<p>`ಅಭಿನಯ ಎನ್ನುವುದು ನನಗೆ ವೃತ್ತಿಯಲ್ಲ. ತಾಯಿ ಮಗುವನ್ನು ಪ್ರೀತಿಸುವುದಕ್ಕೆ ಏನನ್ನುತ್ತೇವೆಯೋ ಅಂಥ ಭಾವ ನನಗೆ ಅಭಿನಯದ ಕಡೆಗಿದೆ~ ಎಂದರು ಸ್ನೇಹಾ ಸ್ವಾಭಿಮಾನಿ. `ಸ್ವಾಭಿಮಾನಿ~ ಎಂಬ ಪದಕ್ಕೆ ಮನಸೋತು ಅದನ್ನು ತಮ್ಮ ಹೆಸರಿನ ಮುಂದೆ ಬಳಸುವ ಸ್ನೇಹಾಗೆ, ತಮ್ಮ ಹೆಸರಿನವರು ತುಂಬಾ ಜನ ಇರುವುದರಿಂದ ಆ ಪದ ತಮ್ಮನ್ನು ವಿಭಿನ್ನ ಎನ್ನುವಂತೆ ಮಾಡಿದೆ ಎನ್ನುತ್ತಾರೆ.<br /> <br /> ಸ್ನೇಹಾ ಚಿತ್ರದುರ್ಗ ಜಿಲ್ಲೆ ಬೊಮ್ಮನಕುಂಟೆಯವರು. ಅವರ ತಂದೆ ಮತ್ತು ದೊಡ್ಡಪ್ಪ ಊರಿನ ನಾಟಕಗಳಲ್ಲಿ ಅಭಿನಯಿಸುತ್ತಿದ್ದರಂತೆ. ಅದನ್ನು ನೋಡಿಯೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಸ್ನೇಹಾಗೆ ಗಿರೀಶ್ ಜತ್ತಿ ಅವರ ಪತ್ನಿ ಸುಧಾ ಅವರ ಸಹಕಾರ ಸಿಕ್ಕಿತು. <br /> <br /> ಪದವಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಅಭಿನಯದ ಕಡೆ ವಾಲಿ ಸ್ನೇಹಾ ಮೊದಲಿಗೆ `ಕದನ~ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಅದಾದ ನಂತರ ಅವರು ಸುಮಾರು 30 ಧಾರಾವಾಹಿಗಳಿಗೆ ಬಣ್ಣ ಹಚ್ಚಿದರು. <br /> <br /> `ಸೌಭಾಗ್ಯವತಿ~, `ಮಹಾನವಮಿ~, `ಕಸ್ತೂರಿ ನಿವಾಸ~, `ರಂಗೋಲಿ~, `ಮಾಂಗಲ್ಯ~, `ತಾಯವ್ವ~, `ಕಲ್ಯಾಣಿ~, `ಗುಪ್ತಗಾಮಿನಿ~ ಹೀಗೆ ಅವಕಾಶಗಳು ಸಿಗುತ್ತಾ ಹೋದವು. ಸದ್ಯ `ನನ್ನ ಪ್ರೀತಿಯ ಶ್ರೀಮತಿ~, `ಅಳುಗುಳಿಮನೆ~, `ಕಾಮನಬಿಲ್ಲು~, `ಅರುಣರಾಗ~ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. <br /> <br /> ಒಟ್ಟೊಟ್ಟಿಗೆ ಮೂರ್ನಾಲ್ಕು ಧಾರಾವಾಹಿಗಳಲ್ಲಿ ನಟಿಸುವುದು ತಮಗೆ ಗೊಂದಲವನ್ನೇನು ತರುವುದಿಲ್ಲ ಎನ್ನುವ ಅವರು ಆಯಾ ಪಾತ್ರಕ್ಕೆ ತಕ್ಕಂತೆ ಮೂಡು ಬದಲಾಯಿಸುವೆ ಎನ್ನುತ್ತಾರೆ.