ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ಮನೆಗೆ ಐಟಿ ದಾಳಿ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವರ ಸಹಾಯ ಕೋರಿ ನಟಿಯ ಗೆಳೆಯ ಮಥಿಯಾಸ್ ಬೋ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವೃತ್ತಿಪರ ಕರ್ತವ್ಯಗಳಿಗೆ ಬದ್ಧರಾಗಿರುವಂತೆ ಕ್ರೀಡಾ ಸಚಿವರು ಸಲಹೆ ಮಾಡಿದ್ದಾರೆ.
ತಾಪ್ಸಿ ಪನ್ನು ಬಾಯ್ಫ್ರೆಂಡ್ ಮಥಿಯಾಸ್ ಬೋ, ಕೆಲವು ಭಾರತೀಯ ಕ್ರೀಡಾಪಟುಗಳಿಗೆ ತರಬೇತುದಾರನಾಗಿದ್ದು, ಗೆಳತಿಯ ಮನೆಯ ಮೇಲೆ ಐಟಿ ದಾಳಿಯಿಂದ ಮನೆಯಲ್ಲಿ ಅನಗತ್ಯ ಒತ್ತಡ ಉಂಟಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ಬಾಲಿವುಡ್ ನಟಿ ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್ ಮನೆಗಳಿಗೆ ನಡೆಸಿದ ಐಟಿ ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಅಸ್ತಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಆದಾಯ ಇಲಾಖೆ ಗುರುವಾರ ತಿಳಿಸಿತ್ತು.
Finding myself in a bit of turmoil. Representing 🇮🇳 for the first time as a coach for some great athletes, meanwhile I-T department is raiding Taapsee’s houses back home, putting unnecessary stress on her family, especially her parents. 🤷♂️. @KirenRijiju please do something👍🏼.
— Mathias Boe (@mathiasboe) March 4, 2021
'ನಾನು ಗೊಂದಲದಲ್ಲಿದ್ದೇನೆ. ಕೆಲವು ಶ್ರೇಷ್ಠ ಕ್ರೀಡಾಪಟುಗಳಿಗೆ ತರಬೇತುದಾರನಾಗಿ ಭಾರತವನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದೇನೆ. ಈ ಮಧ್ಯೆ ತಾಪ್ಸಿ ಪನ್ನು ಮನೆಗೆ ಐಟಿ ದಾಳಿ ನಡೆಯುತ್ತಿದ್ದು, ಆಕೆಯ ಕುಟುಂಬದ ಮೇಲೆ ಅನಗತ್ಯ ಒತ್ತಡ ಹೇರಲಾಗುತ್ತಿದೆ. ವಿಶೇಷವಾಗಿಯೂ ಆಕೆಯ ಪೋಷಕರ ಮೇಲೆ. ಕಿರಣ್ ರಿಜಿಜು ದಯವಿಟ್ಟು ಏನಾದರೂ ಮಾಡಿ' ಎಂದು ಮಥಿಯಾಸ್ ವಿನಂತಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಕ್ರೀಡಾ ಸಚಿವರು, ಕಾನೂನುಗಳು ಸರ್ವೋಚ್ಚವಾಗಿದ್ದು, ನಾವದಕ್ಕೆ ಬದ್ಧರಾಗಿರಬೇಕು. ವಿಷಯ ನಿಮ್ಮ ಹಾಗೂ ನನ್ನ ಪರಿಧಿ ಮೀರಿದ್ದಾಗಿದೆ. ಭಾರತೀಯ ಕ್ರೀಡೆಯ ಹಿತದೃಷ್ಟಿಯಿಂದ ನಾವು ನಮ್ಮ ವೃತ್ತಿಪರ ಕರ್ತವ್ಯಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದ್ದಾರೆ.
Law of the land is supreme and we must abide by that. The subject matter is beyond yours and my domain. We must stick to our professional duties in the best interest of Indian Sports. https://t.co/nIIf5C8TXL
— Kiren Rijiju (@KirenRijiju) March 5, 2021
ತಾಪ್ಸಿ ಪನ್ನು ಹಾಗೂ ಕಶ್ಯಪ್ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ರೈತರ ಪ್ರತಿಭಟನೆ ಹಾಗೂ ಪೌರತ್ವ ಕಾನೂನು ವಿರುದ್ಧ ಧ್ವನಿ ಎತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.