<p class="bodytext"><strong>ನವದೆಹಲಿ: </strong>ಹವಾಮಾನ ಬದಲಾವಣೆ ಮಿತಿ, ಜೀವವೈವಿಧ್ಯ ಪುನರ್ಸ್ಥಾಪನೆ ಮತ್ತು ಆರೋಗ್ಯ ರಕ್ಷಣೆಗೆ ವಿಶ್ವ ನಾಯಕರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಿ ಲ್ಯಾನ್ಸೆಟ್ ಮತ್ತು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾ ಸೇರಿದಂತೆ 220ಕ್ಕೂ ಹೆಚ್ಚು ಪ್ರಮುಖ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಸಂಪಾದಕೀಯ ಹೇಳಿದೆ.</p>.<p class="bodytext">ಲಂಡನ್ನ ಗ್ಲ್ಯಾಸ್ಗೋದಲ್ಲಿ ನವೆಂಬರ್ನಲ್ಲಿ ಆಯೋಜನೆಗೊಂಡಿರುವ ಸಿಒಪಿ26 ಹವಾಮಾನ ಸಮ್ಮೇಳನದ ಮೊದಲು ನಡೆಯುತ್ತಿರುವ ಕೊನೆಯ ಅಂತರರಾಷ್ಟ್ರೀಯ ಸಭೆಗಳಲ್ಲಿ ಒಂದಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮುಂಚಿತವಾಗಿ ಈ ಸಂಪಾದಕೀಯ ಪ್ರಕಟಿಸಲಾಗಿದೆ.</p>.<p class="bodytext">ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಗಿರುವಂತೆ ಮತ್ತು ಜೀವವೈವಿಧ್ಯ ಪುನರ್ ಸ್ಥಾಪಿಸಲು ವಿಶ್ವದ ನಾಯಕರು ಸಮರ್ಪಕ ಕ್ರಮ ಕೈಗೊಳ್ಳದಿರುವುದು ಭವಿಷ್ಯದಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆಯೊಡ್ಡಲಿದೆ ಎಂದು ಸಂಪಾದಕೀಯ ಎಚ್ಚರಿಸಿದೆ.</p>.<p class="bodytext">ಬದಲಾಗುತ್ತಿರುವ ಹವಾಗುಣವು ಮನುಕುಲಕ್ಕೆ ಅನೇಕ ರೀತಿಯಲ್ಲಿ ಅಪಾಯ ಉಂಟುಮಾಡುತ್ತಿದೆ. ಆರೋಗ್ಯ ರಕ್ಷಣೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆ ಮಿತಿಗೊಳಿಸಲು ಕೋವಿಡ್ 19 ಸಾಂಕ್ರಾಮಿಕ ಕೊನೆಗೊಳ್ಳಲೆಂದು ಕಾಯುತ್ತಾ ಕೂರುವಂತಿಲ್ಲ. ತಕ್ಷಣದ ಕ್ರಮದ ಅವಶ್ಯಕತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.</p>.<p>‘ಜಗತ್ತಿನಾದ್ಯಂತದ ಹವಾಮಾನದ ವೈಪರೀತ್ಯದ ಇತ್ತೀಚಿನ ಉದಾಹರಣೆಗಳು ಹವಾಮಾನ ಬದಲಾವಣೆಯ ವಾಸ್ತವತೆಯನ್ನು ಕೇಂದ್ರೀಕರಿಸಿದೆ’ ಎಂದು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದ ಮುಖ್ಯ ಸಂಪಾದಕ ಮತ್ತು ಸಂಪಾದಕೀಯದ ಸಹ ಲೇಖಕರಲ್ಲಿ ಒಬ್ಬರಾದ ಪ್ಯೂಶ್ ಸಾಹ್ನಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ನವದೆಹಲಿ: </strong>ಹವಾಮಾನ ಬದಲಾವಣೆ ಮಿತಿ, ಜೀವವೈವಿಧ್ಯ ಪುನರ್ಸ್ಥಾಪನೆ ಮತ್ತು ಆರೋಗ್ಯ ರಕ್ಷಣೆಗೆ ವಿಶ್ವ ನಾಯಕರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಿ ಲ್ಯಾನ್ಸೆಟ್ ಮತ್ತು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾ ಸೇರಿದಂತೆ 220ಕ್ಕೂ ಹೆಚ್ಚು ಪ್ರಮುಖ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಸಂಪಾದಕೀಯ ಹೇಳಿದೆ.</p>.<p class="bodytext">ಲಂಡನ್ನ ಗ್ಲ್ಯಾಸ್ಗೋದಲ್ಲಿ ನವೆಂಬರ್ನಲ್ಲಿ ಆಯೋಜನೆಗೊಂಡಿರುವ ಸಿಒಪಿ26 ಹವಾಮಾನ ಸಮ್ಮೇಳನದ ಮೊದಲು ನಡೆಯುತ್ತಿರುವ ಕೊನೆಯ ಅಂತರರಾಷ್ಟ್ರೀಯ ಸಭೆಗಳಲ್ಲಿ ಒಂದಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮುಂಚಿತವಾಗಿ ಈ ಸಂಪಾದಕೀಯ ಪ್ರಕಟಿಸಲಾಗಿದೆ.</p>.<p class="bodytext">ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಗಿರುವಂತೆ ಮತ್ತು ಜೀವವೈವಿಧ್ಯ ಪುನರ್ ಸ್ಥಾಪಿಸಲು ವಿಶ್ವದ ನಾಯಕರು ಸಮರ್ಪಕ ಕ್ರಮ ಕೈಗೊಳ್ಳದಿರುವುದು ಭವಿಷ್ಯದಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆಯೊಡ್ಡಲಿದೆ ಎಂದು ಸಂಪಾದಕೀಯ ಎಚ್ಚರಿಸಿದೆ.</p>.<p class="bodytext">ಬದಲಾಗುತ್ತಿರುವ ಹವಾಗುಣವು ಮನುಕುಲಕ್ಕೆ ಅನೇಕ ರೀತಿಯಲ್ಲಿ ಅಪಾಯ ಉಂಟುಮಾಡುತ್ತಿದೆ. ಆರೋಗ್ಯ ರಕ್ಷಣೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆ ಮಿತಿಗೊಳಿಸಲು ಕೋವಿಡ್ 19 ಸಾಂಕ್ರಾಮಿಕ ಕೊನೆಗೊಳ್ಳಲೆಂದು ಕಾಯುತ್ತಾ ಕೂರುವಂತಿಲ್ಲ. ತಕ್ಷಣದ ಕ್ರಮದ ಅವಶ್ಯಕತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.</p>.<p>‘ಜಗತ್ತಿನಾದ್ಯಂತದ ಹವಾಮಾನದ ವೈಪರೀತ್ಯದ ಇತ್ತೀಚಿನ ಉದಾಹರಣೆಗಳು ಹವಾಮಾನ ಬದಲಾವಣೆಯ ವಾಸ್ತವತೆಯನ್ನು ಕೇಂದ್ರೀಕರಿಸಿದೆ’ ಎಂದು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದ ಮುಖ್ಯ ಸಂಪಾದಕ ಮತ್ತು ಸಂಪಾದಕೀಯದ ಸಹ ಲೇಖಕರಲ್ಲಿ ಒಬ್ಬರಾದ ಪ್ಯೂಶ್ ಸಾಹ್ನಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>