ಕರ್ನೂಲ್ ಬಸ್ ದುರಂತ ಮತ್ತು ಅದರ ಹಿಂದೆಮುಂದೆ ನಡೆದ ಕೆಲವು ಅಪಘಾತಗಳು ಬಸ್ ಪ್ರಯಾಣದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿವೆ. ಹೆಚ್ಚಿನ ಅಪಘಾತಗಳಿಗೆ ನಿಯಮಗಳನ್ನು ಪಾಲಿಸದ ಬಸ್ ಸಿಬ್ಬಂದಿ ಮತ್ತು ಅವುಗಳ ಸ್ಥಿತಿಗತಿ ಸರಿಯಾಗಿ ನಿಭಾಯಿಸದ ಅಧಿಕಾರಿಗಳು ಕಾರಣಕರ್ತರಾಗಿದ್ದಾರೆ. ಹಲವು ದೇಶಗಳಲ್ಲಿ ಬಸ್ ಪ್ರಯಾಣವು ಅತ್ಯಂತ ಸುರಕ್ಷಿತ ಎಂದು ಹೆಸರಾಗಿದ್ದರೂ ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ.