<p>ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ತೆಲುಗು ನಟ ಸಾಯಿ ಧರಂ ತೇಜ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕೋಮಾದಲ್ಲಿದ್ದಾರೆ ಎಂದು ನಟ ಪವನ್ ಕಲ್ಯಾಣ್ ತಿಳಿಸಿದ್ದಾರೆ.</p>.<p>ಸಾಯಿ ತೇಜ್ ಅಭಿನಯದ ’ರಿಪಬ್ಲಿಕ್’ ಸಿನಿಮಾದ ’ಪ್ರಿ ರೀಲಿಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>ಸಾಮಾನ್ಯವಾಗಿ ನಾನು ನಮ್ಮ ಕುಟುಂಬದವರ ’ಪ್ರಿ ರೀಲಿಸ್’ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ, ಈ ದಿನ ಸಾಯಿ ಇಲ್ಲದಿರುವುದಕ್ಕೆ ನಾನು ಅವನ ಪರವಾಗಿ ಬಂದಿದ್ದೇನೆ ಎಂದು ಅವರು ಹೇಳಿದರು.</p>.<p>ಸಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ, ಅವನು ಕೋಮಾದಲ್ಲಿ ಇದ್ದಾನೆ, ಇಲ್ಲಿಯವರೆಗೂ ಕಣ್ಣು ಬಿಟ್ಟಿಲ್ಲ, ಆದರೆ ವೆಂಟಿಲೇಟರ್ ಇಲ್ಲದೆ ಉಸಿರಾಡುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ ಎಂದು ತೆಲುಗು ಮಾಧ್ಯಮಗಳ ವರದಿ ಮಾಡಿವೆ.</p>.<p>ಸಾಯಿ ಬಗ್ಗೆ ಮಾಧ್ಯಮಗಳು ತಪ್ಪು ವರದಿ ಪ್ರಕಟಿಸಿದ್ದವು, ಅವನು ಅತಿ ವೇಗವಾಗಿ ಚಾಲನೆ ಮಾಡಿರಲಿಲ್ಲ, ಆಟೋವೊಂದನ್ನು ಹಿಂದಿಕ್ಕಲು ಹೋಗಿ ಬೈಕ್ ಸ್ಕಿಡ್ ಆಗಿತ್ತು ಎಂದು ಪವನ್ ಕಲ್ಯಾಣ್ ಹೇಳಿದರು.</p>.<p>ಸಾಯಿ ತೇಜ್ಗೆಕತ್ತಿನ ಮೂಳೆ ಮುರಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪವನ್ ಹೇಳಿದರು.</p>.<p>ಪವನ್ ಕಲ್ಯಾಣ್ ಅವರ ಸಹೋದರಿ ವಿಜಯಾ ದುರ್ಗಾರ ಮಗ ಸಾಯಿ ಧರಂ ತೇಜ್.</p>.<p>ದೇವ ಕಟ್ಟಾನಿರ್ದೇಶನದಲ್ಲಿ ’ರಿಪಬ್ಲಿಕ್’ ಸಿನಿಮಾ ಮೂಡಿಬಂದಿದೆ. ನಾಯಕಿಯಾಗಿ ಐಶ್ವರ್ಯಾ ರಾಜೇಶ್, ಮುಖ್ಯ ಪಾತ್ರಗಳಲ್ಲಿ ರಮ್ಯಾ ಕೃಷ್ಣ, ಜಗಪತಿ ಬಾಬು ನಟಿಸಿದ್ದಾರೆ.</p>.<p>ಈ ಸಿನಿಮಾ ಅಕ್ಟೋಬರ್ 1ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ತೆಲುಗು ನಟ ಸಾಯಿ ಧರಂ ತೇಜ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕೋಮಾದಲ್ಲಿದ್ದಾರೆ ಎಂದು ನಟ ಪವನ್ ಕಲ್ಯಾಣ್ ತಿಳಿಸಿದ್ದಾರೆ.</p>.<p>ಸಾಯಿ ತೇಜ್ ಅಭಿನಯದ ’ರಿಪಬ್ಲಿಕ್’ ಸಿನಿಮಾದ ’ಪ್ರಿ ರೀಲಿಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p>.<p>ಸಾಮಾನ್ಯವಾಗಿ ನಾನು ನಮ್ಮ ಕುಟುಂಬದವರ ’ಪ್ರಿ ರೀಲಿಸ್’ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ, ಈ ದಿನ ಸಾಯಿ ಇಲ್ಲದಿರುವುದಕ್ಕೆ ನಾನು ಅವನ ಪರವಾಗಿ ಬಂದಿದ್ದೇನೆ ಎಂದು ಅವರು ಹೇಳಿದರು.</p>.<p>ಸಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ, ಅವನು ಕೋಮಾದಲ್ಲಿ ಇದ್ದಾನೆ, ಇಲ್ಲಿಯವರೆಗೂ ಕಣ್ಣು ಬಿಟ್ಟಿಲ್ಲ, ಆದರೆ ವೆಂಟಿಲೇಟರ್ ಇಲ್ಲದೆ ಉಸಿರಾಡುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ ಎಂದು ತೆಲುಗು ಮಾಧ್ಯಮಗಳ ವರದಿ ಮಾಡಿವೆ.</p>.<p>ಸಾಯಿ ಬಗ್ಗೆ ಮಾಧ್ಯಮಗಳು ತಪ್ಪು ವರದಿ ಪ್ರಕಟಿಸಿದ್ದವು, ಅವನು ಅತಿ ವೇಗವಾಗಿ ಚಾಲನೆ ಮಾಡಿರಲಿಲ್ಲ, ಆಟೋವೊಂದನ್ನು ಹಿಂದಿಕ್ಕಲು ಹೋಗಿ ಬೈಕ್ ಸ್ಕಿಡ್ ಆಗಿತ್ತು ಎಂದು ಪವನ್ ಕಲ್ಯಾಣ್ ಹೇಳಿದರು.</p>.<p>ಸಾಯಿ ತೇಜ್ಗೆಕತ್ತಿನ ಮೂಳೆ ಮುರಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪವನ್ ಹೇಳಿದರು.</p>.<p>ಪವನ್ ಕಲ್ಯಾಣ್ ಅವರ ಸಹೋದರಿ ವಿಜಯಾ ದುರ್ಗಾರ ಮಗ ಸಾಯಿ ಧರಂ ತೇಜ್.</p>.<p>ದೇವ ಕಟ್ಟಾನಿರ್ದೇಶನದಲ್ಲಿ ’ರಿಪಬ್ಲಿಕ್’ ಸಿನಿಮಾ ಮೂಡಿಬಂದಿದೆ. ನಾಯಕಿಯಾಗಿ ಐಶ್ವರ್ಯಾ ರಾಜೇಶ್, ಮುಖ್ಯ ಪಾತ್ರಗಳಲ್ಲಿ ರಮ್ಯಾ ಕೃಷ್ಣ, ಜಗಪತಿ ಬಾಬು ನಟಿಸಿದ್ದಾರೆ.</p>.<p>ಈ ಸಿನಿಮಾ ಅಕ್ಟೋಬರ್ 1ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>