ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿಯ (ಕೆಬಿಸಿ) 13 ನೇ ಆವೃತ್ತಿಯಲ್ಲಿ 'ಶಾಂದರ್ ಶುಕ್ರವಾರ' ದ ಮೊದಲ ಸೆಲೆಬ್ರಿಟಿ ಅತಿಥಿಗಳಾಗಿ ಕ್ರಿಕೆಟ್ ದಿಗ್ಗಜರಾದ ಸೆಹ್ವಾಗ್ ಮತ್ತು ಗಂಗೂಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಪ್ರೋಮೊವನ್ನು ಒಂದು ವಾರದ ಮೊದಲೇ ಬಿಡುಗಡೆ ಮಾಡುವ ಮೂಲಕ ಬಾರೀ ಕುತೂಹಲ ಮೂಡಿಸಲಾಗಿತ್ತು.ಅಮಿತಾಭ್ ಬಚ್ಚನ್ಅವರು ನಡೆಸಿಕೊಟ್ಟ ಈ ಕಾರ್ಯಕ್ರಮ ಅತಿ ಹೆಚ್ಚು ವೀಕ್ಷಣೆ ಪಡೆದಿದೆ.
ಅಮಿತಾಬ್ ಅವರು ಕೇಳಿದ ಹಲವು ಪ್ರಶ್ನೆಗಳಿಗೆಸೆಹ್ವಾಗ್ ಮತ್ತು ಗಂಗೂಲಿ ಸರಿಯಾದ ಉತ್ತರಗಳನ್ನು ಕೊಟ್ಟು ಇಬ್ಬರೂ ತಲಾ ₹25ಲಕ್ಷಗಳನ್ನು ಗೆದ್ದರು. ಆ ಹಣವನ್ನು ಚಾರಿಟಿ ಟ್ರಸ್ಟ್ಗೆ ನೀಡಿದರು.
ಹಾಟ್ ಸೀಟಿನಲ್ಲಿ ಕುಳಿತಿದ್ದ ಸೆಹ್ವಾಗ್ ಮತ್ತು ಗಂಗೂಲಿ ತಮ್ಮ ಜೀವನದಲ್ಲಿನ ನಡೆದ ಅನೇಕ ಸಂತಸದ ಕ್ಷಣಗಳನ್ನು ಹಂಚಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.