<figcaption>""</figcaption>.<p>ಅದು ‘ಸಲಗ’ ಚಿತ್ರದ ಹಾಡು ಬಿಡುಗಡೆಯ ಸಮಾರಂಭ. ಚರಣ್ ರಾಜ್ ಸಂಗೀತ ಸಂಯೋಜನೆಯ ‘ಸೂರಿಯಣ್ಣ...’ ಹಾಡಿನ ಬಿಡುಗಡೆಗೆ ನಟ ಶಿವರಾಜ್ಕುಮಾರ್ ಆಗಮಿಸಿದ್ದರು.</p>.<p>‘ಸಲಗ ಚಿತ್ರತಂಡವನ್ನು ನೋಡಿದರೆ ನನಗೆ ‘ಟಗರು’ ಚಿತ್ರ ನೆನಪಿಗೆ ಬರುತ್ತದೆ. ಚರಣ್ ರಾಜ್ ದೇಶದ ಉತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಏನೇ ಕೊಟ್ಟರೂ ಅದಕ್ಕೆ ಉತ್ತಮ ಸಂಗೀತ ನೀಡಿ ಜನರಿಗೆ ತಲುಪಿಸುವ ಸಾಮರ್ಥ್ಯ ಅವರಲ್ಲಿದೆ’ ಎಂದು ಹೊಗಳಿದರು ಶಿವರಾಜ್ಕುಮಾರ್.</p>.<p>‘ದುನಿಯಾ ವಿಜಯ್ ಅವರು ನಟನೆಯ ಜೊತೆಗೆ ನಿರ್ದೇಶನಕ್ಕೂ ಇಳಿದಿರುವುದು ಸಂತಸ ತಂದಿದೆ. ನಾನು ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಹಾಗಾಗಿ, ನನಗೆ ನಿರ್ದೇಶನ ಮಾಡಲು ಆಗುವುದಿಲ್ಲ. ಇನ್ನೂ ಎರಡೂವರೆ ದಶಕಗಳ ಕಾಲ ಹೀಗೆಯೇ ಇರುತ್ತೇನೆ’ ಎಂದು ನಕ್ಕರು.</p>.<p>‘ಕೆ.ಪಿ. ಶ್ರೀಕಾಂತ್ ನಮ್ಮ ಕುಟುಂಬದಲ್ಲಿ ಇದ್ದಾರೆ. ಫ್ಯಾಮಿಲಿ ಎಂದಾಗ ಮನಸ್ತಾಪ ಸಹಜ. ಇದು ಇದ್ದಾಗಲೇ ಅದಕ್ಕೊಂದು ಬೆಲೆ ಇರುತ್ತದೆ’ ಎಂದರು.</p>.<p>‘ಸಲಗ’ ಚಿತ್ರದಲ್ಲಿ ಭೂಗತಲೋಕದ ಸುತ್ತ ಕಥೆ ಹೊಸೆಯಲಾಗಿದೆ. ಅಮಾಯಕ ಕ್ರಿಮಿನಲ್ ಒಬ್ಬನ ಕಥೆ ಇದು. ದುನಿಯಾ ವಿಜಯ್, ನಾಯಕಿ ಸಂಜನಾ ಆನಂದ್, ಚರಣ್ ರಾಜ್, ಧನಂಜಯ್, ಅಚ್ಯುತಕುಮಾರ್ ಅನುಭವ ಹಂಚಿಕೊಂಡರು. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ದುನಿಯಾ ವಿಜಯ್ -ಕಿರಣ್ ಸಾಹಿತ್ಯದ ಗೀತೆಗೆ ತಮಿಳಿನ ಆಂಥೋಣಿ ದಾಸ್ ಧ್ವನಿಯಾಗಿದ್ದಾರೆ. ಶೀಘ್ರವೇ, ಉಳಿದ ನಾಲ್ಕು ಹಾಡುಗಳು ಬಿಡುಗಡೆಯಾಗಲಿವೆ.</p>.<figcaption><strong>ದುನಿಯಾ ವಿಜಯ್, ಧನಂಜಯ್, ಚರಣ್ ರಾಜ್, ಶಿವರಾಜ್ಕುಮಾರ್</strong></figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p>ಅದು ‘ಸಲಗ’ ಚಿತ್ರದ ಹಾಡು ಬಿಡುಗಡೆಯ ಸಮಾರಂಭ. ಚರಣ್ ರಾಜ್ ಸಂಗೀತ ಸಂಯೋಜನೆಯ ‘ಸೂರಿಯಣ್ಣ...’ ಹಾಡಿನ ಬಿಡುಗಡೆಗೆ ನಟ ಶಿವರಾಜ್ಕುಮಾರ್ ಆಗಮಿಸಿದ್ದರು.</p>.<p>‘ಸಲಗ ಚಿತ್ರತಂಡವನ್ನು ನೋಡಿದರೆ ನನಗೆ ‘ಟಗರು’ ಚಿತ್ರ ನೆನಪಿಗೆ ಬರುತ್ತದೆ. ಚರಣ್ ರಾಜ್ ದೇಶದ ಉತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಏನೇ ಕೊಟ್ಟರೂ ಅದಕ್ಕೆ ಉತ್ತಮ ಸಂಗೀತ ನೀಡಿ ಜನರಿಗೆ ತಲುಪಿಸುವ ಸಾಮರ್ಥ್ಯ ಅವರಲ್ಲಿದೆ’ ಎಂದು ಹೊಗಳಿದರು ಶಿವರಾಜ್ಕುಮಾರ್.</p>.<p>‘ದುನಿಯಾ ವಿಜಯ್ ಅವರು ನಟನೆಯ ಜೊತೆಗೆ ನಿರ್ದೇಶನಕ್ಕೂ ಇಳಿದಿರುವುದು ಸಂತಸ ತಂದಿದೆ. ನಾನು ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಹಾಗಾಗಿ, ನನಗೆ ನಿರ್ದೇಶನ ಮಾಡಲು ಆಗುವುದಿಲ್ಲ. ಇನ್ನೂ ಎರಡೂವರೆ ದಶಕಗಳ ಕಾಲ ಹೀಗೆಯೇ ಇರುತ್ತೇನೆ’ ಎಂದು ನಕ್ಕರು.</p>.<p>‘ಕೆ.ಪಿ. ಶ್ರೀಕಾಂತ್ ನಮ್ಮ ಕುಟುಂಬದಲ್ಲಿ ಇದ್ದಾರೆ. ಫ್ಯಾಮಿಲಿ ಎಂದಾಗ ಮನಸ್ತಾಪ ಸಹಜ. ಇದು ಇದ್ದಾಗಲೇ ಅದಕ್ಕೊಂದು ಬೆಲೆ ಇರುತ್ತದೆ’ ಎಂದರು.</p>.<p>‘ಸಲಗ’ ಚಿತ್ರದಲ್ಲಿ ಭೂಗತಲೋಕದ ಸುತ್ತ ಕಥೆ ಹೊಸೆಯಲಾಗಿದೆ. ಅಮಾಯಕ ಕ್ರಿಮಿನಲ್ ಒಬ್ಬನ ಕಥೆ ಇದು. ದುನಿಯಾ ವಿಜಯ್, ನಾಯಕಿ ಸಂಜನಾ ಆನಂದ್, ಚರಣ್ ರಾಜ್, ಧನಂಜಯ್, ಅಚ್ಯುತಕುಮಾರ್ ಅನುಭವ ಹಂಚಿಕೊಂಡರು. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕೆ.ಪಿ. ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ದುನಿಯಾ ವಿಜಯ್ -ಕಿರಣ್ ಸಾಹಿತ್ಯದ ಗೀತೆಗೆ ತಮಿಳಿನ ಆಂಥೋಣಿ ದಾಸ್ ಧ್ವನಿಯಾಗಿದ್ದಾರೆ. ಶೀಘ್ರವೇ, ಉಳಿದ ನಾಲ್ಕು ಹಾಡುಗಳು ಬಿಡುಗಡೆಯಾಗಲಿವೆ.</p>.<figcaption><strong>ದುನಿಯಾ ವಿಜಯ್, ಧನಂಜಯ್, ಚರಣ್ ರಾಜ್, ಶಿವರಾಜ್ಕುಮಾರ್</strong></figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>