ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ತಮಿಳು ನಿರ್ಮಾಪಕ ಕೆ. ಬಾಲು ವಿಧಿವಶ

Last Updated 3 ಜನವರಿ 2021, 7:30 IST
ಅಕ್ಷರ ಗಾತ್ರ

ತಮಿಳಿನ ಖ್ಯಾತ ಸಿನಿಮಾ ನಿರ್ಮಾಪಕ ಕೆ. ಬಾಲು ವಿಧಿವಶರಾಗಿದ್ದಾರೆ. ಪ್ರಭು ಹಾಗೂ ಖುಷ್ಬೂ ನಟನೆಯ ‘ಚಿನ್ನ ತಂಬಿ’ ಸಿನಿಮಾಕ್ಕೆ ಇವರು ನಿರ್ಮಾಪಕರಾಗಿದ್ದರು. ಕೆಪಿ ಫಿಲ್ಮ್ಸ್‌ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾ ತುಂಬಾನೇ ಹೆಸರು ಮಾಡಿತ್ತು. ಇವರ ಸಾವಿಗೆ ತಮಿಳು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಟ ಹಾಗೂ ರಾಜಕಾರಣಿ ಆರ್‌. ಶರತ್‌ ಕುಮಾರ್‌ ‘ಬಾಲು ಅವರ ಆಕಸ್ಮಿಕ ಅಗಲಿಕೆ ನನಗೆ ಶಾಕ್ ನೀಡಿದೆ. ಸಿನಿಮಾ ಕ್ಷೇತ್ರಕ್ಕೆ ಇವರು ನೀಡಿದ ಸೇವೆ ಅಗಣ್ಯ. ಅವರು ಬಹಳ ಬೇಗ ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಸ್ನೇಹಿತರು ಹಾಗೂ ಆತ್ಮೀಯ ಬಳಗಕ್ಕೆ ಅವರ ಸಾವಿನ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ನಿರ್ಮಾಪಕ ವೆಂಕಟೇಶ್ ಪ್ರಭು ಬಾಲು ಅವರ ಫೋಟೊವನ್ನು ಹಂಚಿಕೊಂಡು ‘ಅವರು ಒಬ್ಬ ಅದ್ಭುತ ವ್ಯಕ್ತಿ, ಮಿಸ್‌ ಯು ಅಂಕಲ್‌! ನಿಮ್ಮ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT