ಪಾರಂಪರಿಕ ಹಿರಿಮೆಯ ಜೊತೆಗೆ ಶ್ರೀಮಂತಿಕೆಯ ಗರಿಮೆ ಹೊಂದಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆಎಸ್ಐಸಿ) ರೇಷ್ಮೆ ನೂಲು ತೆಗೆಯುವ ಘಟಕ ಮೈಸೂರು ಜಿಲ್ಲೆಯ ತಿ.ನರಸೀಪುರದ ಕಬಿನಿ ನದಿಯ ದಂಡೆಯಲ್ಲಿದೆ. ಕ್ರೀಡಾಂಗಣ ನಿರ್ಮಾಣದ ಉದ್ದೇಶಕ್ಕಾಗಿ ಅದರ ಆವರಣದ ಅರ್ಧದಷ್ಟು ಭಾಗವನ್ನು ಜಿಲ್ಲಾಡಳಿತವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾಯಿಸಿದೆ. ಸರ್ಕಾರದ ಈ ಕ್ರಮದಿಂದ ಐತಿಹಾಸಿಕ ಕಾರ್ಖಾನೆ ಮುಚ್ಚುವ ಆತಂಕ ಎದುರಾಗಿದೆ. ಇದು ರೇಷ್ಮೆ ಸೀರೆ ತಯಾರಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ‘ಮೈಸೂರು ರೇಷ್ಮೆ ಸೀರೆ’ ಎಂಬ ಬ್ರ್ಯಾಂಡ್ನ ಹೊಳಪು ಮಾಸುವ ಕಳವಳ ವ್ಯಕ್ತವಾಗಿದೆ.
ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಸಂಗ್ರಹಿಸಿರುವ ಕಲ್ಲಿದ್ದಲು