿನಲ್ಲಿ ದೆಹಲಿಗೆ ಕರೆಸಿ ದುಷ್ಕರ್ಮಿಗಳು ಅಪಹರಿಸಿದ್ದರು. ಮೀರತ್–ದೆಹಲಿ ನಡುವೆ ಶಿಕಾಂಜಿ ಎಂಬಲ್ಲಿ ಆರೋಪಿ ಲವಿ ಎಂಬಾತನ ಮನೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ತಿಳಿಸಿದರು.</p>.<p>ನವೆಂಬರ್ 21ರಂದು ಮುಷ್ತಾಕ್ ಖಾನ್ ಅವರ ಬ್ಯಾಂಕ್ ಖಾತೆಯಿಂದ ಒಟ್ಟು ₹ 2.2 ಲಕ್ಷ ಪಡೆದಿದ್ದಲ್ಲದೆ, ಮೀರತ್ ಮತ್ತು ಮುಜಾಫರ್ನಗರ್ನಲ್ಲಿ ಶಾಪಿಂಗ್ ಮಾಡಿದ್ದರು ಎಂದು ಅವರು ವಿವರಿಸಿದರು. ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>