ಹೇರಳ ವಿಟಮಿನ್, ಕಬ್ಬಿಣದ ಅಂಶಗಳಿರುತ್ತಿದ್ದ ಸೊಪ್ಪು, ತರಕಾರಿಯನ್ನು ಬೆಳೆಯುವ ರೈತರ ಸಂಖ್ಯೆ ಇಳಿಕೆಯಾಗುತ್ತಿರುವ ಬಗ್ಗೆ 2018–19ರಲ್ಲಿ ಪರಿಸರ ತಜ್ಞ ಡಾ.ಕೇಶವ ಕೊರ್ಸೆ ಕಾಲೇಜು ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಉತ್ತರ ಕನ್ನಡ, ಶಿವಮೊಗ್ಗದ 8 ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಿದ್ದರು. ಈ ವೇಳೆ ಪೌಷ್ಟಿಕಾಂಶ ಒದಗಿಸುತ್ತಿದ್ದ ತರಕಾರಿಗಳ ಬೆಳೆಯುವಿಕೆ ಪ್ರಮಾಣ ಶೇ.40ಕ್ಕಿಂತ ಕಡಿಮೆ ಆಗಿದ್ದು ಬೆಳಕಿಗೆ ಬಂದಿತ್ತು. ಒಂದು ಕಾಲದಲ್ಲಿ ಸ್ವಾವಲಂಬಿಗಳಾಗಿದ್ದ ಹಳ್ಳಿ ಜನ ಒಂದೂವರೆ ದಶಕದಿಂದ ಈಚೆಗೆ ತರಕಾರಿ ಖರೀದಿಗೆ ಹತ್ತು ಪಟ್ಟು ಹೆಚ್ಚು ವೆಚ್ಚ ಮಾಡುವದು ಸ್ಪಷ್ಟವಾಗಿತ್ತು.