ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಂತಾ ಬಗ್ಗೆ ಕೇಳದಿದ್ದರೆ ಮಾತ್ರ ಮಾಧ್ಯಮ ಗೋಷ್ಠಿಗೆ ಹಾಜರಾಗುವೆ –ನಾಗಚೈತನ್ಯ

Last Updated 15 ಸೆಪ್ಟೆಂಬರ್ 2021, 8:17 IST
ಅಕ್ಷರ ಗಾತ್ರ

ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಟಾಲಿವುಡ್‌ ಅಂಗಳದಲ್ಲಿ ಕೇಳಿ ಬರುತ್ತಿವೆ. ಇವರುವಿಚ್ಛೇದನ ಪಡೆಯಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ಈ ನಡುವೆ ನಾಗಚೈತನ್ಯ, ಸಮಂತಾ ಬಗ್ಗೆ ಪ್ರಶ್ನೆ ಕೇಳದಿದ್ದರೆ ಮಾತ್ರ ಪತ್ರಿಕಾ ಗೋಷ್ಠಿಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ನಟಿಸಿರುವ ’ಲವ್‌ ಸ್ಟೋರಿ’ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರದ ಪ್ರಮೋಷನ್‌ ಹಾಗೂ ಪ್ರಚಾರದ ಕೆಲಸಗಳಲ್ಲಿ ನಾಗಚೈತನ್ಯ ಕೂಡ ಭಾಗಿಯಾಗಲಿದ್ದಾರೆ.

ಚಿತ್ರತಂಡಕ್ಕೆನಾಗಚೈತನ್ಯ ಒಂದು ಷರತ್ತು ಹಾಕಿದ್ದು, ’ಮಾಧ್ಯಮದವರು ಸಮಂತಾ ಹಾಗೂ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳದಂತೆ ನೀವು ನೋಡಿಕೊಳ್ಳಬೇಕು’ ಎಂದು ಕೇಳಿಕೊಂಡಿದ್ದಾರಂತೆ!ಈ ಷರತ್ತಿಗೆ ಚಿತ್ರತಂಡ ಒಪ್ಪಿಗೆ ಸೂಚಿಸಿದೆ ಎಂಬುದು ತಿಳಿದುಬಂದಿದೆ.

ಶೇಖರ್‌ ಕಮುಲ್ಲಾ ಆ್ಯಕ್ಷನ್‌ ಕಟ್‌ ಹೇಳಿರುವ ರೊಮ್ಯಾಂಟಿಕ್‌ ಕತೆಯುಳ್ಳ ‘ಲವ್‌ ಸ್ಟೋರಿ’ ಸೆಪ್ಟೆಂಬರ್‌ 24ರಂದು ಬಿಡುಗಡೆಯಾಗಲಿದೆ. ನಾರಾಯಣ ದಾಸ್‌ ಕೆ.ನಾರಂಗ್‌ ಹಾಗೂ ಕೆ.ಪಿ ರಾಮ್‌ ಮೋಹನ್‌ ನಿರ್ಮಿಸಿರುವ ಈ ಚಿತ್ರದಲ್ಲಿ ತೆಲಂಗಾಣ ಶೈಲಿಯ ತೆಲುಗು ಭಾಷೆ ಪ್ರೇಕ್ಷಕರ ಮನರಂಜಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT