<p>ನಿರ್ದೇಶಕ ಗುರು ದೇಶಪಾಂಡೆ ಖ್ಯಾತ ಬಹುಭಾಷಾ ತಾರೆ, ಸಂಸದೆ ಸುಮಲತಾ ಅಂಬರೀಷ್ ಅವರ ಜೀವನಕಥೆಯನ್ನ ತೆರೆ ಮೇಲೆ ತರಲು ಯೋಚಿಸಿದ್ದಾರೆ ಎಂಬ ಸುದ್ದಿಯೊಂದು ಚಂದನವನದ ಅಂಗಳದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸುಮಲತಾ ಅವರ ವೈಯಕ್ತಿಕ ಜೀವನ, ನಟನೆ ಹಾಗೂ ರಾಜಕೀಯ ಅಂಶಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಗುರು ಸುಮಲತಾ ಅವರನ್ನು ಭೇಟಿ ಮಾಡಿದ್ದರು. ಅವರ ಭೇಟಿಯಿಂದ ಈ ಸುದ್ದಿಗೆ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ. ಆಂಗ್ಲಪತ್ರಿಕೆಯೊಂದರ ಪ್ರಕಾರ ಗುರು ಸುಮಲತಾ ಜೀವನಚರಿತ್ರೆಯನ್ನು 10 ರಿಂದ 15 ಎಪಿಸೋಡ್ಗಳ ವೆಬ್ಸರಣಿ ರೂಪದಲ್ಲಿ ತೆರೆ ಮೇಲೆ ತರುತ್ತಾರಂತೆ.</p>.<p>ಮೂಲಗಳ ಪ್ರಕಾರ 2019ರ ಚುನಾವಣೆಯ ಹಿನ್ನೋಟವನ್ನು ಇದರಲ್ಲಿ ತೋರಿಸಲಾಗುತ್ತದೆ ಎನ್ನಲಾಗುತ್ತಿದೆ. ಈ ಚುನಾವಣೆಯ ಸುಮಲತಾ ಅವರ ರಾಜಕೀಯ ಬದುಕಿಗೆ ದೊಡ್ಡ ತಿರುವು ನೀಡಿತ್ತು. ಆದರೆ ಈ ಪ್ರಾಜೆಕ್ಟ್ನ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.</p>.<p>ರೆಬಲ್ಸ್ಟಾರ್ ಅಂಬರೀಶ್ ಅವರ 2ನೇ ವರ್ಷದ ಪುಣ್ಯತಿಥಿಯಂದು ಅವರನ್ನು ನೆನಪಿಸಿಕೊಂಡು ಅವರೊಂದಿಗಿನ ತಮ್ಮ ನೆಚ್ಚಿನ ಫೋಟೊವನ್ನು ಹಂಚಿಕೊಂಡಿದ್ದ ಸುಮಲತಾ ಭಾವನಾತ್ಮಕ ನುಡಿಗಳನ್ನು ಬರೆದುಕೊಂಡಿದ್ದರು. ತಮ್ಮ ದೀರ್ಘ ಬರಹದಲ್ಲಿ ಅಂಬರೀಶ್ ಸದಾ ನನ್ನೊಂದಿಗೇ ಇರುತ್ತಾರೆ ಎಂದಿದ್ದರು. ಅಂದು ಕಂಠೀರವ ಸ್ಟುಡಿಯೊದಲ್ಲಿರುವ ಅಂಬಿ ಸಮಾಧಿ ಬಳಿ ತೆರಳಿ ನಮನ ಸಲ್ಲಿದ್ದರು. ಆಗ ಸುಮಲತಾ ಅವರೊಂದಿಗೆ ಮಗ ಅಭಿಷೇಕ್ ಹಾಗೂ ನಟ ದರ್ಶನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಿರ್ದೇಶಕ ಗುರು ದೇಶಪಾಂಡೆ ಖ್ಯಾತ ಬಹುಭಾಷಾ ತಾರೆ, ಸಂಸದೆ ಸುಮಲತಾ ಅಂಬರೀಷ್ ಅವರ ಜೀವನಕಥೆಯನ್ನ ತೆರೆ ಮೇಲೆ ತರಲು ಯೋಚಿಸಿದ್ದಾರೆ ಎಂಬ ಸುದ್ದಿಯೊಂದು ಚಂದನವನದ ಅಂಗಳದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸುಮಲತಾ ಅವರ ವೈಯಕ್ತಿಕ ಜೀವನ, ನಟನೆ ಹಾಗೂ ರಾಜಕೀಯ ಅಂಶಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಗುರು ಸುಮಲತಾ ಅವರನ್ನು ಭೇಟಿ ಮಾಡಿದ್ದರು. ಅವರ ಭೇಟಿಯಿಂದ ಈ ಸುದ್ದಿಗೆ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ. ಆಂಗ್ಲಪತ್ರಿಕೆಯೊಂದರ ಪ್ರಕಾರ ಗುರು ಸುಮಲತಾ ಜೀವನಚರಿತ್ರೆಯನ್ನು 10 ರಿಂದ 15 ಎಪಿಸೋಡ್ಗಳ ವೆಬ್ಸರಣಿ ರೂಪದಲ್ಲಿ ತೆರೆ ಮೇಲೆ ತರುತ್ತಾರಂತೆ.</p>.<p>ಮೂಲಗಳ ಪ್ರಕಾರ 2019ರ ಚುನಾವಣೆಯ ಹಿನ್ನೋಟವನ್ನು ಇದರಲ್ಲಿ ತೋರಿಸಲಾಗುತ್ತದೆ ಎನ್ನಲಾಗುತ್ತಿದೆ. ಈ ಚುನಾವಣೆಯ ಸುಮಲತಾ ಅವರ ರಾಜಕೀಯ ಬದುಕಿಗೆ ದೊಡ್ಡ ತಿರುವು ನೀಡಿತ್ತು. ಆದರೆ ಈ ಪ್ರಾಜೆಕ್ಟ್ನ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.</p>.<p>ರೆಬಲ್ಸ್ಟಾರ್ ಅಂಬರೀಶ್ ಅವರ 2ನೇ ವರ್ಷದ ಪುಣ್ಯತಿಥಿಯಂದು ಅವರನ್ನು ನೆನಪಿಸಿಕೊಂಡು ಅವರೊಂದಿಗಿನ ತಮ್ಮ ನೆಚ್ಚಿನ ಫೋಟೊವನ್ನು ಹಂಚಿಕೊಂಡಿದ್ದ ಸುಮಲತಾ ಭಾವನಾತ್ಮಕ ನುಡಿಗಳನ್ನು ಬರೆದುಕೊಂಡಿದ್ದರು. ತಮ್ಮ ದೀರ್ಘ ಬರಹದಲ್ಲಿ ಅಂಬರೀಶ್ ಸದಾ ನನ್ನೊಂದಿಗೇ ಇರುತ್ತಾರೆ ಎಂದಿದ್ದರು. ಅಂದು ಕಂಠೀರವ ಸ್ಟುಡಿಯೊದಲ್ಲಿರುವ ಅಂಬಿ ಸಮಾಧಿ ಬಳಿ ತೆರಳಿ ನಮನ ಸಲ್ಲಿದ್ದರು. ಆಗ ಸುಮಲತಾ ಅವರೊಂದಿಗೆ ಮಗ ಅಭಿಷೇಕ್ ಹಾಗೂ ನಟ ದರ್ಶನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>