ಅಳಿವಿನಂಚಿನಲ್ಲಿರುವ ಜೀವಿಗಳ ರಕ್ಷಣೆ ಹಾಗೂ ಅಳಿದುಹೋಗಿದ್ದ ಪ್ರಾಣಿಗಳನ್ನು ದೇಶದಲ್ಲಿ ಮರುಪರಿಚಯಿಸುವ ಉದ್ದೇಶದ ಭಾರತ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಆರಂಭಿಕ ಸವಾಲುಗಳನ್ನೂ ಮೀರಿ ಯಶಸ್ವಿಯಾಗಿವೆ. ಪರಿಣಾಮ ಸಿಂಹ, ಘೇಂಡಾಮೃಗ ಹಾಗೂ ಚೀತಾಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿಯಾಗಿದೆ