ಪ್ರಯಾಣಿಕರಿದ್ದ ಬಸ್ ಹೊರಡುವ ಮಾರ್ಗದಲ್ಲಿ ರಸ್ತೆ ಮೇಲೆ ಬೊಲೆರೊ ವಾಹನ ನಿಲ್ಲಿಸಿದ್ದರಿಂದ ಬಸ್ ಚಾಲಕ ಪೃಥ್ವಿರಾಜ ಘೀರಾಸಿಂಗ್ ವಾಹನವನ್ನು ಬದಿಗೆ ನಿಲ್ಲಿಸುವಂತೆ ವಾಹನದ ಯುವಕರಿಗೆ ಕೋರಿದ್ದಾರೆ. ಪಾನಿ ಪುರಿ ತಿನ್ನುತ್ತಿದ್ದ ಯುವಕರು ಚಾಲಕನ ಮಾತಿಗೆ ಸ್ಪಂದಿಸಿಲ್ಲ. ಆಗ ಮತ್ತೆ ಚಾಲಕ ಮನವಿ ಮಾಡಿದ್ದಾರೆ. ಆದರೂ ವಾಹನ ತೆಗೆಯದೇ ಬೊಲೆರೊದಲ್ಲಿದ್ದ ಯುವಕರು, ನಮಗೆ ವಾಹನ ತೆಗೆಯಲು ಹೇಳುವ ನೀನ್ಯಾರು ಎಂದು ಚಾಲಕನನ್ನು ಎಳೆದಾಡಿ ಒದ್ದು ಪುಂಡಾಟಿಕೆ ಮೆರೆದಿದ್ದಾರೆ.