<p>ರಿಯಲ್ ಎಸ್ಟೇಟ್ ವಂಚನೆ ಆರೋಪದ ಮೇಲೆ ರಿಯಾಲಿಟಿ ಶೋ ನಿರೂಪಕ ಜಯ್ ದುಧಾನೆ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ನಿವೃತ್ತ ಎಂಜಿನಿಯರ್ ಒಬ್ಬರು ಸಲ್ಲಿಸಿದ ದೂರಿನಡಿ ನಿರೂಪಕನನ್ನು ಬಂಧಿಸಲಾಗಿದೆ. ದುಧಾನೆ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ಠಾಣೆಯಲ್ಲಿ ಈಗಾಗಲೇ ಬ್ಯಾಂಕಿಗೆ ಅಡಮಾನ ಇಡಲಾದ ಐದು ವಾಣಿಜ್ಯ ಅಂಗಡಿಗಳನ್ನು ಖರೀದಿಸಲು ಮನವೊಲಿಸಿ ₹4.61 ಕೋಟಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.</p>.BBK12: ಫಿನಾಲೆ ಹೊತ್ತಲ್ಲೇ 5 ಮಂದಿ ನಾಮಿನೇಟ್; ಬಿಗ್ಬಾಸ್ನಿಂದ ಯಾರು ಹೊರಕ್ಕೆ? .ಬಿಗ್ಬಾಸ್ ಇತಿಹಾಸದಲ್ಲೇ ಮೊದಲು ರೆಡ್ ಕಾರ್ಡ್ ಕೊಟ್ಟು ಕಿಕ್ ಔಟ್ ಮಾಡಿದ ಸೇತುಪತಿ.<p>ಫಿಟ್ನೆಸ್ ತರಬೇತುದಾರ, ಮಾಡೆಲ್, ಬಿಗ್ಬಾಸ್ ಮರಾಠಿ ಸೀಸನ್ 3ರ ಸ್ಪರ್ಧಿ ಹಾಗೂ ಸ್ಪ್ಲಿಟ್ಸ್ವಿಲ್ಲಾ 13ನೇ ಸೀಸನ್ ವಿಜೇತರಾಗಿದ್ದ ಜಯ್ ದುಧಾನೆ ಅವರನ್ನು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಮಾನೆ ತಿಳಿಸಿದ್ದಾರೆ. </p><p>ದೂರಿನ ಪ್ರಕಾರ ದುಧಾನೆ, ಸಂತ್ರಸ್ತೆಗೆ ನಕಲಿ ಬ್ಯಾಂಕ್ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ₹4.95 ಕೋಟಿ ಮೌಲ್ಯದ ನಕಲಿ ಡಿಮಾಂಡ್ ಡ್ರಾಫ್ಟ್ ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಆಸ್ತಿಯನ್ನು ವಶಪಡಿಸಿಕೊಳ್ಳಲು ನೋಟಿಸ್ ನೀಡಿದ ನಂತರ ಹಗರಣ ಬೆಳಕಿಗೆ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಿಯಲ್ ಎಸ್ಟೇಟ್ ವಂಚನೆ ಆರೋಪದ ಮೇಲೆ ರಿಯಾಲಿಟಿ ಶೋ ನಿರೂಪಕ ಜಯ್ ದುಧಾನೆ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ನಿವೃತ್ತ ಎಂಜಿನಿಯರ್ ಒಬ್ಬರು ಸಲ್ಲಿಸಿದ ದೂರಿನಡಿ ನಿರೂಪಕನನ್ನು ಬಂಧಿಸಲಾಗಿದೆ. ದುಧಾನೆ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ಠಾಣೆಯಲ್ಲಿ ಈಗಾಗಲೇ ಬ್ಯಾಂಕಿಗೆ ಅಡಮಾನ ಇಡಲಾದ ಐದು ವಾಣಿಜ್ಯ ಅಂಗಡಿಗಳನ್ನು ಖರೀದಿಸಲು ಮನವೊಲಿಸಿ ₹4.61 ಕೋಟಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.</p>.BBK12: ಫಿನಾಲೆ ಹೊತ್ತಲ್ಲೇ 5 ಮಂದಿ ನಾಮಿನೇಟ್; ಬಿಗ್ಬಾಸ್ನಿಂದ ಯಾರು ಹೊರಕ್ಕೆ? .ಬಿಗ್ಬಾಸ್ ಇತಿಹಾಸದಲ್ಲೇ ಮೊದಲು ರೆಡ್ ಕಾರ್ಡ್ ಕೊಟ್ಟು ಕಿಕ್ ಔಟ್ ಮಾಡಿದ ಸೇತುಪತಿ.<p>ಫಿಟ್ನೆಸ್ ತರಬೇತುದಾರ, ಮಾಡೆಲ್, ಬಿಗ್ಬಾಸ್ ಮರಾಠಿ ಸೀಸನ್ 3ರ ಸ್ಪರ್ಧಿ ಹಾಗೂ ಸ್ಪ್ಲಿಟ್ಸ್ವಿಲ್ಲಾ 13ನೇ ಸೀಸನ್ ವಿಜೇತರಾಗಿದ್ದ ಜಯ್ ದುಧಾನೆ ಅವರನ್ನು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಮಾನೆ ತಿಳಿಸಿದ್ದಾರೆ. </p><p>ದೂರಿನ ಪ್ರಕಾರ ದುಧಾನೆ, ಸಂತ್ರಸ್ತೆಗೆ ನಕಲಿ ಬ್ಯಾಂಕ್ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ₹4.95 ಕೋಟಿ ಮೌಲ್ಯದ ನಕಲಿ ಡಿಮಾಂಡ್ ಡ್ರಾಫ್ಟ್ ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಆಸ್ತಿಯನ್ನು ವಶಪಡಿಸಿಕೊಳ್ಳಲು ನೋಟಿಸ್ ನೀಡಿದ ನಂತರ ಹಗರಣ ಬೆಳಕಿಗೆ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>