<p>ಈಗಾಗಲೇ ‘ಅಯ್ಯನ ಮನೆ’, ‘ಶೋಧ’ ವೆಬ್ಸರಣಿಗಳ ಮೂಲಕ ಸದ್ದು ಮಾಡಿರುವ ಜೀ5ನ ಮತ್ತೊಂದು ಕನ್ನಡ ವೆಬ್ಸರಣಿ ಪ್ರೇಕ್ಷಕರೆದುರಿಗೆ ಬರಲು ದಿನಾಂಕ ನಿಗದಿಯಾಗಿದೆ. ಅ.31ರಿಂದ ಈ ಸರಣಿ ಸ್ಟ್ರೀಮ್ ಆಗಲಿದ್ದು, ವಿಶೇಷವೇನೆಂದರೆ ನಟ ದಿವಂಗತ ಪುನೀತ್ ರಾಜ್ಕುಮಾರ್ ಎಐ ಮೂಲಕ ಜೀವತಳೆದಿದ್ದಾರೆ. </p>.<p>‘ಪಿಆರ್ಕೆ ಪ್ರೊಡಕ್ಷನ್ಸ್’ ಸಹಯೋಗದಲ್ಲಿ ‘ಮಾರಿಗಲ್ಲು’ ವೆಬ್ಸರಣಿ ನಿರ್ಮಾಣವಾಗಿದೆ. ಕನ್ನಡದ ಮೊಟ್ಟಮೊದಲ ರಾಜಮನೆತನ ಕದಂಬರ ರಾಜ ಮಯೂರವರ್ಮನಾಗಿ ಪುನೀತ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಕದಂಬರ ಸಿರಿ ಸಂಪತ್ತು ಹುಡುಕಿದರೆ ಮತ್ತೆ ಸಿಗಬಹುದೇ ಎನ್ನುವ ಪ್ರಶ್ನೆಯನ್ನೆತ್ತುತ್ತಾ ಈ ಸರಣಿಯ ಟೀಸರ್ ಬಿಡುಗಡೆಯಾಗಿದೆ. ನಟ ಧನಂಜಯ ನಿರೂಪಣೆ ಈ ಟೀಸರ್ಗಿದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಾಲದ ಕಥೆ ಇದರಲ್ಲಿ ಇರಲಿದೆ. ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಕಥೆಯನ್ನು ಇಲ್ಲಿ ಹೆಣೆಯಲಾಗಿದೆ. ಅಲ್ಲದೇ ಶಿರಸಿಯ ಪ್ರಖ್ಯಾತ ಬೇಡರ ವೇಷ ಈ ಸರಣಿಯಲ್ಲಿ ಕಾಣಬಹುದು. </p>.<p>‘ಮಾರಿಗಲ್ಲು’ ವೆಬ್ಸರಣಿಯಲ್ಲಿ ನಟರಾದ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಪ್ರವೀಣ್ ತೇಜ್ ನಟಿಸಿದ್ದಾರೆ. ಎ.ಎಸ್.ಸೂರಜ್, ಪ್ರಶಾಂತ್ ಸಿದ್ದಿ ಮತ್ತು ನಿನಾದ ಹೃತ್ಸಾ ತಾರಾಬಳಗದಲ್ಲಿದ್ದಾರೆ. ಈ ವೆಬ್ಸರಣಿಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಿಸಿದ್ದು, ದೇವರಾಜ್ ಪೂಜಾರಿ ಬರೆದು ನಿರ್ದೇಶಿಸಿದ್ದಾರೆ. ಎಸ್.ಕೆ.ರಾವ್ ಛಾಯಾಚಿತ್ರಗ್ರಹಣ, ಎಲ್.ವಿ. ಮುತ್ತು ಮತ್ತು ಎಲ್.ವಿ. ಗಣೇಶ್ ಸಂಗೀತ ನಿರ್ದೇಶನ ಸರಣಿಗಿದೆ.</p>.<p>‘ಈ ಸರಣಿ ಅಪ್ಪು ಅವರ ಕನಸುಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ. ಪುನೀತ್ ಯಾವಾಗಲೂ ನಮ್ಮ ಕಥೆಗಳನ್ನು ವೆಬ್ಸರಣಿ ಮೂಲಕ ಹೇಳಲು ಬಯಸುತ್ತಿದ್ದರು. ಈ ಕಥೆಗಳು ನಮ್ಮ ನೆಲದಲ್ಲಿ ಬೇರೂರಿದ್ದರೂ ಭಾವನೆಯಲ್ಲಿ ಅವು ಸಾರ್ವತ್ರಿಕ’ ಎನ್ನುತ್ತಾರೆ ಅಶ್ವಿನಿ ಪುನೀತ್ ರಾಜ್ಕುಮಾರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈಗಾಗಲೇ ‘ಅಯ್ಯನ ಮನೆ’, ‘ಶೋಧ’ ವೆಬ್ಸರಣಿಗಳ ಮೂಲಕ ಸದ್ದು ಮಾಡಿರುವ ಜೀ5ನ ಮತ್ತೊಂದು ಕನ್ನಡ ವೆಬ್ಸರಣಿ ಪ್ರೇಕ್ಷಕರೆದುರಿಗೆ ಬರಲು ದಿನಾಂಕ ನಿಗದಿಯಾಗಿದೆ. ಅ.31ರಿಂದ ಈ ಸರಣಿ ಸ್ಟ್ರೀಮ್ ಆಗಲಿದ್ದು, ವಿಶೇಷವೇನೆಂದರೆ ನಟ ದಿವಂಗತ ಪುನೀತ್ ರಾಜ್ಕುಮಾರ್ ಎಐ ಮೂಲಕ ಜೀವತಳೆದಿದ್ದಾರೆ. </p>.<p>‘ಪಿಆರ್ಕೆ ಪ್ರೊಡಕ್ಷನ್ಸ್’ ಸಹಯೋಗದಲ್ಲಿ ‘ಮಾರಿಗಲ್ಲು’ ವೆಬ್ಸರಣಿ ನಿರ್ಮಾಣವಾಗಿದೆ. ಕನ್ನಡದ ಮೊಟ್ಟಮೊದಲ ರಾಜಮನೆತನ ಕದಂಬರ ರಾಜ ಮಯೂರವರ್ಮನಾಗಿ ಪುನೀತ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಕದಂಬರ ಸಿರಿ ಸಂಪತ್ತು ಹುಡುಕಿದರೆ ಮತ್ತೆ ಸಿಗಬಹುದೇ ಎನ್ನುವ ಪ್ರಶ್ನೆಯನ್ನೆತ್ತುತ್ತಾ ಈ ಸರಣಿಯ ಟೀಸರ್ ಬಿಡುಗಡೆಯಾಗಿದೆ. ನಟ ಧನಂಜಯ ನಿರೂಪಣೆ ಈ ಟೀಸರ್ಗಿದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಾಲದ ಕಥೆ ಇದರಲ್ಲಿ ಇರಲಿದೆ. ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಕಥೆಯನ್ನು ಇಲ್ಲಿ ಹೆಣೆಯಲಾಗಿದೆ. ಅಲ್ಲದೇ ಶಿರಸಿಯ ಪ್ರಖ್ಯಾತ ಬೇಡರ ವೇಷ ಈ ಸರಣಿಯಲ್ಲಿ ಕಾಣಬಹುದು. </p>.<p>‘ಮಾರಿಗಲ್ಲು’ ವೆಬ್ಸರಣಿಯಲ್ಲಿ ನಟರಾದ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಪ್ರವೀಣ್ ತೇಜ್ ನಟಿಸಿದ್ದಾರೆ. ಎ.ಎಸ್.ಸೂರಜ್, ಪ್ರಶಾಂತ್ ಸಿದ್ದಿ ಮತ್ತು ನಿನಾದ ಹೃತ್ಸಾ ತಾರಾಬಳಗದಲ್ಲಿದ್ದಾರೆ. ಈ ವೆಬ್ಸರಣಿಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಿಸಿದ್ದು, ದೇವರಾಜ್ ಪೂಜಾರಿ ಬರೆದು ನಿರ್ದೇಶಿಸಿದ್ದಾರೆ. ಎಸ್.ಕೆ.ರಾವ್ ಛಾಯಾಚಿತ್ರಗ್ರಹಣ, ಎಲ್.ವಿ. ಮುತ್ತು ಮತ್ತು ಎಲ್.ವಿ. ಗಣೇಶ್ ಸಂಗೀತ ನಿರ್ದೇಶನ ಸರಣಿಗಿದೆ.</p>.<p>‘ಈ ಸರಣಿ ಅಪ್ಪು ಅವರ ಕನಸುಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ. ಪುನೀತ್ ಯಾವಾಗಲೂ ನಮ್ಮ ಕಥೆಗಳನ್ನು ವೆಬ್ಸರಣಿ ಮೂಲಕ ಹೇಳಲು ಬಯಸುತ್ತಿದ್ದರು. ಈ ಕಥೆಗಳು ನಮ್ಮ ನೆಲದಲ್ಲಿ ಬೇರೂರಿದ್ದರೂ ಭಾವನೆಯಲ್ಲಿ ಅವು ಸಾರ್ವತ್ರಿಕ’ ಎನ್ನುತ್ತಾರೆ ಅಶ್ವಿನಿ ಪುನೀತ್ ರಾಜ್ಕುಮಾರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>