ಸುಬ್ರಾಯ ಹೆಗಡೆ ಚರಿಗೆಯನ್ನು ತೋಟದಲ್ಲಿ ಮುಚ್ಚಿಡುತ್ತಾರೆ. ಅವರಿಬ್ಬರೂ ಜೈಲು ಸೇರಿದ ನಂತರ ಅವರ ತೋಟದಲ್ಲಿ ದೇವಿಗೆ ಬಂಗಾರವಿದ್ದ ಚರಿಗೆ ಕಣ್ಣಿಗೆ ಬೀಳುತ್ತದೆ. ಅದು ನಾಗೇಶ ಹೆಗಡೆಯರದ್ದು ಎಂದೂ ತಿಳಿಯುತ್ತದೆ. ಅದನ್ನು ತನ್ನ ಗುಡಿಸಲಿಗೆ ತಂದು, ಅಡುಗೆ ಒಲೆಯ ಸಮೀಪ ನೆಲದೊಳಗೆ ಬಚ್ಚಿಡುತ್ತಾಳೆ. ಕುಡುಕ ಗಂಡನಿಂದ ಮತ್ತು ಪೊಲೀಸರಿಂದ ಅದನ್ನು ರಕ್ಷಿಸುತ್ತಾಳೆ. ಜೈಲಿನಿಂದ ವಾಪಸು ಬಂದ ನಾಗೇಶ ಹೆಗಡೆಯವರಿಗೆ ದಾಗೀನು ಚರಿಗೆಯನ್ನು ವಾಪಸ್ ನೀಡುತ್ತಾಳೆ. ಆಕೆಯ ಪ್ರಾಮಾಣಿಕತೆಗೆ ಮೆಚ್ಚಿದ ನಾಗೇಶ ಹೆಗಡೆ, ಉಡುಗೊರೆಯಾಗಿ ಕೊಡಲು ಬಂದ ಬಂಗಾರವನ್ನು ತಿರಸ್ಕರಿಸುತ್ತಾಳೆ.