<p><strong>ಹೈದರಾಬಾದ್</strong>: ಎಸ್.ಎಸ್. ರಾಜಮೌಳಿ ನಿರ್ದೇಶನದ ಸೂಪರ್ಹಿಟ್ ಸಿನಿಮಾ ‘ಆರ್ಆರ್ಆರ್’ನಲ್ಲಿ ‘ನಾಟು ನಾಟು’ ಹಾಡಿನ ಮೂಲಕ ಜಾಗತಿಕ ಖ್ಯಾತಿ ಗಳಿಸಿರುವ ಗಾಯಕ ರಾಹುಲ್ ಸಿಪ್ಲಿಗುಂಜ್ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕೊಟ್ಟ ಭರವಸೆಯಂತೆ ₹1ಕೋಟಿ ಪ್ರೋತ್ಸಾಹಧನ ನೀಡಿದ್ದಾರೆ.</p><p>ಹೈದರಾಬಾದ್ನಲ್ಲಿ ನಡೆಯುತ್ತಿರುವ ಮಹಾಕಾಳಿ ಹಬ್ಬದ ಉತ್ಸವದಲ್ಲಿ ಸಹಾಯಧನದ ಚೆಕ್ ಅನ್ನು ರಾಹುಲ್ ಅವರಿಗೆ ಹಸ್ತಾಂತರಿಸಲಾಗಿದೆ.</p><p>‘ಆರ್ಆರ್ಆರ್’ ಸಿನಿಮಾದ ಜನಪ್ರಿಯ ‘ನಾಟು ನಾಟು’ ಹಾಡಿಗೆ ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ 2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಸಂಯೋಜಿಸಿದ್ದ ಹಾಡಿಗೆ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲಭೈರವ ಅವರು ಧ್ವನಿ ನೀಡಿದ್ದರು.</p><p>‘ರಾಹುಲ್ ಸಿಪ್ಲಿಗುಂಜ್ ಅವರು ಒಬ್ಬ ಪ್ರತಿಭಾವಂತ ಹಾಡುಗಾರ ಆಗಿದ್ದು ಅವರು ಇಂದಿನ ಯುವ ಪೀಳಿಗೆಗೆ ಮಾದರಿ’ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.</p><p>ರಾಹುಲ್ ಅವರ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದ ಮೇಲೆ ಅವರನ್ನು ಭೇಟಿಯಾಗಿದ್ದ ರೇವಂತ್ ರೆಡ್ಡಿ ಅವರು ತಮ್ಮ ಜೇಬಿನಿಂದ ₹10 ಲಕ್ಷ ಪ್ರೋತ್ಸಾಹ ಧನ ನೀಡಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಜಯಗಳಿಸಿ ಅಧಿಕಾರಕ್ಕೆ ಬಂದರೆ ರಾಹುಲ್ ಅವರಿಗೆ ₹1ಕೋಟಿ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದರು.</p><p>2009ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ 35 ವರ್ಷದ ರಾಹುಲ್ ಅವರು ಹೈದರಾಬಾದ್ನ ಬಡಕುಟುಂಬವೊಂದರಿಂದ ಬಂದಿದ್ದಾರೆ. 2019ರಲ್ಲಿ ತೆಲುಗು ಬಿಗ್ ಬಾಸ್ ವಿಜೇತರಾಗಿದ್ದ ಅವರು ಸಿನಿಮಾಗಳಲ್ಲಿಯೂ ನಟಿಸುತ್ತಾರೆ.</p>.ಹಾಂಟೆಡ್ ಎನ್ನಲಾದ ‘ಅನ್ನಾಬೆಲ್ಲೆ’ ಗೊಂಬೆ ಜೊತೆ ಅಲೆದಾಡುತ್ತಿದ್ದವ ನಿಗೂಢ ಸಾವು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಎಸ್.ಎಸ್. ರಾಜಮೌಳಿ ನಿರ್ದೇಶನದ ಸೂಪರ್ಹಿಟ್ ಸಿನಿಮಾ ‘ಆರ್ಆರ್ಆರ್’ನಲ್ಲಿ ‘ನಾಟು ನಾಟು’ ಹಾಡಿನ ಮೂಲಕ ಜಾಗತಿಕ ಖ್ಯಾತಿ ಗಳಿಸಿರುವ ಗಾಯಕ ರಾಹುಲ್ ಸಿಪ್ಲಿಗುಂಜ್ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕೊಟ್ಟ ಭರವಸೆಯಂತೆ ₹1ಕೋಟಿ ಪ್ರೋತ್ಸಾಹಧನ ನೀಡಿದ್ದಾರೆ.</p><p>ಹೈದರಾಬಾದ್ನಲ್ಲಿ ನಡೆಯುತ್ತಿರುವ ಮಹಾಕಾಳಿ ಹಬ್ಬದ ಉತ್ಸವದಲ್ಲಿ ಸಹಾಯಧನದ ಚೆಕ್ ಅನ್ನು ರಾಹುಲ್ ಅವರಿಗೆ ಹಸ್ತಾಂತರಿಸಲಾಗಿದೆ.</p><p>‘ಆರ್ಆರ್ಆರ್’ ಸಿನಿಮಾದ ಜನಪ್ರಿಯ ‘ನಾಟು ನಾಟು’ ಹಾಡಿಗೆ ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ 2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಸಂಯೋಜಿಸಿದ್ದ ಹಾಡಿಗೆ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲಭೈರವ ಅವರು ಧ್ವನಿ ನೀಡಿದ್ದರು.</p><p>‘ರಾಹುಲ್ ಸಿಪ್ಲಿಗುಂಜ್ ಅವರು ಒಬ್ಬ ಪ್ರತಿಭಾವಂತ ಹಾಡುಗಾರ ಆಗಿದ್ದು ಅವರು ಇಂದಿನ ಯುವ ಪೀಳಿಗೆಗೆ ಮಾದರಿ’ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.</p><p>ರಾಹುಲ್ ಅವರ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದ ಮೇಲೆ ಅವರನ್ನು ಭೇಟಿಯಾಗಿದ್ದ ರೇವಂತ್ ರೆಡ್ಡಿ ಅವರು ತಮ್ಮ ಜೇಬಿನಿಂದ ₹10 ಲಕ್ಷ ಪ್ರೋತ್ಸಾಹ ಧನ ನೀಡಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಜಯಗಳಿಸಿ ಅಧಿಕಾರಕ್ಕೆ ಬಂದರೆ ರಾಹುಲ್ ಅವರಿಗೆ ₹1ಕೋಟಿ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದರು.</p><p>2009ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ 35 ವರ್ಷದ ರಾಹುಲ್ ಅವರು ಹೈದರಾಬಾದ್ನ ಬಡಕುಟುಂಬವೊಂದರಿಂದ ಬಂದಿದ್ದಾರೆ. 2019ರಲ್ಲಿ ತೆಲುಗು ಬಿಗ್ ಬಾಸ್ ವಿಜೇತರಾಗಿದ್ದ ಅವರು ಸಿನಿಮಾಗಳಲ್ಲಿಯೂ ನಟಿಸುತ್ತಾರೆ.</p>.ಹಾಂಟೆಡ್ ಎನ್ನಲಾದ ‘ಅನ್ನಾಬೆಲ್ಲೆ’ ಗೊಂಬೆ ಜೊತೆ ಅಲೆದಾಡುತ್ತಿದ್ದವ ನಿಗೂಢ ಸಾವು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>