<p>ಉತ್ತರಾಖಂಡ ರಾಜ್ಯದ ಒಂದು ಯಾತ್ರಾ ಕೇಂದ್ರ ರುದ್ರಪ್ರಯಾಗ. ಆದರೆ, ಕನ್ನಡದ ಒಂದು ತಲೆಮಾರಿನವರ ಪಾಲಿಗೆ ಈ ಹೆಸರು ಕೇಳಿದ ತಕ್ಷಣದ ನೆನಪಿಗೆ ಬರುವುದು ಆ ರಾಜ್ಯವೂ ಅಲ್ಲ, ಯಾತ್ರಾ ಕೇಂದ್ರವೂ ಅಲ್ಲ; ಬದಲಿಗೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅನುವಾದಿಸಿದ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಪುಸ್ತಕ.</p>.<p>ಪುಸ್ತಕವನ್ನು ಮೊದಲು ಇಂಗ್ಲಿಷ್ನಲ್ಲಿ ಬರೆದಿದ್ದು ಖ್ಯಾತ ಬೇಟೆಗಾರ, ಲೇಖಕ ಜಿಮ್ ಕಾರ್ಬೆಟ್. ರಿಷಬ್ ಶೆಟ್ಟಿ ನಿರ್ದೇಶನದ ಹೊಸ ಚಿತ್ರದ ಹೆಸರು ಕೂಡ ‘ರುದ್ರಪ್ರಯಾಗ’. ಇದರಲ್ಲಿ ಅನಂತ್ ನಾಗ್ ಅವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಕಂಡ ಕೆಲವು ಸಿನಿಮಾ ಪ್ರೇಮಿಗಳು ಕೇಳಿದ್ದ ಪ್ರಶ್ನೆ, ‘ಇದಕ್ಕೂ ತೇಜಸ್ವಿ ಅನುವಾದಿಸಿದ ಪುಸ್ತಕಕ್ಕೂ ಸಂಬಂಧ ಇದೆಯಾ’ ಎಂದು.</p>.<p>ಈ ಪ್ರಶ್ನೆಯನ್ನು ನಿರ್ದೇಶಕ ರಿಷಬ್ ಎದುರು ಇರಿಸಿದಾಗ, ‘ಹೀಗೆಲ್ಲ ಪ್ರಶ್ನೆ ಕೇಳಿದರೆ ಉತ್ತರ ಹೇಳಲು ಆಗುವುದಿಲ್ಲ’ ಎಂದು ನಕ್ಕಿದ್ದರು. ‘ಸಂಬಂಧ ಇದೆಯಾ, ಇಲ್ಲವಾ ಎಂಬುದನ್ನೆಲ್ಲ ಸಿನಿಮಾದಲ್ಲಿ ನೋಡಬೇಕು. ಈ ಪ್ರಶ್ನೆಗೆ ಈಗಲೇ ಉತ್ತರ ಹೇಳಲಾಗುವುದಿಲ್ಲ’ ಎಂದಿದ್ದರು ರಿಷಬ್.</p>.<p>ಆದರೆ, ಜಿಮ್ ಕಾರ್ಬೆಟ್ ಬರೆದ ರುದ್ರಪ್ರಯಾಗದ ನರಭಕ್ಷಕನ ಪುಸ್ತಕದ ಛಾಯೆ, ಆ ಪುಸ್ತಕ ಓದಿದ್ದಿದ್ದರೆ ಅದರ ನೆನಪುಗಳು ಸಿನಿಮಾ ವೀಕ್ಷಿಸುತ್ತಿದ್ದಂತೆ ಬಿಚ್ಚಿಕೊಳ್ಳುತ್ತ ಸಾಗಬಹುದು ಎಂಬ ಸುದ್ದಿ ಸಿಕ್ಕಿದೆ. ಕಾರ್ಬೆಟ್ ಅವರ ಕೃತಿಯಲ್ಲಿ, ನರಭಕ್ಷಕ ಚಿರತೆಯನ್ನು ಕೊಲ್ಲಲು ಬೇಟೆಗಾರನೊಬ್ಬ (ಲೇಖಕನೇ ಆ ಬೇಟೆಗಾರ) ಹೊಂಚು ಹಾಕಿರುತ್ತಾನೆ. ಸಮಾಜಕ್ಕೆ ಕಂಟಕ ಆಗಿರುವವರನ್ನು ಪ್ರಮುಖ ಪಾತ್ರವೊಂದು ಹೇಗೆ ಬೇಟೆ ಆಡುತ್ತದೆ ಎಂಬ ಕಥೆ ಈ ಚಿತ್ರದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.</p>.<p>ಕಾರ್ಬೆಟ್ ಬರೆದ ಪುಸ್ತಕದಲ್ಲಿ ಬರುವ ಯಾವ ಪಾತ್ರವೂ ಈ ಸಿನಿಮಾದಲ್ಲಿ ಕಾಣಿಸುವುದಿಲ್ಲ. ಆದರೆ, ಕಾರ್ಬೆಟ್ ಅವರು ಬೇಟೆಯಾಡುತ್ತಿದ್ದ ಬಗೆಯನ್ನು ಈ ಚಿತ್ರದ ಕಥೆಯು ವೀಕ್ಷಕನ ಕಣ್ಣೆದುರು ತಂದಿರಿಸಬಹುದು. ಕಾರ್ಬೆಟ್ ಅವರ ನಡೆಗಳ ಪ್ರಭಾವ ಚಿತ್ರದಲ್ಲಿ ಇದೆ ಎಂದು ಸಿನಿಮಾ ತಂಡದ ಮೂಲವೊಂದು ಹೇಳಿದೆ.</p>.<p>ಈ ಚಿತ್ರದಲ್ಲಿ ಇರುವುದು ಥ್ರಿಲ್ಲರ್ ಕಥೆ. ಕಾರ್ಬೆಟ್ ಬರೆದ ಕೃತಿ ಕೂಡ ಓದುಗರಲ್ಲಿ ಥ್ರಿಲ್ ಹುಟ್ಟಿಸುವಂಥದ್ದು. ಅವರ ಕೃತಿಯಲ್ಲಿ ಬರುವ ಚಿರತೆಯು 1918ರಿಂದ 1926ರ ನಡುವಿನ ಜನರಿಗೆ ಕಂಟಕವಾಗಿ ಪರಿಣಮಿಸಿತ್ತು. ಅದನ್ನು ಕಾರ್ಬೆಟ್ ಅವರು 1926ರಲ್ಲಿ ಕೊಂದುಹಾಕಿದರು.</p>.<p>ಕೊರೊನಾ ಲಾಕ್ಡೌನ್ ಘೋಷಣೆ ಆಗಿರದೆ ಇದ್ದಿದ್ದರೆ ‘ರುದ್ರಪ್ರಯಾಗ’ ಚಿತ್ರದ ಚಿತ್ರೀಕರಣದ ಕೆಲಸಗಳು ಶುರುವಾಗಿರುತ್ತಿತ್ತು.</p>.<p>⇒v</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತರಾಖಂಡ ರಾಜ್ಯದ ಒಂದು ಯಾತ್ರಾ ಕೇಂದ್ರ ರುದ್ರಪ್ರಯಾಗ. ಆದರೆ, ಕನ್ನಡದ ಒಂದು ತಲೆಮಾರಿನವರ ಪಾಲಿಗೆ ಈ ಹೆಸರು ಕೇಳಿದ ತಕ್ಷಣದ ನೆನಪಿಗೆ ಬರುವುದು ಆ ರಾಜ್ಯವೂ ಅಲ್ಲ, ಯಾತ್ರಾ ಕೇಂದ್ರವೂ ಅಲ್ಲ; ಬದಲಿಗೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅನುವಾದಿಸಿದ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಪುಸ್ತಕ.</p>.<p>ಪುಸ್ತಕವನ್ನು ಮೊದಲು ಇಂಗ್ಲಿಷ್ನಲ್ಲಿ ಬರೆದಿದ್ದು ಖ್ಯಾತ ಬೇಟೆಗಾರ, ಲೇಖಕ ಜಿಮ್ ಕಾರ್ಬೆಟ್. ರಿಷಬ್ ಶೆಟ್ಟಿ ನಿರ್ದೇಶನದ ಹೊಸ ಚಿತ್ರದ ಹೆಸರು ಕೂಡ ‘ರುದ್ರಪ್ರಯಾಗ’. ಇದರಲ್ಲಿ ಅನಂತ್ ನಾಗ್ ಅವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಕಂಡ ಕೆಲವು ಸಿನಿಮಾ ಪ್ರೇಮಿಗಳು ಕೇಳಿದ್ದ ಪ್ರಶ್ನೆ, ‘ಇದಕ್ಕೂ ತೇಜಸ್ವಿ ಅನುವಾದಿಸಿದ ಪುಸ್ತಕಕ್ಕೂ ಸಂಬಂಧ ಇದೆಯಾ’ ಎಂದು.</p>.