ಧಾರಾವಾಹಿಯಲ್ಲಿ ದುರ್ಗಾಳಾಗಿ ದೀಪಾ ಹಿರೇಮಠ್ ಹಾಗು ಚೆಲುವರಾಜ ಆಗಿ ರಂಗಭೂಮಿ ಹಿನ್ನೆಲೆಯ ಮಂಜು ನಟಿಸಿದ್ದಾರೆ. ಕಥಾನಾಯಕಿಯ ತಂದೆಯಾಗಿ ಖ್ಯಾತ ನಟ ಕೀರ್ತಿರಾಜ್ ನಟಿಸಿದ್ದು, ತಾಯಿಯಾಗಿ ನಟಿ ಉಷಾ ಭಂಡಾರಿ ಕಾಣಿಸಿಕೊಳ್ಳಲಿದ್ದಾರೆ. ಕಥಾನಾಯಕನ ತಾಯಿಯಾಗಿ ವೀಣಾ ಸುಂದರ್ ನಟಿಸಿದ್ದು ನುರಿತ ಕಲಾವಿದರ ಬಳಗ ಈ ತಂಡದಲ್ಲಿದೆ. ವಿಷನ್ ಟೈಮ್ಸ್ ಈ ಧಾರಾವಾಹಿಯ ನಿರ್ಮಾಣ ಮಾಡುತ್ತಿದೆ.