ವ್ಯವಸ್ಥೆಯಲ್ಲಿ ನಡೆಯುವ ಶೋಷಣೆ ವಿರುದ್ಧ ಬಂಡೆದ್ದು ಹೋರಾಟಗಾರನಾದವನ ಕಥೆಯನ್ನು ‘ಗೋದ್ರಾ’ಬಿಚ್ಚಿಡಲಿದೆಯಂತೆ. ಈ ಚಿತ್ರದ ಮಾತಿನ ಲೇಪನ (ಡಬ್ಬಿಂಗ್) ಮುಗಿದಿದೆ. ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ. ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಾಗಿ ನೀನಾಸಂ ಸತೀಶ್ ಮತ್ತು ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ.ಸತೀಶ್ ಅವರದ್ದು ಕ್ರಾಂತಿಕಾರಿ ಸುಭಾಷ್ ಪಾತ್ರ. ಈತನ ಸಹಪಾಠಿ ಮತ್ತು ಪ್ರೇಮಿಯಾಗಿ ಶ್ರದ್ಧಾ ಕಾಣಿಸಿಕೊಂಡಿದ್ದು,ನಾಯಕನಿಗೆ ಸರಿಸಮಾನ ಪಾತ್ರ ಇವರದ್ದು. ರಾಜಕಾರಣಿಯ ಪಾತ್ರದಲ್ಲಿ ಅಚ್ಯುತ್ ಕುಮಾರ್ ಹಾಗೂ ಪೈಲಟ್ ಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ.