‘ನಾವು ಚಿತ್ರಕಥೆ ಹೇಳಿದಾಗ, ‘ನಾನು ಕಾಲೇಜಿಗೆ ಹೋಗಿಲ್ಲ. ನಿಮ್ಮ ನಿರ್ದೇಶನದಂತೆ ನಡೆಯುತ್ತೇನೆ’ ಎಂದು ಪುನೀತ್ ರಾಜ್ಕುಮಾರ್ ಅವರು ಹೇಳಿದ್ದರು. ಒಂದೂವರೆ ವರ್ಷ, ಈ ಚಿತ್ರಕ್ಕಾಗಿ ಅವರು ಮೀಸಲಿಟ್ಟಿರುವುದು ನೋಡಿದರೆ ಅವರಿಗೆ ಈ ಚಿತ್ರದ ಮೇಲಿದ್ದ ನಂಬಿಕೆಯನ್ನು ಅದು ತೋರಿಸುತ್ತದೆ. ಇದು ನನ್ನ ಹ್ಯಾಟ್ರಿಕ್ ಯಶಸ್ಸು ಎನ್ನುವುದಕ್ಕಿಂತ ಶ್ರಮಕ್ಕೆ ಒಂದು ಬೆಲೆಯನ್ನು ದೇವರು ಹಾಗೂ ಜನರು ನೀಡಿದ್ದಾರೆ. ಶಿವರಾಜ್ಕುಮಾರ್ ಅವರೂ ಚಿತ್ರದ ಯಶಸ್ಸು ಕಂಡು ಶುಭಹಾರೈಸಿದ್ದಾರೆ’ ಎಂದರು.