ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗುವ ಈ ಧಾರಾವಾಹಿ, ಕಿರುತೆರೆ ವೀಕ್ಷಕರಿಗೆ ಶ್ರೀಕೃಷ್ಣನ ಲೀಲೆಗಳನ್ನು ತೋರಿಸಲಿದೆ. ಬೆಣ್ಣೆ ಕದಿಯುವ ಮುದ್ದು ಕೃಷ್ಣ, ಗೋಪಿಕೆಯರೊಂದಿಗೆ ಆಡುವ ತುಂಟ ಕೃಷ್ಣ, ಕಂಸನನ್ನು ಕೊಲ್ಲುವ ಧೀರ ಕೃಷ್ಣ, ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ ನಿಂತು, ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಕೃಷ್ಣ.. ಹೀಗೆ ಹಲವು ಕೃಷ್ಣಾವತಾರಗಳನ್ನು ಈ ಧಾರವಾಹಿಯಲ್ಲಿ ತೋರಿಸಲಿದೆ.