<p>ಈ ಪ್ರಶ್ನೆಯನ್ನು ನಿರ್ದೇಶಕ ರಿಷಬ್ ಎದುರು ಇರಿಸಿದಾಗ, ‘ಹೀಗೆಲ್ಲ ಪ್ರಶ್ನೆ ಕೇಳಿದರೆ ಉತ್ತರ ಹೇಳಲು ಆಗುವುದಿಲ್ಲ’ ಎಂದು ನಕ್ಕಿದ್ದರು. ‘ಸಂಬಂಧ ಇದೆಯಾ, ಇಲ್ಲವಾ ಎಂಬುದನ್ನೆಲ್ಲ ಸಿನಿಮಾದಲ್ಲಿ ನೋಡಬೇಕು. ಈ ಪ್ರಶ್ನೆಗೆ ಈಗಲೇ ಉತ್ತರ ಹೇಳಲಾಗುವುದಿಲ್ಲ’ ಎಂದಿದ್ದರು ರಿಷಬ್.</p>.<p>ಆದರೆ, ಜಿಮ್ ಕಾರ್ಬೆಟ್ ಬರೆದ ರುದ್ರಪ್ರಯಾಗದ ನರಭಕ್ಷಕನ ಪುಸ್ತಕದ ಛಾಯೆ, ಆ ಪುಸ್ತಕ ಓದಿದ್ದಿದ್ದರೆ ಅದರ ನೆನಪುಗಳು ಸಿನಿಮಾ ವೀಕ್ಷಿಸುತ್ತಿದ್ದಂತೆ ಬಿಚ್ಚಿಕೊಳ್ಳುತ್ತ ಸಾಗಬಹುದು ಎಂಬ ಸುದ್ದಿ ಸಿಕ್ಕಿದೆ. ಕಾರ್ಬೆಟ್ ಅವರ ಕೃತಿಯಲ್ಲಿ, ನರಭಕ್ಷಕ ಚಿರತೆಯನ್ನು ಕೊಲ್ಲಲು ಬೇಟೆಗಾರನೊಬ್ಬ (ಲೇಖಕನೇ ಆ ಬೇಟೆಗಾರ) ಹೊಂಚು ಹಾಕಿರುತ್ತಾನೆ. ಸಮಾಜಕ್ಕೆ ಕಂಟಕ ಆಗಿರುವವರನ್ನು ಪ್ರಮುಖ ಪಾತ್ರವೊಂದು ಹೇಗೆ ಬೇಟೆ ಆಡುತ್ತದೆ ಎಂಬ ಕಥೆ ಈ ಚಿತ್ರದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.</p>.<p>ಕಾರ್ಬೆಟ್ ಬರೆದ ಪುಸ್ತಕದಲ್ಲಿ ಬರುವ ಯಾವ ಪಾತ್ರವೂ ಈ ಸಿನಿಮಾದಲ್ಲಿ ಕಾಣಿಸುವುದಿಲ್ಲ. ಆದರೆ, ಕಾರ್ಬೆಟ್ ಅವರು ಬೇಟೆಯಾಡುತ್ತಿದ್ದ ಬಗೆಯನ್ನು ಈ ಚಿತ್ರದ ಕಥೆಯು ವೀಕ್ಷಕನ ಕಣ್ಣೆದುರು ತಂದಿರಿಸಬಹುದು. ಕಾರ್ಬೆಟ್ ಅವರ ನಡೆಗಳ ಪ್ರಭಾವ ಚಿತ್ರದಲ್ಲಿ ಇದೆ ಎಂದು ಸಿನಿಮಾ ತಂಡದ ಮೂಲವೊಂದು ಹೇಳಿದೆ.</p>.<p>ಈ ಚಿತ್ರದಲ್ಲಿ ಇರುವುದು ಥ್ರಿಲ್ಲರ್ ಕಥೆ. ಕಾರ್ಬೆಟ್ ಬರೆದ ಕೃತಿ ಕೂಡ ಓದುಗರಲ್ಲಿ ಥ್ರಿಲ್ ಹುಟ್ಟಿಸುವಂಥದ್ದು. ಅವರ ಕೃತಿಯಲ್ಲಿ ಬರುವ ಚಿರತೆಯು 1918ರಿಂದ 1926ರ ನಡುವಿನ ಜನರಿಗೆ ಕಂಟಕವಾಗಿ ಪರಿಣಮಿಸಿತ್ತು. ಅದನ್ನು ಕಾರ್ಬೆಟ್ ಅವರು 1926ರಲ್ಲಿ ಕೊಂದುಹಾಕಿದರು.</p>.<p>ಕೊರೊನಾ ಲಾಕ್ಡೌನ್ ಘೋಷಣೆ ಆಗಿರದೆ ಇದ್ದಿದ್ದರೆ ‘ರುದ್ರಪ್ರಯಾಗ’ ಚಿತ್ರದ ಚಿತ್ರೀಕರಣದ ಕೆಲಸಗಳು ಶುರುವಾಗಿರುತ್ತಿತ್ತು.</p>.<p>⇒v</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>