<p><strong>ಗುಂಡ್ಲುಪೇಟೆ: </strong>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ವರನ್ನು ಕೊಂದಿರುವ ಹುಲಿ ಪತ್ತೆಗೆ, ಅರಣ್ಯ ಅಪರಾಧ ಪತ್ತೆಯಲ್ಲಿ ನಿಷ್ಣಾತವಾಗಿರುವ ಬಂಡೀಪುರದ ಶ್ವಾನ ರಾಣಾನ ಸಹಕಾರವನ್ನು ಅಲ್ಲಿನ ಅರಣ್ಯ ಇಲಾಖೆ ಪಡೆದಿದೆ.</p>.<p>ನೀಲಗಿರಿ ಜಿಲ್ಲೆಯ ಪಂದಲೂರು ತಾಲ್ಲೂಕಿನ ದೇವನ್ ಎಸ್ಟೇಟ್ ಸೇರಿದಂತೆ ಮಸಿನಗುಡಿ ವಲಯದಲ್ಲಿ ಮೂವರನ್ನು ಹುಲಿ ಹತ್ಯೆ ಮಾಡಿತ್ತು. ಕಳೆದ ವರ್ಷ ಮಸಿನಗುಡಿ ಬಳಿ ಗೌರಿ, ಮಾದ ಎಂಬುವರನ್ನು ಹತ್ಯೆ ಮಾಡಿತ್ತು.</p>.<p>ಕಳೆದ ವಾರ ದೇವನ್ ಎಸ್ಟೇಟ್ನ ತೋಟದ ಕೆಲಸಗಾರರೊಬ್ಬರನ್ನು ಹುಲಿ ಕೊಂದಿತ್ತು. ಮದುಮಲೆ ಬಳಿಯ ಸಿಂಗಾರ ವಲಯದ ಬಳಿ ಹಸು ಮೇಯಿಸುತ್ತಿದ್ದ ಬಸವ ಎಂಬ ಆದಿವಾಸಿಯನ್ನು ಕೊಂದಿತ್ತು. ಇದರಿಂದಾಗಿ ಆ ಪ್ರದೇಶದಲ್ಲಿ ಜನರು ಭಯಭೀತರಾಗಿದ್ದು, ಮನುಷ್ಯರನ್ನು ಹತ್ಯೆ ಮಾಡಿರುವ ಹುಲಿಯನ್ನು ಕೊಲ್ಲುವಂತೆ ಪ್ರತಿಭಟನೆ ನಡೆಸಿದ್ದರು.</p>.<p>ತಮಿಳುನಾಡಿನ ಅರಣ್ಯ ಇಲಾಖೆ ಹುಲಿಯ ಸೆರೆಗೆ ಕ್ಯಾಮೆರಾ ಅಳವಡಿಕೆ, ಡ್ರೋನ್ ಬಳಕೆ, ಹೆಜ್ಜೆ ಗುರುತಿನ ಆಧಾರದಲ್ಲಿ ಪತ್ತೆ ಹುಲಿ ಜಾಡನ್ನೂ ಅರಸುತ್ತಿದ್ದರೂ; ವ್ಯಾಘ್ರ ಪತ್ತೆಯಾಗಿಲ್ಲ. ಹೀಗಾಗಿ ರಾಣಾನ ಸಹಾಯವನ್ನು ಅಲ್ಲಿನ ಅಧಿಕಾರಿಗಳು ಕೋರಿದ್ದಾರೆ.</p>.<p>ಜರ್ಮನ್ ಶೆಫರ್ಡ್ ತಳಿಯ ರಾಣಾ ಅರಣ್ಯ ಅಪರಾಧ ಪತ್ತೆಗೆ ಹೆಸರುವಾಸಿ. ನಿವೃತ್ತಿಯ ಅಂಚಿನಲ್ಲಿದ್ದರೂ, ಸೂಕ್ಷ್ಮಮತಿ ರಾಣಾ ಹಲವು ಮಹತ್ವದ ಪ್ರಕರಣ ಭೇದಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡಿದೆ. 2015ರಿಂದ ಕರ್ತವ್ಯದಲ್ಲಿರುವ ರಾಣಾನಸಹಾಯದಿಂದ 50 ಹೆಚ್ಚು ಕ್ಲಿಷ್ಟಕರವಾದ ಪ್ರಕರಣಗಳನ್ನು ಅಧಿಕಾರಿಗಳು ಭೇದಿಸಿದ್ದಾರೆ.</p>.<p>‘ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರ ಮೇಲೆ ದಾಳಿ ಮಾಡಿರುವ ಹುಲಿಯನ್ನು ಪತ್ತೆ ಹಚ್ಚುವುದಕ್ಕಾಗಿ ಅಲ್ಲಿನ ಅಧಿಕಾರಿಗಳು ರಾಣಾನನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ. ಹಾಗಾಗಿ, ಎರಡು ದಿನದ ಹಿಂದೆ ಕಳುಹಿಸಲಾಗಿದೆ’ ಎಂದು ವಲಯ ಅರಣ್ಯ ಅಧಿಕಾರಿ ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ: </strong>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ವರನ್ನು ಕೊಂದಿರುವ ಹುಲಿ ಪತ್ತೆಗೆ, ಅರಣ್ಯ ಅಪರಾಧ ಪತ್ತೆಯಲ್ಲಿ ನಿಷ್ಣಾತವಾಗಿರುವ ಬಂಡೀಪುರದ ಶ್ವಾನ ರಾಣಾನ ಸಹಕಾರವನ್ನು ಅಲ್ಲಿನ ಅರಣ್ಯ ಇಲಾಖೆ ಪಡೆದಿದೆ.</p>.<p>ನೀಲಗಿರಿ ಜಿಲ್ಲೆಯ ಪಂದಲೂರು ತಾಲ್ಲೂಕಿನ ದೇವನ್ ಎಸ್ಟೇಟ್ ಸೇರಿದಂತೆ ಮಸಿನಗುಡಿ ವಲಯದಲ್ಲಿ ಮೂವರನ್ನು ಹುಲಿ ಹತ್ಯೆ ಮಾಡಿತ್ತು. ಕಳೆದ ವರ್ಷ ಮಸಿನಗುಡಿ ಬಳಿ ಗೌರಿ, ಮಾದ ಎಂಬುವರನ್ನು ಹತ್ಯೆ ಮಾಡಿತ್ತು.</p>.<p>ಕಳೆದ ವಾರ ದೇವನ್ ಎಸ್ಟೇಟ್ನ ತೋಟದ ಕೆಲಸಗಾರರೊಬ್ಬರನ್ನು ಹುಲಿ ಕೊಂದಿತ್ತು. ಮದುಮಲೆ ಬಳಿಯ ಸಿಂಗಾರ ವಲಯದ ಬಳಿ ಹಸು ಮೇಯಿಸುತ್ತಿದ್ದ ಬಸವ ಎಂಬ ಆದಿವಾಸಿಯನ್ನು ಕೊಂದಿತ್ತು. ಇದರಿಂದಾಗಿ ಆ ಪ್ರದೇಶದಲ್ಲಿ ಜನರು ಭಯಭೀತರಾಗಿದ್ದು, ಮನುಷ್ಯರನ್ನು ಹತ್ಯೆ ಮಾಡಿರುವ ಹುಲಿಯನ್ನು ಕೊಲ್ಲುವಂತೆ ಪ್ರತಿಭಟನೆ ನಡೆಸಿದ್ದರು.</p>.<p>ತಮಿಳುನಾಡಿನ ಅರಣ್ಯ ಇಲಾಖೆ ಹುಲಿಯ ಸೆರೆಗೆ ಕ್ಯಾಮೆರಾ ಅಳವಡಿಕೆ, ಡ್ರೋನ್ ಬಳಕೆ, ಹೆಜ್ಜೆ ಗುರುತಿನ ಆಧಾರದಲ್ಲಿ ಪತ್ತೆ ಹುಲಿ ಜಾಡನ್ನೂ ಅರಸುತ್ತಿದ್ದರೂ; ವ್ಯಾಘ್ರ ಪತ್ತೆಯಾಗಿಲ್ಲ. ಹೀಗಾಗಿ ರಾಣಾನ ಸಹಾಯವನ್ನು ಅಲ್ಲಿನ ಅಧಿಕಾರಿಗಳು ಕೋರಿದ್ದಾರೆ.</p>.<p>ಜರ್ಮನ್ ಶೆಫರ್ಡ್ ತಳಿಯ ರಾಣಾ ಅರಣ್ಯ ಅಪರಾಧ ಪತ್ತೆಗೆ ಹೆಸರುವಾಸಿ. ನಿವೃತ್ತಿಯ ಅಂಚಿನಲ್ಲಿದ್ದರೂ, ಸೂಕ್ಷ್ಮಮತಿ ರಾಣಾ ಹಲವು ಮಹತ್ವದ ಪ್ರಕರಣ ಭೇದಿಸಲು ಅರಣ್ಯ ಇಲಾಖೆಗೆ ಸಹಾಯ ಮಾಡಿದೆ. 2015ರಿಂದ ಕರ್ತವ್ಯದಲ್ಲಿರುವ ರಾಣಾನಸಹಾಯದಿಂದ 50 ಹೆಚ್ಚು ಕ್ಲಿಷ್ಟಕರವಾದ ಪ್ರಕರಣಗಳನ್ನು ಅಧಿಕಾರಿಗಳು ಭೇದಿಸಿದ್ದಾರೆ.</p>.<p>‘ಮದುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರ ಮೇಲೆ ದಾಳಿ ಮಾಡಿರುವ ಹುಲಿಯನ್ನು ಪತ್ತೆ ಹಚ್ಚುವುದಕ್ಕಾಗಿ ಅಲ್ಲಿನ ಅಧಿಕಾರಿಗಳು ರಾಣಾನನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ. ಹಾಗಾಗಿ, ಎರಡು ದಿನದ ಹಿಂದೆ ಕಳುಹಿಸಲಾಗಿದೆ’ ಎಂದು ವಲಯ ಅರಣ್ಯ ಅಧಿಕಾರಿ ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>