<p>ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುನಿಲ್ ರಾವ್. ಸುನಿಲ್ ಅವರು ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.</p>.<p>‘ಪುರಾಣದ ಕಥೆಯಲ್ಲಿ ಶ್ರೀಕೃಷ್ಣ ನಾರದನಿಗೆ ಶಾಪ ಕೊಡುವ ಸನ್ನಿವೇಶ ಇದೆ. ನಾರದ ಭೂಲೋಕಕ್ಕೆ ಬರುತ್ತಾನೆ. ಆ ಸನ್ನಿವೇಶ ಚಿತ್ರದಲ್ಲಿದೆ. ಅಂಥ ತುಂಟ ಕೃಷ್ಣನ ಸನ್ನಿವೇಶವನ್ನು ಆಗಾಗ ತೋರಿಸಿದ್ದೇವೆ. ಚಿತ್ರದಲ್ಲಿ ಇದೊಂದು ವಿಶೇಷ. ಚಿತ್ರದ ಆರಂಭ, ಮಧ್ಯಂತರದಲ್ಲಿ ಆಗಾಗ ಅವರು ಕಾಣಿಸಿಕೊಳ್ಳುತ್ತಾರೆ. ಶ್ರೀಕೃಷ್ಣನ ಪಾತ್ರ ಅವರಿಗೆ ತುಂಬಾ ಹೊಂದುತ್ತದೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದು ಶ್ರೀನಿ ಹೇಳಿದರು.</p>.<p>‘ಚಿತ್ರದ ಬಹುತೇಕ ಭಾಗ ಚಿತ್ರೀಕರಣ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಮುಕ್ತಾಯ ಆಗಲಿದೆ. ಮೊದಲಾರ್ಧ ಭಾಗದ ಡಬ್ಬಿಂಗ್ ಮುಗಿದಿದೆ. ದ್ವಿತೀಯಾರ್ಧದ ಸಂಕಲನ ನಡೆದಿದೆ. ಜೂನ್ ವೇಳೆಗೆ ಬಿಡುಗಡೆಗೆ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಶ್ರೀನಿ ಹೇಳಿದರು.</p>.<p>‘ಕೋವಿಡ್ ಕಾರಣಕ್ಕೆ ಚಿತ್ರೀಕರಣ ಸ್ವಲ್ಪ ನಿಧಾನಗತಿಯಲ್ಲಿ ಸಾಗಿತು. ಕೆಲವು ಕಲಾವಿದರೂ ಕೋವಿಡ್ಗೆ ಒಳಗಾದರು. ಹೀಗಾಗಿ ಚಿತ್ರದ ಎಲ್ಲ ಕೆಲಸಗಳಲ್ಲೂ ವಿಳಂಬವಾಯಿತು’ ಎಂದರು ಶ್ರೀನಿ</p>.<p>ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಇದ್ದಾರೆ. ಸಿಹಿ ಕಹಿ ಚಂದ್ರು,ಎಸ್.ನಾರಾಯಣ್, ಆರ್.ಟಿ. ರಮಾ, ಡಿಂಗ್ರಿ ನಾಗರಾಜ್ ತಾರಾಗಣದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುನಿಲ್ ರಾವ್. ಸುನಿಲ್ ಅವರು ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.</p>.<p>‘ಪುರಾಣದ ಕಥೆಯಲ್ಲಿ ಶ್ರೀಕೃಷ್ಣ ನಾರದನಿಗೆ ಶಾಪ ಕೊಡುವ ಸನ್ನಿವೇಶ ಇದೆ. ನಾರದ ಭೂಲೋಕಕ್ಕೆ ಬರುತ್ತಾನೆ. ಆ ಸನ್ನಿವೇಶ ಚಿತ್ರದಲ್ಲಿದೆ. ಅಂಥ ತುಂಟ ಕೃಷ್ಣನ ಸನ್ನಿವೇಶವನ್ನು ಆಗಾಗ ತೋರಿಸಿದ್ದೇವೆ. ಚಿತ್ರದಲ್ಲಿ ಇದೊಂದು ವಿಶೇಷ. ಚಿತ್ರದ ಆರಂಭ, ಮಧ್ಯಂತರದಲ್ಲಿ ಆಗಾಗ ಅವರು ಕಾಣಿಸಿಕೊಳ್ಳುತ್ತಾರೆ. ಶ್ರೀಕೃಷ್ಣನ ಪಾತ್ರ ಅವರಿಗೆ ತುಂಬಾ ಹೊಂದುತ್ತದೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದು ಶ್ರೀನಿ ಹೇಳಿದರು.</p>.<p>‘ಚಿತ್ರದ ಬಹುತೇಕ ಭಾಗ ಚಿತ್ರೀಕರಣ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಮುಕ್ತಾಯ ಆಗಲಿದೆ. ಮೊದಲಾರ್ಧ ಭಾಗದ ಡಬ್ಬಿಂಗ್ ಮುಗಿದಿದೆ. ದ್ವಿತೀಯಾರ್ಧದ ಸಂಕಲನ ನಡೆದಿದೆ. ಜೂನ್ ವೇಳೆಗೆ ಬಿಡುಗಡೆಗೆ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಶ್ರೀನಿ ಹೇಳಿದರು.</p>.<p>‘ಕೋವಿಡ್ ಕಾರಣಕ್ಕೆ ಚಿತ್ರೀಕರಣ ಸ್ವಲ್ಪ ನಿಧಾನಗತಿಯಲ್ಲಿ ಸಾಗಿತು. ಕೆಲವು ಕಲಾವಿದರೂ ಕೋವಿಡ್ಗೆ ಒಳಗಾದರು. ಹೀಗಾಗಿ ಚಿತ್ರದ ಎಲ್ಲ ಕೆಲಸಗಳಲ್ಲೂ ವಿಳಂಬವಾಯಿತು’ ಎಂದರು ಶ್ರೀನಿ</p>.<p>ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಇದ್ದಾರೆ. ಸಿಹಿ ಕಹಿ ಚಂದ್ರು,ಎಸ್.ನಾರಾಯಣ್, ಆರ್.ಟಿ. ರಮಾ, ಡಿಂಗ್ರಿ ನಾಗರಾಜ್ ತಾರಾಗಣದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>