<p>ಮೈತುಂಬಾ ಪುಟ್ಟಪುಟ್ಟ ಹಣ್ಣುಗಳ ಗೊಂಚಲಿನಿಂದ ತುಂಬಿರುವ ಈ ಮರ ನೋಡಲಷ್ಟೇ ಸೊಗಸಲ್ಲ, ಭವಿಷ್ಯ ಹೇಳುವ ಕೆಲಸವನ್ನೂ ಮಾಡುತ್ತದೆ. ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಕಾಣಸಿಗುತ್ತಿದೆ.</p>.<p>‘ಕಳಗಲ’, ‘ಕಣಗಲ’ ಎಂದು ಕರೆಸಿಕೊಳ್ಳುವ ಈ ಮರ, ರೈತನಿಗೆ ‘ಮಳೆ ಶಕುನ’ವನ್ನು ಹೇಳುತ್ತದೆ. ಈ ಶಕುನದಿಂದಲೇ ತಮ್ಮ ಕೃಷಿ ಕೆಲಸಗಳಿಗೆ ವಾರ್ಷಿಕ ಮಳೆಯ ಅಂದಾಜು ಮಾಡಿಕೊಳ್ಳುತ್ತಾರೆ.</p>.<p>ಅದು ಹೇಗೆ ಈ ಮರ ಭವಿಷ್ಯ ನುಡಿಯುತ್ತದೆ? ಇದರ ಹಿಂದೆ ಒಂದು ಲೆಕ್ಕಾಚಾರ ಅಡಗಿದೆ. ಈ ಮರ ಮೈತುಂಬ ಕಾಯಿ ಹಣ್ಣುಗಳಿಂದ ಕಂಗೊಳಿಸಿದರೆ, ಬೇಸಾಯಕ್ಕೆ ಸಾಕಾಗುವಷ್ಟು ಮಳೆಯಾಗುತ್ತದೆ ಎಂದರ್ಥ. ಬುಡದಲ್ಲಿ ಕಾಯಿಯಾದರೆ ಆರಂಭದಲ್ಲಿ ಮಾತ್ರ ಮಳೆಯಾಗುತ್ತದೆ, ಮರದ ತುದಿಯಲ್ಲಿ ಕಾಯಿಯಾದರೆ ಬೇಸಾಯದ ಕೊನೆಗೆ ಮಳೆಯಾಗುತ್ತದೆಯಂತೆ!</p>.<p>ಸೊಪ್ಪು, ದರಕು, ಕಟ್ಟಿಗೆಗೆಲ್ಲ ಈ ಮರವನ್ನು ಆಶ್ರಯಿಸುವ ರೈತರು, ಮಳೆಗಾಲದಲ್ಲಿ ಸೊಪ್ಪಿಗೆ ಹುಡುಕಿದರೆ, ಬೇಸಿಗೆಯಲ್ಲಿ ಉತ್ಕೃಷ್ಟ ಗೊಬ್ಬರಕ್ಕಾಗಿ ಒಣಗಿದ ಎಲೆಗಳ ರಾಶಿಯನ್ನೇ ಸಂಗ್ರಹಿಸುತ್ತಾರೆ.</p>.<p>ಕಳಗಲ ಮರದ ದರಕಿನ ರಾಶಿ ಹಾಕಿ ಗೋಣಿ ಹಾಕುವುದರ ಮೂಲಕ ಮಳೆಗಾಲಕ್ಕಾಗಿ ಸಂಗ್ರಹಿಸಿಕೊಳ್ಳುತ್ತಾರೆ. ಬಹೂಪಯೋಗಿಯಾಗಿರುವ ಈ ಮರ ನುಡಿಯುವ ಭವಿಷ್ಯ ಕಾಡಿನ ರೈತರಿಗಷ್ಟೇ ಅರ್ಥವಾಗುವಂಥದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈತುಂಬಾ ಪುಟ್ಟಪುಟ್ಟ ಹಣ್ಣುಗಳ ಗೊಂಚಲಿನಿಂದ ತುಂಬಿರುವ ಈ ಮರ ನೋಡಲಷ್ಟೇ ಸೊಗಸಲ್ಲ, ಭವಿಷ್ಯ ಹೇಳುವ ಕೆಲಸವನ್ನೂ ಮಾಡುತ್ತದೆ. ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಕಾಣಸಿಗುತ್ತಿದೆ.</p>.<p>‘ಕಳಗಲ’, ‘ಕಣಗಲ’ ಎಂದು ಕರೆಸಿಕೊಳ್ಳುವ ಈ ಮರ, ರೈತನಿಗೆ ‘ಮಳೆ ಶಕುನ’ವನ್ನು ಹೇಳುತ್ತದೆ. ಈ ಶಕುನದಿಂದಲೇ ತಮ್ಮ ಕೃಷಿ ಕೆಲಸಗಳಿಗೆ ವಾರ್ಷಿಕ ಮಳೆಯ ಅಂದಾಜು ಮಾಡಿಕೊಳ್ಳುತ್ತಾರೆ.</p>.<p>ಅದು ಹೇಗೆ ಈ ಮರ ಭವಿಷ್ಯ ನುಡಿಯುತ್ತದೆ? ಇದರ ಹಿಂದೆ ಒಂದು ಲೆಕ್ಕಾಚಾರ ಅಡಗಿದೆ. ಈ ಮರ ಮೈತುಂಬ ಕಾಯಿ ಹಣ್ಣುಗಳಿಂದ ಕಂಗೊಳಿಸಿದರೆ, ಬೇಸಾಯಕ್ಕೆ ಸಾಕಾಗುವಷ್ಟು ಮಳೆಯಾಗುತ್ತದೆ ಎಂದರ್ಥ. ಬುಡದಲ್ಲಿ ಕಾಯಿಯಾದರೆ ಆರಂಭದಲ್ಲಿ ಮಾತ್ರ ಮಳೆಯಾಗುತ್ತದೆ, ಮರದ ತುದಿಯಲ್ಲಿ ಕಾಯಿಯಾದರೆ ಬೇಸಾಯದ ಕೊನೆಗೆ ಮಳೆಯಾಗುತ್ತದೆಯಂತೆ!</p>.<p>ಸೊಪ್ಪು, ದರಕು, ಕಟ್ಟಿಗೆಗೆಲ್ಲ ಈ ಮರವನ್ನು ಆಶ್ರಯಿಸುವ ರೈತರು, ಮಳೆಗಾಲದಲ್ಲಿ ಸೊಪ್ಪಿಗೆ ಹುಡುಕಿದರೆ, ಬೇಸಿಗೆಯಲ್ಲಿ ಉತ್ಕೃಷ್ಟ ಗೊಬ್ಬರಕ್ಕಾಗಿ ಒಣಗಿದ ಎಲೆಗಳ ರಾಶಿಯನ್ನೇ ಸಂಗ್ರಹಿಸುತ್ತಾರೆ.</p>.<p>ಕಳಗಲ ಮರದ ದರಕಿನ ರಾಶಿ ಹಾಕಿ ಗೋಣಿ ಹಾಕುವುದರ ಮೂಲಕ ಮಳೆಗಾಲಕ್ಕಾಗಿ ಸಂಗ್ರಹಿಸಿಕೊಳ್ಳುತ್ತಾರೆ. ಬಹೂಪಯೋಗಿಯಾಗಿರುವ ಈ ಮರ ನುಡಿಯುವ ಭವಿಷ್ಯ ಕಾಡಿನ ರೈತರಿಗಷ್ಟೇ ಅರ್ಥವಾಗುವಂಥದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>