<p><strong>ಬೆಂಗಳೂರು</strong>: ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯು 79ನೇ ದಿನಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಪೈಪೋಟಿಯೂ ಹೆಚ್ಚಿದೆ. ಈ ಮಧ್ಯೆ, ಮನೆಯಿಂದ ಹೊರಹೋಗಿದ್ದ ಒಬ್ಬ ಸ್ಪರ್ಧಿಯೊಬ್ಬರ ಪುನರಾಗಮನಕ್ಕೆ ವೇದಿಕೆ ಸಜ್ಜಾಗಿದೆ.</p><p>ಹೌದು, ತಮ್ಮ ಮನೆಯಲ್ಲಿ ತುರ್ತು ಪರಿಸ್ಥಿತಿ ಕಾರಣದಿಂದಾಗಿ ಕಳೆದ ವಾರ ಮನೆಗೆ ಹೋಗಿದ್ದ ಗೋಲ್ಡ್ ಸುರೇಶ್ ಮತ್ತೆ ದೊಡ್ಡ ಮನೆಗೆ ಪ್ರವೇಶಿಸುತ್ತಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಭಾನುವಾರದ ಎಪಿಸೋಡ್ನ ಪ್ರೊಮೊದಲ್ಲಿ ಈ ಪ್ರಶ್ನೆಗೆ ಇಂಬು ದೊರೆತಿದೆ. ತಾವು ನಡೆಸುತ್ತಿದ್ದ ಉದ್ಯಮ ಹಳಿ ತಪ್ಪಿದ್ದರಿಂದ ಖುದ್ದು ಹೊರಬರಬೇಕಾಯಿತು. ಈಗ ಎಲ್ಲವೂ ಸರಿಯಾಗಿದೆ ಎಂದು ಇನ್ಸ್ಟಾಗ್ರಾಮ್ ಲೈವ್ನಲ್ಲಿ ಸುರೇಶ್ ಸ್ಪಷ್ಟಪಡಿಸಿದ್ದರು. ಅದರಂತೆ, ಅವರು ಮತ್ತೆ ಬಿಗ್ಬಾಸ್ ಮನೆಗೆ ಬರುತ್ತಿರುವ ಹಾಗಿದೆ.</p><p><strong>ಪ್ರೊಮೊದಲ್ಲಿ ಏನಿದೆ?</strong></p> <p>ತಮ್ಮ ಜೊತೆ ವೇದಿಕೆ ಹಂಚಿಕೊಂಡಿರುವ ಸುರೇಶ್ ಅವರಿಗೆ ಆ ಜಾಗ ನೀವಿಲ್ಲದೆ ಕಾಲಿ ಹೊಡೆಯುತ್ತಿದೆ ಎಂದು ಸುದೀಪ್ ಹೇಳುತ್ತಾರೆ. ಇದಕ್ಕುತ್ತರಿಸಿದ ಸುರೇಶ್, ಈ ಕ್ಷಣಕ್ಕೂ ಬಿಟ್ಟರೆ ಈಗಲೇ ಖುಷಿಯಿಂದ ಮನೆಗೆ ಪ್ರವೇಶಿಸುತ್ತೇನೆ ಎಂದು ಹೇಳಿದ್ದಾರೆ. ಮನೆಯ ಸದಸ್ಯರೆಲ್ಲ ಕುತೂಹಲದಿಂದ ಅವರತ್ತ ನೋಡುವಲ್ಲಿಗೆ ಪ್ರೊಮೊ ಅಂತ್ಯಕಂಡಿದೆ. ರಾತ್ರಿ 9 ಗಂಟೆಗೆ ಪ್ರಸಾರವಾಗುವ ಎಪಿಸೋಡ್ನಲ್ಲಿ ಈ ಕುತೂಹಲಕ್ಕೆ ತೆರೆಬೀಳಲಿದೆ. ಇದರ ಜೊತೆಗೆ ಈ ವಾರ ಮನೆಯಿಂದ ಹೊರಬರುವುದು ಯಾರೂ ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ.</p>. <p>ರಜತ್, ಧನರಾಜ್, ಮೋಕ್ಷಿತಾ, ಹನುಮಂತು, ತ್ರಿವಿಕ್ರಮ್ ಮತ್ತು ನಾಯಕಿ ಭವ್ಯಾ ಗೌಡರಿಂದ ನೇರವಾಗಿ ನಾಮಿನೇಟ್ ಆಗಿರುವ ಐಶ್ವರ್ಯ ಎಲಿಮಿನೇಶನ್ ಅಗ್ನಿಪರೀಕ್ಷೆಯಲ್ಲಿದ್ದಾರೆ.</p> .ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಗೋಲ್ಡ್ ಸುರೇಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯು 79ನೇ ದಿನಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಪೈಪೋಟಿಯೂ ಹೆಚ್ಚಿದೆ. ಈ ಮಧ್ಯೆ, ಮನೆಯಿಂದ ಹೊರಹೋಗಿದ್ದ ಒಬ್ಬ ಸ್ಪರ್ಧಿಯೊಬ್ಬರ ಪುನರಾಗಮನಕ್ಕೆ ವೇದಿಕೆ ಸಜ್ಜಾಗಿದೆ.</p><p>ಹೌದು, ತಮ್ಮ ಮನೆಯಲ್ಲಿ ತುರ್ತು ಪರಿಸ್ಥಿತಿ ಕಾರಣದಿಂದಾಗಿ ಕಳೆದ ವಾರ ಮನೆಗೆ ಹೋಗಿದ್ದ ಗೋಲ್ಡ್ ಸುರೇಶ್ ಮತ್ತೆ ದೊಡ್ಡ ಮನೆಗೆ ಪ್ರವೇಶಿಸುತ್ತಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಭಾನುವಾರದ ಎಪಿಸೋಡ್ನ ಪ್ರೊಮೊದಲ್ಲಿ ಈ ಪ್ರಶ್ನೆಗೆ ಇಂಬು ದೊರೆತಿದೆ. ತಾವು ನಡೆಸುತ್ತಿದ್ದ ಉದ್ಯಮ ಹಳಿ ತಪ್ಪಿದ್ದರಿಂದ ಖುದ್ದು ಹೊರಬರಬೇಕಾಯಿತು. ಈಗ ಎಲ್ಲವೂ ಸರಿಯಾಗಿದೆ ಎಂದು ಇನ್ಸ್ಟಾಗ್ರಾಮ್ ಲೈವ್ನಲ್ಲಿ ಸುರೇಶ್ ಸ್ಪಷ್ಟಪಡಿಸಿದ್ದರು. ಅದರಂತೆ, ಅವರು ಮತ್ತೆ ಬಿಗ್ಬಾಸ್ ಮನೆಗೆ ಬರುತ್ತಿರುವ ಹಾಗಿದೆ.</p><p><strong>ಪ್ರೊಮೊದಲ್ಲಿ ಏನಿದೆ?</strong></p> <p>ತಮ್ಮ ಜೊತೆ ವೇದಿಕೆ ಹಂಚಿಕೊಂಡಿರುವ ಸುರೇಶ್ ಅವರಿಗೆ ಆ ಜಾಗ ನೀವಿಲ್ಲದೆ ಕಾಲಿ ಹೊಡೆಯುತ್ತಿದೆ ಎಂದು ಸುದೀಪ್ ಹೇಳುತ್ತಾರೆ. ಇದಕ್ಕುತ್ತರಿಸಿದ ಸುರೇಶ್, ಈ ಕ್ಷಣಕ್ಕೂ ಬಿಟ್ಟರೆ ಈಗಲೇ ಖುಷಿಯಿಂದ ಮನೆಗೆ ಪ್ರವೇಶಿಸುತ್ತೇನೆ ಎಂದು ಹೇಳಿದ್ದಾರೆ. ಮನೆಯ ಸದಸ್ಯರೆಲ್ಲ ಕುತೂಹಲದಿಂದ ಅವರತ್ತ ನೋಡುವಲ್ಲಿಗೆ ಪ್ರೊಮೊ ಅಂತ್ಯಕಂಡಿದೆ. ರಾತ್ರಿ 9 ಗಂಟೆಗೆ ಪ್ರಸಾರವಾಗುವ ಎಪಿಸೋಡ್ನಲ್ಲಿ ಈ ಕುತೂಹಲಕ್ಕೆ ತೆರೆಬೀಳಲಿದೆ. ಇದರ ಜೊತೆಗೆ ಈ ವಾರ ಮನೆಯಿಂದ ಹೊರಬರುವುದು ಯಾರೂ ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ.</p>. <p>ರಜತ್, ಧನರಾಜ್, ಮೋಕ್ಷಿತಾ, ಹನುಮಂತು, ತ್ರಿವಿಕ್ರಮ್ ಮತ್ತು ನಾಯಕಿ ಭವ್ಯಾ ಗೌಡರಿಂದ ನೇರವಾಗಿ ನಾಮಿನೇಟ್ ಆಗಿರುವ ಐಶ್ವರ್ಯ ಎಲಿಮಿನೇಶನ್ ಅಗ್ನಿಪರೀಕ್ಷೆಯಲ್ಲಿದ್ದಾರೆ.</p> .ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಗೋಲ್ಡ್ ಸುರೇಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>