ಬೆಂಗಳೂರು: ಎಲ್ಲಾ ವರ್ಗದ ಜನರನ್ನು ಆಕರ್ಷಿಸುವ ರಾಮಾಯಣದ ಕಥೆಗಳು, ಧಾರಾವಾಹಿಗಳು ಎಂದಿಗೂ ಹೊಸತರಂತೆ ಕಾಣುತ್ತದೆ. ಕೋವಿಡ್ ಕಾಲದಲ್ಲಿ ಹಿಂದಿ ಭಾಷೆಯ ರಾಮಾಯಣ, ಮಹಾಭಾರತ, ರಾಧಾಕೃಷ್ಣ ಧಾರಾವಾಹಿಗಳು ಕನ್ನಡದಲ್ಲಿ ಪ್ರಸಾರಗೊಂಡು ಜನರನ್ನು ಸೆಳೆದಿದ್ದವು. ಇದೀಗ ಉದಯ ಟಿವಿಯಲ್ಲಿ ಮತ್ತೆ ‘ಶ್ರೀಮದ್ ರಾಮಾಯಣ’ವನ್ನು ಪ್ರಸಾರ ಮಾಡಲಾಗುತ್ತಿದೆ.
ಇದೇ 20ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6 ಕ್ಕೆ ಪ್ರಸಾರ ಮಾಡಲಾಗುತ್ತಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಉದಯ ಟಿವಿ ‘ಅಯೋಧ್ಯೆಯ ಪುತ್ರ, ಕಿಷ್ಕಿಂದೆಯ ಮಿತ್ರ, ಶುರುವಾಗಲಿದೆ ಮರ್ಯಾದಾ ಪುರುಷೋತ್ತಮನ ಜೀವನಗಾಥೆ. ಹೊಚ್ಚಹೊಸ ಧಾರಾವಾಹಿ 'ಶ್ರೀಮದ್ ರಾಮಾಯಣ' ಮೇ 20 ರಿಂದ ಸಂಜೆ 6 ಗಂಟೆಗೆ’ ಎಂದು ಬರೆದುಕೊಂಡಿದೆ.