<p><strong>ಗೋಲಾಘಾಟ್ (ಅಸ್ಸಾಂ): </strong>2019ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ರಕ್ಷಿಸಿದ್ದ ಎರಡು ಹೆಣ್ಣು ಮರಿಗಳು ಸೇರಿದಂತೆ ಘೇಂಡಾಮೃಗದ ಮೂರು ಮರಿಗಳನ್ನು ಶೀಘ್ರದಲ್ಲೇ ಅರಣ್ಯಕ್ಕೆ ಬಿಡಲಾಗುವುದು ಎಂದು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) ತಿಳಿಸಿದೆ.</p>.<p>‘ಕಾಜಿರಂಗ ರಾಷ್ಟ್ರೀಯ ಉದ್ಯಾನದ ಬಳಿ ರಕ್ಷಿಸಿದ ಈ ಮರಿಗಳನ್ನು ಬಾರ್ಪೆಟಾ ಜಿಲ್ಲೆಯ ಮಾನಸ್ ಹುಲಿ ಸಂರಕ್ಷಿತಾ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. ಅರಣ್ಯಕ್ಕೆ ಬಿಡುವವರೆಗೂ ಅವುಗಳನ್ನು ಜಾನುವಾರುಗಳಿರುವ ಆವರಣದಲ್ಲಿ ಇಡಲಾಗುವುದು. ಕಾಡಿಗೆ ಬಿಡುವ ಮೊದಲು ಅವುಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ‘ ಎಂದು ಡಬ್ಲ್ಯುಟಿಐ ಹೇಳಿಕೆಯಲ್ಲಿ ತಿಳಿಸಿದೆ.</p>.<p>ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ಈ ಮರಿಗಳನ್ನು ಪೋಷಿಸಲಾಗಿದೆ. ಈ ಮರಿಗಳಿಗೆ ಈಗ ಕೊಂಬು ಮೂಡುವ ಸಮಯವಾದ್ದರಿಂದ, ಅವುಗಳನ್ನು ಕಾಡಿಗೆ ಬಿಡುವುದಕ್ಕೆ ಇದು ಸೂಕ್ತ ಸಮಯವಾಗಿದೆ‘ ಎಂದು ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಪಿ.ಶಿವಕುಮಾರ್ ತಿಳಿಸಿದ್ದಾರೆ.</p>.<p>‘2006ರಿಂದ ಇಲ್ಲಿಯವರೆಗೆ ಮಾನಸ್ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶಕ್ಕೆ 19 ಘೇಂಡಾಮೃಗಗಳನ್ನು ಬಿಟ್ಟಿದ್ದೇವೆ. ಈ ಅರಣ್ಯದಲ್ಲಿ ಒಟ್ಟು 44 ಘೇಂಡಾಮೃಗಗಳಿವೆ‘ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಲಾಘಾಟ್ (ಅಸ್ಸಾಂ): </strong>2019ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ರಕ್ಷಿಸಿದ್ದ ಎರಡು ಹೆಣ್ಣು ಮರಿಗಳು ಸೇರಿದಂತೆ ಘೇಂಡಾಮೃಗದ ಮೂರು ಮರಿಗಳನ್ನು ಶೀಘ್ರದಲ್ಲೇ ಅರಣ್ಯಕ್ಕೆ ಬಿಡಲಾಗುವುದು ಎಂದು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) ತಿಳಿಸಿದೆ.</p>.<p>‘ಕಾಜಿರಂಗ ರಾಷ್ಟ್ರೀಯ ಉದ್ಯಾನದ ಬಳಿ ರಕ್ಷಿಸಿದ ಈ ಮರಿಗಳನ್ನು ಬಾರ್ಪೆಟಾ ಜಿಲ್ಲೆಯ ಮಾನಸ್ ಹುಲಿ ಸಂರಕ್ಷಿತಾ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. ಅರಣ್ಯಕ್ಕೆ ಬಿಡುವವರೆಗೂ ಅವುಗಳನ್ನು ಜಾನುವಾರುಗಳಿರುವ ಆವರಣದಲ್ಲಿ ಇಡಲಾಗುವುದು. ಕಾಡಿಗೆ ಬಿಡುವ ಮೊದಲು ಅವುಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ‘ ಎಂದು ಡಬ್ಲ್ಯುಟಿಐ ಹೇಳಿಕೆಯಲ್ಲಿ ತಿಳಿಸಿದೆ.</p>.<p>ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ಈ ಮರಿಗಳನ್ನು ಪೋಷಿಸಲಾಗಿದೆ. ಈ ಮರಿಗಳಿಗೆ ಈಗ ಕೊಂಬು ಮೂಡುವ ಸಮಯವಾದ್ದರಿಂದ, ಅವುಗಳನ್ನು ಕಾಡಿಗೆ ಬಿಡುವುದಕ್ಕೆ ಇದು ಸೂಕ್ತ ಸಮಯವಾಗಿದೆ‘ ಎಂದು ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಪಿ.ಶಿವಕುಮಾರ್ ತಿಳಿಸಿದ್ದಾರೆ.</p>.<p>‘2006ರಿಂದ ಇಲ್ಲಿಯವರೆಗೆ ಮಾನಸ್ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶಕ್ಕೆ 19 ಘೇಂಡಾಮೃಗಗಳನ್ನು ಬಿಟ್ಟಿದ್ದೇವೆ. ಈ ಅರಣ್ಯದಲ್ಲಿ ಒಟ್ಟು 44 ಘೇಂಡಾಮೃಗಗಳಿವೆ‘ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>