ಬುಧವಾರ, 4 ಮಾರ್ಚ್ 2026
×
ADVERTISEMENT
ಆಳ– ಅಗಲ: ಇರಾನ್‌ಗೆ ದೂರ, ಇಸ್ರೇಲ್‌ಗೆ ಹತ್ತಿರ
ಆಳ– ಅಗಲ: ಇರಾನ್‌ಗೆ ದೂರ, ಇಸ್ರೇಲ್‌ಗೆ ಹತ್ತಿರ
ಬದಲಾದ ಭಾರತದ ವಿದೇಶಾಂಗ ನೀತಿ; ಅಮೆರಿಕದೆಡೆಗೆ ಹೆಚ್ಚಾದ ಒಲವು
ಫಾಲೋ ಮಾಡಿ
Published 3 ಮಾರ್ಚ್ 2026, 23:58 IST
Last Updated 3 ಮಾರ್ಚ್ 2026, 23:58 IST
Comments
ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡುವ ಕೆಲವೇ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಯುದ್ಧ ಆರಂಭದ ನಂತರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಇರಾನ್‌ ದಾಳಿಗೆ ತುತ್ತಾಗಿರುವ ಕೊಲ್ಲಿ ರಾಷ್ಟ್ರಗಳ ಮುಖ್ಯಸ್ಥರೊಂದಿಗೂ ಅವರು ಮಾತನಾಡಿದ್ದಾರೆ. ಆದರೆ, ಯುದ್ಧದಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮತ್ತು ಅವರ ಪತ್ನಿ ಹತ್ಯೆಗೀಡಾದರೂ, ಇದುವರೆಗೂ ಅದರ ಬಗ್ಗೆ ಸಂತಾಪ ಸೂಚಿಸಿಲ್ಲ; ಹತ್ಯೆಯನ್ನು ಖಂಡಿಸಿಲ್ಲ. ಇರಾನ್‌ ಪರವಾಗಿ ಮಾತನಾಡಿಲ್ಲ. ಬದಲಾಗುತ್ತಿರುವ ಜಾಗತಿಕ ರಾಜಕಾರಣದಲ್ಲಿ ಭಾರತ ಯಾರ ಪರ ಎನ್ನುವುದನ್ನೂ, ಪಶ್ಚಿಮ ಏಷ್ಯಾದ ಹಲವು ರಾಷ್ಟ್ರಗಳ ಕುರಿತ ದೇಶದ ವಿದೇಶಾಂಗ ನೀತಿ ಬದಲಾಗುತ್ತಿರುವುದನ್ನೂ ಇದು ಸಂಕೇತಿಸುತ್ತಿದೆ
ಅತೃಪ್ತಿ ತಂದಿದ್ದ ಹೇಳಿಕೆ
2017ರಿಂದ 2024ರ ನಡುವೆ ಭಾರತದಲ್ಲಿ ನಡೆದ ಕೆಲವು ಬೆಳವಣಿಗೆಗಳ ಕುರಿತಾಗಿ ಇರಾನ್‌ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಅವರು ನೀಡಿದ್ದ ಹೇಳಿಕೆಗಳು ಆಡಳಿತಾರೂಢ ಎನ್‌ಡಿಎ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದ್ದವು. ಕಾಶ್ಮೀರ ವಿಚಾರ, 370ನೇ ವಿಧಿ ರದ್ದು, 2020ರಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರ, ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರವಾಗಿ ಖಮೇನಿ ಅವರು ಕೇಂದ್ರ ಸರ್ಕಾರದ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಭಾರತವು ಇರಾನಿನ ರಾಯಭಾರಿಯನ್ನು ಕರೆದು ತನ್ನ ಆಕ್ಷೇಪ ದಾಖಲಿಸಿತ್ತು.
ಆಧಾರ: ರಾಯಿಟರ್ಸ್‌, ವಾಣಿಜ್ಯ ಸಚಿವಾಲಯದ ವೆಬ್‌ಸೈಟ್‌, ಸೌತ್ ಏಷ್ಯಾ ಜರ್ನಲ್, ಫಾರಿನ್ ಪಾಲಿಸಿ.ಕಾಮ್, ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT