ಕನ್ನಡ ಕಿರುತೆರೆ ನಟಿ ಸುಕೃತಾ ನಾಗ್ ಅವರು ಸಿಗಂದೂರು ದೇವಾಲಯಕ್ಕೆ ಭೇಟಿ ನೀಡಿ ಚೌಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಂ
ADVERTISEMENT
ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.
ಕೃಪೆ: ಇನ್ಸ್ಟಾಗ್ರಾಂ
ದೇವಸ್ಥಾನಕ್ಕೆ ಭೇಟಿ ನೀಡಿರುವ ಚಿತ್ರಗಳನ್ನು ಸುಕೃತಾ ನಾಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಂ
ಸುಕೃತಾ ನಾಗ್ ಅವರು ದೇವಸ್ಥಾನದ ಚಿತ್ರಗಳಿಗೆ ‘ಸಿಗಂದೂರು ಚೌಡೇಶ್ವರಿ ಅಮ್ಮನ ದರ್ಶನ ಪಡೆದಾಗ ನಿಜವಾಗಿಯೂ ಸಂತೋಷವಾಗುತ್ತದೆ. ಅದು ದೇವಾಲಯ ಮಾತ್ರವಲ್ಲ. ನನ್ನ ಮನೆ, ನೆಮ್ಮದಿಯ ತಾಣ‘ ಎಂದು ಬರೆದುಕೊಂಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಂ
ಸುಕೃತಾ ಅವರು ಚೌಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದ್ದಾರೆ.
ಕೃಪೆ: ಇನ್ಸ್ಟಾಗ್ರಾಂ
ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪರಿಸರವನ್ನು ಸುಕೃತಾ ಅವರು ಆನಂದಿಸಿದ್ದಾರೆ.
ಕೃಪೆ: ಇನ್ಸ್ಟಾಗ್ರಾಂ
ಸುಕೃತಾ ನಾಗ್ ಅವರು ‘ಅಗ್ನಿಸಾಕ್ಷಿ’, ‘ಭಾಗ್ಯಲಕ್ಷ್ಮೀ’, ‘ಲಕ್ಷಣ’ ಧಾರಾವಾಹಿಯಲ್ಲಿ ನಟನೆ ಮೂಲಕ ಗಮನ ಸೆಳೆದಿದ್ದರು.