ಬಿಗ್ ಬಾಸ್ ಮನೆಯಲ್ಲಿ ಅದೃಷ್ಟದ ಮೇಲೆ ನಿಂತವರು ಯಾರು ಎಂಬ ಪ್ರಶ್ನೆಗೆ ಬಹುತೇಕರಿಂದ ಶಮಂತ್ ಅವರ ಹೆಸರು ಬಂದಿತು. ಇನ್ನು ಕಠಿಣ ಪರಿಶ್ರಮದಿಂದ ಉಳಿದವರು ಯಾರು? ಎಂಬ ಪ್ರಶ್ನೆಗೆ ಎಲ್ಲರೂ ಅವರವರ ಹೆಸರನ್ನೇ ಹೇಳಿಕೊಂಡರು. ಆಗ ಸುದೀಪ್ ಬೇರೆಯವರ ಹೆಸರನ್ನು ಹೇಳುವಂತೆ ಸ್ಪರ್ಧಿಗಳಿಗೆ ಸೂಚಿಸಿದರು. ಇದೇ ಪ್ರಶ್ನೆ ದಿವ್ಯಾ ಅವರಿಗೂ ಕೇಳಿದಾಗ ಅರವಿಂದ್ ಹೆಸರು ಹೇಳಿದರು. ಆಗ ಪ್ರತಿಕ್ರಿಯಿಸಿದ ಸುದೀಪ್ ಅರವಿಂದ್ ಬಿಟ್ಟು ಬೇರೆಯವರ ಹೆಸರನ್ನೂ ಹೇಳಿ ಎಂದು ಸಣ್ಣಗೆ ಚುಚ್ಚಿದರು.