<br /> <br /> `ನನ್ನ ಪ್ರೀತಿಯ ಶ್ರೀಮತಿ~ಯಲ್ಲಿ ಸೌಮ್ಯ ಸ್ವಭಾವದ ರೇವತಿ, `ಅರುಣರಾಗ~ದಲ್ಲಿ ಆಧುನಿಕ ಹುಡುಗಿ, `ಕಾಮನಬಿಲ್ಲು~ನಲ್ಲಿ ವಿಧವೆ, `ಅಳುಗುಳಿಮನೆ~ಯಲ್ಲಿ ಮಾನಸಿಕ ಅಸ್ವಸ್ಥೆಯ ಪಾತ್ರ ನಿರ್ವಹಿಸುತ್ತಿರುವ ಸ್ನೇಹಾಗೆ ಎಲ್ಲವೂ ಸವಾಲು ಎನಿಸಿದೆ.<br /> <br /> ಇದರ ನಡುವೆ ರಂಗಭೂಮಿಯಲ್ಲಿಯೂ ಆಸಕ್ತಿ ಬೆಳೆಸಿಕೊಂಡಿರುವ ಸ್ನೇಹಾ `ಅಂಬಾರಿ~ ತಂಡದಲ್ಲಿ ಸಕ್ರಿಯರಾಗಿದ್ದಾರೆ. `ಮಾಯೆಯಂತೆ ಮಾಯೆ~ ನಾಟಕದಲ್ಲಿ ನಟಿಸಿರುವ ಅವರು ಹಲವು ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ನಿಭಾಯಿಸಿದವರು.<br /> <br /> `ನಾನು ಎಂದೂ ಕಳಪೆ ಎನ್ನುವ ಮಟ್ಟಕ್ಕೆ ನಟಿಸುತ್ತಿರಲಿಲ್ಲ. ಆದರೆ ಇದೀಗ ನನ್ನ ನಟನೆ ಹದ ಕಂಡುಕೊಂಡಿದೆ. ನಾನು ಅಂದುಕೊಂಡಂತೆ ನಟಿಸುತ್ತಿದ್ದೇನೆ~ ಎನ್ನುತ್ತಾರೆ.<br /> `ನನಗೆ ಸಿನಿಮಾ ನೋಡುವುದು ಒಂಥರಾ ಹುಚ್ಚು. ರಾಜ್ಕುಮಾರ್- ಕಲ್ಪನಾ ಜೋಡಿಯ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಅವುಗಳನ್ನು ನೋಡಿಯೇ ನಾನು ನನ್ನ ಅಭಿನಯವನ್ನು ತಿದ್ದಿಕೊಳ್ಳುವುದು~ ಎನ್ನುವ ಸ್ನೇಹಾಗೆ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸುವಾಸೆ ಇದೆ. <br /> <br /> `ಕಾಲ್ಗೆಜ್ಜೆ~, `ಒಲವೇ ವಿಸ್ಮಯ~, `ನಿನ್ನಲ್ಲೇ~ ಮುಂತಾದ ಸಿನಿಮಾಗಳಲ್ಲೂ ಕಾಣಿಸಿಕೊಂಡಿರುವ ಅವರಿಗೆ ಗ್ಲಾಮರ್ ಇಷ್ಟವಿಲ್ಲ. ಅದರಿಂದ ಕಿರುತೆರೆಯೇ ಅಚ್ಚುಮೆಚ್ಚು ಎನ್ನುವ ಸ್ನೇಹಾ ಒಪ್ಪಿಕೊಂಡ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸುತ್ತಾರಂತೆ.<br /> <br /> ಬಿಡುವಿನ ಸಮಯದಲ್ಲಿ ಪುಸ್ತಕ ಓದುವ, ಸಿನಿಮಾಗಳನ್ನು ನೋಡುವ, ಸಂಗೀತ ಆಲಿಸುವ ಸ್ನೇಹಾಗೆ ತಮಿಳು ಧಾರಾವಾಹಿಯಿಂದಲೂ ಅವಕಾಶ ಬಂದಿತ್ತಂತೆ. ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ನಿರಾಕರಿಸಿರುವ ಅವರು ತೆಲುಗು ಭಾಷೆಯಲ್ಲಿ ಅವಕಾಶ ಬಂದರೆ ನಟಿಸುವುದಾಗಿ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಅಭಿನಯ ಎನ್ನುವುದು ನನಗೆ ವೃತ್ತಿಯಲ್ಲ. ತಾಯಿ ಮಗುವನ್ನು ಪ್ರೀತಿಸುವುದಕ್ಕೆ ಏನನ್ನುತ್ತೇವೆಯೋ ಅಂಥ ಭಾವ ನನಗೆ ಅಭಿನಯದ ಕಡೆಗಿದೆ~ ಎಂದರು ಸ್ನೇಹಾ ಸ್ವಾಭಿಮಾನಿ. `ಸ್ವಾಭಿಮಾನಿ~ ಎಂಬ ಪದಕ್ಕೆ ಮನಸೋತು ಅದನ್ನು ತಮ್ಮ ಹೆಸರಿನ ಮುಂದೆ ಬಳಸುವ ಸ್ನೇಹಾಗೆ, ತಮ್ಮ ಹೆಸರಿನವರು ತುಂಬಾ ಜನ ಇರುವುದರಿಂದ ಆ ಪದ ತಮ್ಮನ್ನು ವಿಭಿನ್ನ ಎನ್ನುವಂತೆ ಮಾಡಿದೆ ಎನ್ನುತ್ತಾರೆ.<br /> <br /> ಸ್ನೇಹಾ ಚಿತ್ರದುರ್ಗ ಜಿಲ್ಲೆ ಬೊಮ್ಮನಕುಂಟೆಯವರು. ಅವರ ತಂದೆ ಮತ್ತು ದೊಡ್ಡಪ್ಪ ಊರಿನ ನಾಟಕಗಳಲ್ಲಿ ಅಭಿನಯಿಸುತ್ತಿದ್ದರಂತೆ. ಅದನ್ನು ನೋಡಿಯೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಸ್ನೇಹಾಗೆ ಗಿರೀಶ್ ಜತ್ತಿ ಅವರ ಪತ್ನಿ ಸುಧಾ ಅವರ ಸಹಕಾರ ಸಿಕ್ಕಿತು. <br /> <br /> ಪದವಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಅಭಿನಯದ ಕಡೆ ವಾಲಿ ಸ್ನೇಹಾ ಮೊದಲಿಗೆ `ಕದನ~ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಅದಾದ ನಂತರ ಅವರು ಸುಮಾರು 30 ಧಾರಾವಾಹಿಗಳಿಗೆ ಬಣ್ಣ ಹಚ್ಚಿದರು. <br /> <br /> `ಸೌಭಾಗ್ಯವತಿ~, `ಮಹಾನವಮಿ~, `ಕಸ್ತೂರಿ ನಿವಾಸ~, `ರಂಗೋಲಿ~, `ಮಾಂಗಲ್ಯ~, `ತಾಯವ್ವ~, `ಕಲ್ಯಾಣಿ~, `ಗುಪ್ತಗಾಮಿನಿ~ ಹೀಗೆ ಅವಕಾಶಗಳು ಸಿಗುತ್ತಾ ಹೋದವು. ಸದ್ಯ `ನನ್ನ ಪ್ರೀತಿಯ ಶ್ರೀಮತಿ~, `ಅಳುಗುಳಿಮನೆ~, `ಕಾಮನಬಿಲ್ಲು~, `ಅರುಣರಾಗ~ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. <br /> <br /> ಒಟ್ಟೊಟ್ಟಿಗೆ ಮೂರ್ನಾಲ್ಕು ಧಾರಾವಾಹಿಗಳಲ್ಲಿ ನಟಿಸುವುದು ತಮಗೆ ಗೊಂದಲವನ್ನೇನು ತರುವುದಿಲ್ಲ ಎನ್ನುವ ಅವರು ಆಯಾ ಪಾತ್ರಕ್ಕೆ ತಕ್ಕಂತೆ ಮೂಡು ಬದಲಾಯಿಸುವೆ ಎನ್ನುತ್ತಾರೆ.<br /> <br /> `ನನ್ನ ಪ್ರೀತಿಯ ಶ್ರೀಮತಿ~ಯಲ್ಲಿ ಸೌಮ್ಯ ಸ್ವಭಾವದ ರೇವತಿ, `ಅರುಣರಾಗ~ದಲ್ಲಿ ಆಧುನಿಕ ಹುಡುಗಿ, `ಕಾಮನಬಿಲ್ಲು~ನಲ್ಲಿ ವಿಧವೆ, `ಅಳುಗುಳಿಮನೆ~ಯಲ್ಲಿ ಮಾನಸಿಕ ಅಸ್ವಸ್ಥೆಯ ಪಾತ್ರ ನಿರ್ವಹಿಸುತ್ತಿರುವ ಸ್ನೇಹಾಗೆ ಎಲ್ಲವೂ ಸವಾಲು ಎನಿಸಿದೆ.<br /> <br /> ಇದರ ನಡುವೆ ರಂಗಭೂಮಿಯಲ್ಲಿಯೂ ಆಸಕ್ತಿ ಬೆಳೆಸಿಕೊಂಡಿರುವ ಸ್ನೇಹಾ `ಅಂಬಾರಿ~ ತಂಡದಲ್ಲಿ ಸಕ್ರಿಯರಾಗಿದ್ದಾರೆ. `ಮಾಯೆಯಂತೆ ಮಾಯೆ~ ನಾಟಕದಲ್ಲಿ ನಟಿಸಿರುವ ಅವರು ಹಲವು ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ನಿಭಾಯಿಸಿದವರು.<br /> <br /> `ನಾನು ಎಂದೂ ಕಳಪೆ ಎನ್ನುವ ಮಟ್ಟಕ್ಕೆ ನಟಿಸುತ್ತಿರಲಿಲ್ಲ. ಆದರೆ ಇದೀಗ ನನ್ನ ನಟನೆ ಹದ ಕಂಡುಕೊಂಡಿದೆ. ನಾನು ಅಂದುಕೊಂಡಂತೆ ನಟಿಸುತ್ತಿದ್ದೇನೆ~ ಎನ್ನುತ್ತಾರೆ.<br /> `ನನಗೆ ಸಿನಿಮಾ ನೋಡುವುದು ಒಂಥರಾ ಹುಚ್ಚು. ರಾಜ್ಕುಮಾರ್- ಕಲ್ಪನಾ ಜೋಡಿಯ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಅವುಗಳನ್ನು ನೋಡಿಯೇ ನಾನು ನನ್ನ ಅಭಿನಯವನ್ನು ತಿದ್ದಿಕೊಳ್ಳುವುದು~ ಎನ್ನುವ ಸ್ನೇಹಾಗೆ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸುವಾಸೆ ಇದೆ. <br /> <br /> `ಕಾಲ್ಗೆಜ್ಜೆ~, `ಒಲವೇ ವಿಸ್ಮಯ~, `ನಿನ್ನಲ್ಲೇ~ ಮುಂತಾದ ಸಿನಿಮಾಗಳಲ್ಲೂ ಕಾಣಿಸಿಕೊಂಡಿರುವ ಅವರಿಗೆ ಗ್ಲಾಮರ್ ಇಷ್ಟವಿಲ್ಲ. ಅದರಿಂದ ಕಿರುತೆರೆಯೇ ಅಚ್ಚುಮೆಚ್ಚು ಎನ್ನುವ ಸ್ನೇಹಾ ಒಪ್ಪಿಕೊಂಡ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸುತ್ತಾರಂತೆ.<br /> <br /> ಬಿಡುವಿನ ಸಮಯದಲ್ಲಿ ಪುಸ್ತಕ ಓದುವ, ಸಿನಿಮಾಗಳನ್ನು ನೋಡುವ, ಸಂಗೀತ ಆಲಿಸುವ ಸ್ನೇಹಾಗೆ ತಮಿಳು ಧಾರಾವಾಹಿಯಿಂದಲೂ ಅವಕಾಶ ಬಂದಿತ್ತಂತೆ. ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ನಿರಾಕರಿಸಿರುವ ಅವರು ತೆಲುಗು ಭಾಷೆಯಲ್ಲಿ ಅವಕಾಶ ಬಂದರೆ ನಟಿಸುವುದಾಗಿ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>