ಮೇಲುಕೋಟೆ, ಮೈಸೂರು ಭಾಗದಲ್ಲಿ ಚಿತ್ರೀಕರಣ ಮುಗಿಸಿ, ಕಳೆದ ಎರಡು ದಿನಗಳಿಂದ ಮಾಗಡಿ ರಸ್ತೆಯಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಒಂದು ದಿನವೂ ಬಿಡುವುದಿಲ್ಲದೆ ಚಿತ್ರೀಕರಣ ಸಾಗಿತ್ತು. ಚಿತ್ರತಂಡ ಇದೇ 15ರವರೆಗೆ ಚಿತ್ರೀಕರಣದ ಯೋಜನೆ ಹಾಕಿಕೊಂಡಿತ್ತು. ವರದ ಸಿನಿಮಾ ಮುಗಿದ ತಕ್ಷಣ ಮತ್ತೆ ಮೂರು ಸಿನಿಮಾಗಳಲ್ಲಿ ವಿನೋದ್ ತೊಡಗಿಕೊಳ್ಳಬೇಕಿತ್ತು. ಈಗ ನಮ್ಮನ್ನು ನಂಬಿಕೊಂಡಿದ್ದವರಿಗೆ ಮತ್ತು ಸಹ ಕಲಾವಿದರಿಗೆ ತೊಂದರೆಯಾಗಿಬಿಟ್ಟಿದೆ. ಅಲ್ಲದೆ, ಜಿಮ್ನಲ್ಲಿ ದೇಹ ಹುರಿಗೊಳಿಸಲು (ಬಾಡಿ ವರ್ಕೌಟ್) ಸಾಧ್ಯವಾಗದಂತಾಗಿದೆ ಎಂದು ನಟ ಬೇಸರ ತೋಡಿಕೊಂಡಿರುವುದಾಗಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.